Wednesday, September 9, 2026
Wednesday, September 9, 2026

S.N.Chennabasappa ಶಾಸಕರ ಅಮಾನತ್ತು ಹಿಂಪಡೆದಿರುವುದು ಸ್ವಾಗತಾರ್ಹ- ಶಾಸಕ ಚನ್ನಬಸಪ್ಪ

Date:

S.N.Chennabasappa ಶಿವಮೊಗ್ಗದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಶಾಸಕರ ಅಮಾನತ್ತು ವಾಪಸ್ ಪಡೆದಿರುವುದು ಸ್ವಾಗತಾರ್ಹ ಎಂದರು.

ಅಧಿವೇಶನದ ಕೊನೆಯ ದಿನ ನಾವು ನೋವಿನಿಂದ ಒಬ್ಬ ಮಂತ್ರಿಗಳು ಅಭಿಪ್ರಾಯ ಪ್ರಕಟ ಮಾಡಿದಾಗ ನಾವು ಚರ್ಚೆ ಮಾಡಿದ್ದೆವು.ಆಗ ನಾವು 18 ಜನ ಶಾಸಕರು ಅದನ್ನು ಖಂಡಿಸಿದ್ದೆವು
ಸಭಾಧ್ಯಕ್ಷರ ಪೀಠಕ್ಕೆ ಅವಮಾನ ನಾವು ಮಾಡಿದ್ದೆವು ಎಂಬ ಭಾವನೆ ಉಂಟಾಗಿತ್ತು. ಸ್ಪೀಕರ್ ಗೆ ನೋವಾಗಿದೆ ಎಂದು ಅವರು ಅಂದು ಭಾವಿಸಿದ್ದರು.ಆದರೆ ನಾವು ವಿಷಯಾಧಾರಿತವಾಗಿ ನಾವು ವಿರೋಧಿಸಿದ್ದೆವು.

ಈ ಸಲಹೆ ನೀಡಿದ್ದಕ್ಕೆ ಅಮಾನತ್ತು ಆದೇಶ ವಾಪಾಸ್ ಪಡೆದಿದ್ದೆವೆ ಎಂದು ಸಭಾಧ್ಯಕ್ಷರು ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರು ಮತ್ತು ಅನೇಕರು ಸಭಾಧ್ಯಕ್ಷರ ಬಳಿ ತೆರಳಿ ಈ ಕುರಿತು ಸಲಹೆ ನೀಡಿದ್ದಾರೆ. ಆದರೆ ಹನಿಟ್ರ್ಯಾಪ್ ವಿಚಾರ ಹಾಗೆಯೇ ಉಳಿದಿದೆ.
ಹನಿಟ್ರ್ಯಾಪ್ ವಿಚಾರದ ಬಗ್ಗೆ ಸತ್ಯ ಸಂಗತಿ ಹೊರಗೆ ಬಾರದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಂತಾಗಿದೆ.

S.N.Chennabasappa ಸಹಕಾರ ಸಚಿವ ರಾಜಣ್ಣ ಬಹಳ ನೊಂದು ಆ ವಿಷಯ ಪ್ರಸ್ತಾಪಿಸಿದ್ದರು. ಹನಿಟ್ರ್ಯಾಪ್ ಮಾಡುವವರ ಪರ ಮಾತನಾಡುವಂತಿದ್ದ ಸನ್ನಿವೇಶದ ಹಿನ್ನೆಲೆಯಲ್ಲಿ ನಾವು ಸಭೆಯಲ್ಲಿ ಮಾತನಾಡಿದ್ದೆವು.
ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಅಮಾನತ್ತು ಆದೇಶ ವಾಪಾಸ್ ಪಡೆದಿದ್ದಾರೆ ಎಂದು ಶಾಸಕ ಚನ್ನಬಸಪ್ಪ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...