Madhu Bangarappa ಕೇಂದ್ರ ಸರ್ಕಾರ ಜಾತಿ ಮತ್ತು ಜನಗಣತಿ ನಡೆಸಲು ಮುಂದಾಗಿರುವ
ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಕೇಂದ್ರದ ನಿರ್ಧಾರವನ್ನ ಸ್ವಾಗತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ
ಇದರಿಂದ ದೇಶದ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯುತ್ತದೆ ಎಂದು ಹೇಳಿದರು
ಇದನ್ನೇ ರಾಜ್ಯ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದೆ
ವಿರೋಧ ಪಕ್ಷದವರು ಟೀಕೆಯ ನಂತರವೂ ಈ ನಿರ್ಧಾರ ತೆಗೆದುಕೊಂಡಿದ್ದಾರೆ
ರಾಜ್ಯ ಸರ್ಕಾರ ಅನುಸರಿಸಿದ ಮಾನದಂಡವನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು
Madhu Bangarappa ಬೇಕಾದರೆ ಇದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿದರೆ ಒಳ್ಳೆಯದು
ಗಣತಿ ಮೂಲಕ ಜನರ ತೆರಿಗೆ ಹಣ ಯಾವ ರೀತಿ ಬಳಕೆಯಾಗುತ್ತಿದೆ ಎಂದು ಗೊತ್ತಾಗಬೇಕು ಎಂದೂ ಕೂಡ ಒತ್ತಿಹೇಳಿದರು.
ಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ.
ಕೇಂದ್ರದ ಗಣತಿ ಮೂಲಕ ದೇಶದ ಜನರ ಜೀವನಮಟ್ಟದ ಮಾಹಿತಿ ಸಿಗಲಿದೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರ ನೀಡಿದರು.
ಇಲಾಖೆಯಲ್ಲಿನ ನೂತನ ಕ್ರಮಗಳ ಬಗ್ಗೆ ಮಾತನಾಡಿ
ಈ ಬಾರಿ ಎಐ ಆಧಾರಿತ ಭಾಷಾ ಕಲಿಕೆಗೆ ಗಮನ ಹರಿಸಲಾಗುತ್ತದೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು.