World Environment Day ಭದ್ರಾವತಿ ತಾಲ್ಲೂಕಿನ ಹುಣಸೇಕಟ್ಟೆ ಜಂಕ್ಷನ್ ನಲ್ಲಿ ಇಂದು ಪರಿಸರ ಶಿವರಾಂ ನೇತೃತ್ವದಲ್ಲಿ ಗ್ರಾಮದ ಮುಖ್ಯರಸ್ತೆಯಲ್ಲಿ ಸಸಿಗಳನ್ನು ನೆಡುವ ಮೂಲಕ ವಿನೂತನವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಅರಣ್ಯ ಉಪ ಸಂರಕ್ಷಣಾಧಿಕಾರಿ ಅಶಿಶ್ ರೆಡ್ಡಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಪ್ರತಿ ಗ್ರಾಮಗಳಲ್ಲಿಯೂ ಇಂತಹ ಮನೋಸ್ಥಿತಿ ಬೆಳೆಯಬೇಕಿದೆ. ಕಾಡು ಬೆಳೆಸಿ ನಾಡು ಉಳಿಸುವ ಜೊತೆಗೆ ನಮ್ಮ ನಮ್ಮ ಊರುಗಳಲ್ಲಿ ಇಂತಹ ಮರಗಳನ್ನು ಬೆಳೆಸುವ ಕೆಲಸ ಮಾಡಿದರೆ ಪ್ರಕೃತಿಯು ನಮಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ. ಮುಂದಿನ ಪೀಳಿಗೆಗೆ ಇದು ಲಾಭದಾಯಕವಾಗಿದೆ ಎಂದು ಹೇಳಿದರು.
World Environment Day ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಾರ್ವತಮ್ಮ, ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಎಂ ಸಿಂಧು, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಪರಿಸರ ಶಿವರಾಂ, ಡಾ. ತೇಜಸ್, ನರೇಂದ್ರ ಕಾರೆಹಳ್ಳಿ, ಉಪನ್ಯಾಸಕ ಮಂಜುನಾಥ್ ಎಸ್, ಕುಮಾರಿ ಅಂಕಿತಾ ಮೊದಲಾದವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸರಳ ಹಾಗೂ ವಿನೂತನವಾದ ನಡೆದ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ.
World Environment Day ಹುಣಸೇಕಟ್ಟೆ ಜಂಕ್ಷನ್ ನಲ್ಲಿ ವಿಶ್ವ ಪರಿಸರ ದಿನದ ವಿನೂತನ ಆಚರಣೆ
Date: