Radio Shivamogga ತಕ್ಷಣಕ್ಕೆ ಸುದ್ದಿಯನ್ನು ಪ್ರಸಾರ ಮಾಡುವ ಏಕೈಕ ಮಾಧ್ಯಮ ರೇಡಿಯೋ ಆಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರು, ಎಷ್ಟೇ ಟೆಲಿವಿಷನ್ ಗಳು ಇದ್ದರೂ ಸಹ ರೇಡಿಯೋದಲ್ಲಿ ಆಲಿಸಿದ ಹಾಗೆ ಸಿಗುವಂತಹ ಸಂತೋಷ ಬೇರೆಲ್ಲೂ ಸಿಗೋದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ನುಡಿದರು.
ರೇಡಿಯೋ ಶಿವಮೊಗ್ಗ ಮೂರನೇ ವರ್ಷದ ಪರಿಸರ ಅಧ್ಯಯನ ಕೇಂದ್ರದ ಮುಖ್ಯಸ್ಥರು ಹಾಗೂ ನಿಲಯದ ನಿರ್ದೇಶಕರಾದ ಜನಾರ್ಧನ್ ರವರಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವ, ಶಿವಮೊಗ್ಗದಲ್ಲಿ ಈಗಾಗಲೇ ಮೂರು ವರ್ಷಗಳಿಂದ ನಿರಂತರವಾಗಿ ಸುದ್ದಿ, ಮಾಹಿತಿ, ಮನರಂಜನೆಯನ್ನು ಉತ್ಕೃಷ್ಟವಾದ ಮಟ್ಟದಲ್ಲಿ ಜನರಿಗೆ ತಲುಪಿಸಿ ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಕೇಳುಗರನ್ನು ಸಂಪಾದಿಸಿರುವ ರೇಡಿಯೋ ಶಿವಮೊಗ್ಗ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ನಮ್ಮ ಎಫ್ ಎಂ ರೇಡಿಯೋ ಶಿವಮೊಗ್ಗ ಈಗಾಗಲೇ ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಕೇಳುಗರನ್ನು ತಲುಪಿ, ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಸಮುದಾಯ ರೇಡಿಯೋದಲ್ಲಿ ಅದರಲ್ಲೂ ನಮ್ಮ ಶಿವಮೊಗ್ಗ ರೇಡಿಯೋ ಎಲ್ಲಾ ಕಾರ್ಯಕ್ರಮಗಳನ್ನು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥೆತವಾಗಿ ಎಲ್ಲಾ ಕ್ಷೇತ್ರದವರಿಗೂ ಅಗತ್ಯವಾದ ಮಾಹಿತಿಗಳನ್ನು ನೀಡುತ್ತಾ ಜನ ಮೆಚ್ಚುಗೆ ಪಡೆದಿದೆ ಎಂದು ಶ್ಲಾಘಿಸಿದರು.
Radio Shivamogga ಇದೇ ಸಂದರ್ಭದಲ್ಲಿ ರೇಡಿಯೋ ಹಬ್ಬ ಕಾರ್ಯಕ್ರಮಕ್ಕೆ ಹುಬ್ಬಳ್ಳಿ, ಧಾರವಾಡ, ಬಿಜಾಪುರ, ಕಾರ್ಕಳ, ಬ್ರಹ್ಮಾವರ, ಬೆಂಗಳೂರು, ಅಥಣಿ ಹಾಗೂ ಬೇರೆ ಬೇರೆ ರಾಜ್ಯಗಳಿಂದ ರೇಡಿಯೋ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಮೂರು ವರ್ಷದ ನೆನಪಿಗಾಗಿ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ಗಣೇಶ್ ಅಂಗಡಿ, ಹಾಗೂ ನಿರೂಪಕರಾದ ವಿ.ಎನ್.ಅರ್ಪಿತ, ಪವಿತ್ರ, ದಿನೇಶ್, ರಕ್ಷಿತಾ ಹೊಳ್ಳ, ಶ್ರೀಧರ್, ಮಹಾಲಕ್ಷ್ಮಿ, ಶ್ವೇತಾ, ಶ್ರೀಕಾಂತ್, ಪ್ರಮುಖರಾದ ಗುರುಪ್ರಸಾದ್ ಹಾಗೂ ಪರಿಸರ ಅಧ್ಯಯನ ಕೇಂದ್ರದ ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.