Monday, December 15, 2025
Monday, December 15, 2025

Shivamogga Bicycle Association ಸೈಕಲ್ ಸವಾರಿಯಿಂದ ಮನೋದೈಹಿಕ ದೃಢತೆ, ಉಲ್ಲಾಸ – ನರಸಿಂಹಮೂರ್ತಿ

Date:

Shivamogga Bicycle Association ಸೈಕಲ್ ಕಂಡು ಹಿಡಿದು ಇಂದಿಗೆ 2೦8 ವರ್ಷ ಗಳಾಗಿವೆ. ಸೈಕಲ್ ಪರಿಸರ ಸ್ನೇಹಿ ವಾಹನ.ಅತ್ಯಂತ ಹಗುರ ಕಡಿಮೆ ಖರ್ಚಿನ ಚಿಕ್ಕ ಹಾದಿಯಲ್ಲಿ ಓಡಿಸಬಹುದಾದ ಈ ವಾಹನ ಎಲ್ಲರ ನೆಚ್ಚಿನ ಸಾಧನ. ಇಂಧನ ಇಲ್ಲ ಮಾಲಿನ್ಯ ಇಲ್ಲ ಅಪಘಾತವೂ ಇಲ್ಲ. ಫ್ರಾನ್ಸ್ ಇಟಲಿ ಅಮೆರಿಕ ಬೆಲ್ಜಿಯಂ ಇಂಗ್ಲೆಂಡ್ ನೆದರ್ಲೆಂಡ್ ಮುಂತಾದ ದೇಶಗಳಲ್ಲಿ ಎಲ್ಲರೂ ಸೈಕಲ್ ಬಳಸುತ್ತಾರೆ. ಭಾರತದಲ್ಲಿಯೂ ಸೈಕಲ್ ಪರ್ವ ಇದೀಗ ಆರಂಭ ವಾಗಿದೆ. ಶಿವಮೊಗ್ಗದ ಸೈಕಲ್ ಸಂಘ ಅದರ ನಿರಂತರ ಚಟುವಟಿಕೆ ಇದಕ್ಕೊಂದು ತಾಜಾ ಉದಾಹರಣೆ. ಎಂದು ಮೂರ್ತಿ ಸೈಕಲ್ ಮತ್ತುಫಿಟ್ನೆಸ್ ಮಾಲೀಕರು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ಬಿನ ನಿರ್ದೇಶಕರಾದ ನರಸಿಂಹಮೂರ್ತಿ ಅವರು ಅಭಿಮತ ವ್ಯಕ್ತಪಡಿಸಿದರು. Shivamogga Bicycle Association ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಶಿವಮೊಗ್ಗ ಸೈಕಲ್ ಕ್ಲಬ್ ಮೂರ್ತಿ ಫಿಟ್ನೆಸ್ ಮತ್ತು ಸೈಕಲ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಸಾರ್ವಜನಿಕ ಸೈಕಲ್ ಜಾಗೃತಿ ಜಾತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾಕ್ಟರ್ ಶೇಖರ್ ಗೌಳೆ ರವರು ಸೈಕಲ್ ಬಳಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಯಾವುದೇ ಕಾಯಿಲೆ ನಮ್ಮ ಬಳಿ ಸುಳಿಯುವುದಿಲ್ಲ ಈಗಾಗಲೇ ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಹಲವಾರು ಆರೋಗ್ಯ ಮಾಹಿತಿ ಹಾಗೂ ಜಾಗೃತಿ ಜಾತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದ್ರ ಮುಖಾಂತರ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸೈಕಲ್ ಪ್ರವಾಸಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ನುಡಿದರು. ಈ ಜಾಗೃತಿ ಜಾತಾ ವಿನೋಬನಗರ ಮೂರ್ತಿ ಫಿಟ್ನೆಸ್ ನಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಹೊರವಲಯಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿತು ಕಾರ್ಯಕ್ರಮದಲ್ಲಿ ರೋಟರಿ ಜಿ ವಿಜಯಕುಮಾರ್. ಹರೀಶ್ ಕ್ಲಬ್ಬಿನ ಕಾರ್ಯದರ್ಶಿ ಕಾಮತ್ ಮನೋಜ್ ಹಾಗೂ ಸೈಕಲ್ ಕ್ಲಬ್ಬಿನ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...