DAVANGERE UNIVERSITY ದಾವಣಗೆರೆ.ಮೇ. 24. ವಿಶ್ವದಲ್ಲಿ ಆರ್ಥಿಕ ಅಭಿವೃದ್ಧಿಯು ಶೇಕಡ 2.8 ರ ಮಂದಗತಿಯಲ್ಲಿದ್ದರೂ ಭಾರತದಲ್ಲಿ ಮಾತ್ರ ಶೇಕಡ 6.2ರ ತೀವ್ರಗತಿಯಲ್ಲಿದೆ. ನಮ್ಮ ಪದವೀಧರರು ಕ್ರಿಯಾಶೀಲರಾಗಿ ದೇಶವು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗುವಲ್ಲಿ ದುಡಿಯಬೇಕಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ನಿವೃತ್ತ ರಿಜಿಸ್ಟಾರ್ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ ಬಿ ಬಕ್ಕಪ್ಪ ಮ್ಯಾನೇಜ್ಮೆಂಟ್ ಪದವೀಧರರಿಗೆ ಕರೆ ಕೊಟ್ಟರು.
ಅವರಿಂದು ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ ನ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಕೈಗಾರಿಕಾ ಕ್ರಾಂತಿಯ ಯುಗದ ವೇಗಕ್ಕಿಂತ ತಂತ್ರಜ್ಞಾನ ಅಭಿವೃದ್ಧಿ ವೇಗವು 300 ಪಟ್ಟು ಮುಂದೆ ಇದೆ, ಹಿಂದೆ ದೇಶೀಯವಾಗಿದ್ದ ಜ್ಞಾನ ಅಷ್ಟೇ ಸಾಕಾಗುತ್ತಿತ್ತು ಆದರೆ ಈಗ ಹಾಗಲ್ಲ ಜಾಗತಿಕ ಜ್ಞಾನ ಅತ್ಯವಶ್ಯ, ಇದರ ಪ್ರಾಪ್ತಿಗೆ ಆಧುನಿಕ ತಂತ್ರಜ್ಞಾನವು ಅತ್ಯಂತ ಸಹಕಾರಿಯಾಗಿದೆ. ಡಿಜಿಟಲ್ ರೂಪಾಂತರ ಕೃತಕ ಬುದ್ಧಿಮತ್ತೆಯ ಹಂತ ತಲುಪಿದ್ದು ಇದು ವಿಧಾಯಕ ಕಾರ್ಯಗಳಿಗಷ್ಟೇ ಬಳಕೆಯಾಗಬೇಕು, ವಾರ್ಷಿಕ 65 ಮಿಲಿಯನ್ ಜನಸಂಖ್ಯೆ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದು ಈ ಮಾನವ ಶಕ್ತಿಯ ಗರಿಷ್ಠ ಬಳಕೆಯ ಬಗ್ಗೆಯೂ ಮ್ಯಾನೇಜ್ಮೆಂಟ್ ಪದವೀಧರರು ಆಲೋಚಿಸಬೇಕಿದೆ ಎಂದರು.
DAVANGERE UNIVERSITY ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಚೇರ್ಮನ್ ಡಾ. ಅಥಣಿ ಎಸ್ ವೀರಣ್ಣನವರು ಈಚಿನ ದಶಕಗಳಲ್ಲಿ ಸ್ತ್ರೀಯರು ಉನ್ನತ ಶಿಕ್ಷಣಕ್ಕೆ ಬರುತ್ತಿರುವುದೇ ಅಭಿವೃದ್ಧಿಯ ಸಂಕೇತವಾಗಿದ್ದು ತೀವ್ರ ವೇಗದಲ್ಲಿರುವ ತಂತ್ರಜ್ಞಾನ ಅಭಿವೃದ್ಧಿಯ ತಿಳುವಳಿಕೆ ಹಾಗೂ ಅಳವಡಿಕೆಯು ಸಾಧನೆಗೆ ಅತ್ಯವಶ್ಯ ಎಂದರು.
ಜಯಶ್ರೀ ಸಿ, ಲತಾ ಎಸ್ ಪಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿ ಭುವಾನಂದ ಹೆಚ್ ವಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ.ಸರೋಜಾ ಎಸ್ ವರದಿ ವಾಚನ ಮಾಡಿದರು. ಶ್ವೇತಾ ಜಿ ಬಿ ಹಾಗೂ ವರ್ಷಾ ರಾಯ್ಕರ್ ಅತಿಥಿಗಳ ಪರಿಚಯ ಮಾಡಿದರು. ಸಹ ಪ್ರಾಧ್ಯಾಪಕ ಡಾ. ವಿಜಯ್ ಕೆಎಸ್, ಡಾ.ಶ್ರುತಿ ಮಾಕನೂರು ಪದವಿ ಪ್ರದಾನ ನಿರ್ವಹಿಸಿದರೆ ಪ್ರತಿಜ್ಞಾವಿಧಿಯನ್ನು ವಿಭಾಗ ಮುಖ್ಯಸ್ಥ ಡಾ ಸುಜಿತ್ ಕುಮಾರ್ ಎಸ್ ಹೆಚ್
ಬೋಧಿಸಿದರು. ಪ್ರಾಂಶುಪಾಲ ಡಾ ಪ್ರಕಾಶ್ ಎಸ್ ಅಳಲಗೇರಿ ವಂದನೆ ಸಮರ್ಪಿಸಿದರು.