Friday, June 20, 2025
Friday, June 20, 2025

Chamber of Commerce Shivamogga ರಕ್ತದಾನಕ್ಕಿಂತ ಬೇರೆ ಶ್ರೇಷ್ಠ ದಾನ ಮತ್ತೊಂದಿಲ್ಲ: ಜಿ ವಿಜಯಕುಮಾರ್

Date:

Chamber of Commerce Shivamogga ಮಾನವೀಯ ಸೇವೆಗಳಲ್ಲಿ ರಕ್ತದಾನವು ಒಂದು ಪವಿತ್ರವಾದ ದಾನ ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ ಎಂದು ಸ್ವಯಂ ಪ್ರೇರಿತ ರಕ್ತದಾನಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ ವಿಜಯಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದರು. ರಕ್ತದಾನ ಮಾಡುವುದರಿಂದ ಆಯಸ್ಸು ವೃದ್ಧಿ ಜೊತೆಗೆ ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ರಕ್ತದಾನದಿಂದ ಶೇಕಡ 80 ಪರ್ಸೆಂಟ್ ಹೃದಯ ಘಾತ ಕಡಿಮೆಯಾಗುತ್ತದೆ ಹಾಗೂ ದೇಹದಲ್ಲಿರುವ ಕೊಬ್ಬಿನ ಅಂಶ ಹೊರ ಹೋಗುವುದರಿಂದ ನಾವು ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಬಿಎಸ್ಎ ಹರ್ಕ್ಯುಲಸ್ ಸೈಕಲ್ ಸಂಸ್ಥೆ ಹಾಗೂ ಮೂರ್ತಿ ಸೈಕಲ್ ಅಂಡ್ ಫಿಟ್ನೆಸ್ ಸೆಂಟರ್ ವತಿಯಿಂದ ಮತ್ತು ವಂದನ ಬೇಕರಿಯವರ ಸಹಕಾರದೊಂದಿಗೆ ಆಯೋಜಿಸಲಾದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. Chamber of Commerce Shivamogga ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡುವುದರ ಜೊತೆಗೆ ಬೇರೆಯವರನ್ನು ಸಹ ಪ್ರೇರೇಪಿಸಬೇಕು ಎಷ್ಟೋ ಬಾರಿ ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಶಿವಮೊಗ್ಗ ಸೈಕಲ್ ಕ್ಲಬ್ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಒಂದು ಮಾದರಿ ಸಂಸ್ಥೆಯಾಗಿದೆ ಸಾಕಷ್ಟು ಜನ ಗಿನ್ನಿಸ್ ಲಿಮ್ಕಾ ದಾಖಲೆ ಪ್ರಶಸ್ತಿ ಪುರಸ್ಕೃತರು ಈ ಸಂಸ್ಥೆಯಲ್ಲಿ ದ್ದಾರೆ ತಮ್ಮ ವೃತ್ತಿಯ ಜೊತೆಗೆ ರಕ್ತದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದು ನಿಜಕ್ಕೂ ಹೆಮ್ಮೆ ಎಂದು ನುಡಿದರು. ಡಾ. ಶೇಖರ್ ಗೌಳೆರ್ ಮಾತನಾಡುತ್ತಾ ದಾನ ಮಾಡಿದ ರಕ್ತ ದುರುಪಯೋಗವಾಗಬಾರದು ನಾವು ಮಾಡಿದ ರಕ್ತದಾನದಿಂದ ಇಂದು ಮೂರು ಜನರ ಪ್ರಾಣವನ್ನು ಉಳಿಸಬಹುದಾಗಿದೆ ಮನುಕುಲದ ಒಂದು ಶ್ರೇಷ್ಠವಾದ ದಾನ ರಕ್ತದಾನ ಎಲ್ಲರೂ ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ತಿ ಸೈಕಲ್ ಅಂಡ್ ಫಿಟ್ನೆಸ್ ಸೆಂಟರ್ ನ. ಮಾಲೀಕರು ಶಿವಮೊಗ್ಗ ಸೈಕಲ್ ಕ್ಲಬ್ಬಿನ ನಿರ್ದೇಶಕರಾದ ನರಸಿಂಹ ಮೂರ್ತಿ ಅವರ ವಹಿಸಿ ಮಾತನಾಡುತ್ತ ಪ್ರತಿ ವರ್ಷ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ನಮ್ಮ ಸೈಕಲ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರವನ್ನು ಹಲವಾರು ವರ್ಷಗಳಿಂದ ಆಯೋಜಿಸುತ್ತಾ ಬಂದಿದ್ದೇವೆ. ನಾವು ರಕ್ತದಾನ ಮಾಡುವುದರ ಜೊತೆಗೆ ನಮ್ಮ ಸ್ನೇಹಿತರನ್ನು ಕರೆತಂದು ರಕ್ತದಾನ ಮಾಡೋಣ ಎಂದು ರಕ್ತದಾನ ಮಾಡಿದ ಎಲ್ಲಾ ಸೈಕಲ್ ಸವಾರರಿಗೆ ಪ್ರಮಾಣ ಪತ್ರ ನೆನಪಿನ ಕಾಣಿಕೆ ಹಾಗೂ ಸಿಹಿ ತಿಂಡಿಯ ಪ್ಯಾಕೆಟ್ ಅನ್ನು ನೀಡಿ ಗೌರವಿಸಿದರು. ವಂದನಾ ಬೇಕರಿಯ ಸಿಬ್ಬಂದಿ ವರ್ಗದವರು ಸುಮಾರು ಹತ್ತು ಜನರ ತಂಡ ರಕ್ತದಾನ ಮಾಡಿ ಮಾನವೀಯತೆಯನ್ನು ಮೆರೆದರು ರಕ್ತದಾನ ಶಿಬಿರದಲ್ಲಿ ಸೈಕಲ್ ಕ್ಲಬ್ಬಿನ ಹರೀಶ್ ಪಟೇಲ್. ನರಸಿಂಹಮೂರ್ತಿ. ಭಾಸ್ಕರ್. ಚಂದ್ರಶೇಖರ್ ಏಕೆ ನಾಗರಾಜ್ ನೇಹಾ ಮಂಜು
ರಜನಿಕಾಂತ್. ವಾಗೀಶ್ ವಿಜಯಕುಮಾರ್ ಗಿರೀಶ್ ಕಾಮತ್ ಹಾಗೂ ಸದಸ್ಯರು ಉಪಸ್ಥಿತರಿದ್ದರು 40ಕ್ಕೂ ಹೆಚ್ಚು ಜನ ಸೈಕಲ್ ಸವಾರರು ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...