Saturday, May 24, 2025
Saturday, May 24, 2025

Rotary Club Shimoga ಸ್ತ್ರೀ ಸಮಾನತೆ, ಅಂತರ್ಜಾತೀಯ ವಿವಾಹ, ಕಾಯಕವೇ ಕೈಲಾಸ ತತ್ವಗಳ ಮೂಲಕ ಬಸವಣ್ಣ ಜನಪ್ರಿಯ- ಜಿ.ಕಿರಣ್ ಕುಮಾರ್

Date:

Rotary Club Shimoga ಬಸವಣ್ಣನವರ ವಚನ ತತ್ವಗಳು ಇಡೀ ವಿಶ್ವಕ್ಕೆ ನೀಡಿದ ಅತ್ಯಂತ ದೊಡ್ಡ ಸಂದೇಶವಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷರಾದ ಕಿರಣ್ ಕುಮಾರ್.ಜಿ ರವರು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಲ್ಲಿ ಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದ ಒಬ್ಬ ಮಹಾನ್ ಕವಿ, ಸಮಾಜ ಸುಧಾರಕ, ತತ್ವಜ್ಞಾನಿ. ಅವರು ವಚನಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು ಎಂದು ನುಡಿದರು.

Rotary Club Shimoga ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂದೇಶ ನೀಡಿದ ಮಹಾನ್ ಮಾನವತಾವಾದಿಗಳು. ಸ್ತ್ರೀ ಸಮಾನತೆ, ಅಂತರ್ಜಾತಿ ವಿವಾಹ, ಕಾಯಕವೇ ಕೈಲಾಸ, ಜಾತ್ಯಾತೀತ ತತ್ವಗಳ ಮೂಲಕ ಜನಪ್ರಿಯರಾದವರು. ಬಸವಣ್ಣನವರು ಲಿಂಗ ತಾರತಮ್ಯ ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದವರು. ಜಾತಿ ಮತ ಲಿಂಗ ಭೇದವನ್ನು ತಿರಸ್ಕರಿಸಿದ್ದ ಅವರು, ಸಾಮಾಜಿಕ ಕ್ರಾಂತಿಗೆ ಕಾರಣವಾದವರು ವಿಶ್ವಗುರು ಬಸವಣ್ಣನವರು ಎಂದು ಹೇಳಿದರು.ಜಯಂತಿ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಕಾರ್ಯದರ್ಶಿ ಈಶ್ವರ್, ಬಸವರಾಜ್.ಬಿ, ರವಿ ಕೋಟೊಜಿ, ಧರ್ಮೇಂದ್ರ ಸಿಂಗ್, ರಮೇಶ್.ಎನ್, ಗುರುರಾಜ್.ಎ.ಎಸ್, ಚಂದ್ರು.ಜೆ.ಪಿ, ನಟರಾಜ್, ವಿನುತಾ, ಅಶ್ವಿನ್, ಭರತ್.ಎಸ್.ಕೆ, ಕುಮಾರ್, ಅರುಣ್ ಕುಮಾರ್, ನಟರಾಜ್ ಮತ್ತು ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N Gopinath ಮಥುರಾ ಪ್ಯಾರಡೈಸ್ಮಧುರ ಮಾತಿನ ಗೋಪಿನಾಥ್ ಗೆ”ಆತಿಥ್ಯ ರತ್ನ” ಪುರಸ್ಕಾರ

N Gopinath ಕರ್ನಾಟಕ ರಾಜ್ಯ ಹೋಟೆಲ್‌ ಸಂಘದ ಪ್ರತಿಷ್ಠಿತ ಪ್ರಶಸ್ತಿ "ಆತಿಥ್ಯರತ್ನ"ವನ್ನು...

Sagara News ಸಾಗರದ ಚರಕ ಅಂಗಡಿಯಲ್ಲಿ‌ಮೇ 26 ರಂದು‌ “ಅವ್ವ ಸಂತೆ”

Sagara News ಜೀವನ್ಮುಖಿ ಹಾಗೂ ಚರಕ ವತಿಯಿಂದ ದಿನಾಂಕ 26:05:25 ರ...