Shivaganga Yoga Center ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದು ಶಿವಗಂಗಾ ಯೋಗ ಕೇಂದ್ರದ ಟ್ರಸ್ಟಿನ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಕೃಷಿನಗರದ ಶಕ್ತಿ ಗಣಪತಿ ದೇವಸ್ಥಾನದ ಸಮಿತಿ ಹಾಗೂ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಕೃಷಿ ನಗರ, ಬಸವೇಶ್ವರ ನಗರ ಹಾಗೂ ಡಾಲರ್ಸ್ ಕಾಲೊನಿ ನಿವಾಸಿಗಳಿಗೆ ಹಮ್ಮಿಕೊಳ್ಳಲಾದ 21 ದಿನದ ಯೋಗ ಹಾಗೂ ಪ್ರಾಣಯಾಮ ಧ್ಯಾನದ ಮತ್ತು ಆರೋಗ್ಯ ಮಾಹಿತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯೋಗ, ಪ್ರಾಣಾಯಾಮ ಹಾಗೂ ಧ್ಯಾನದ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ವಿಶೇಷವಾದ ಮಹತ್ವ ನೀಡಿದ್ದಾರೆ. ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಆಯೋಜಿಸುತ್ತಿರುವ ಇಂತಹ ಯೋಗ ಶಿಬಿರಗಳು ಬಡಾವಣೆಗಳಲ್ಲಿ ಮನೆ ಮನಗಳನ್ನು ತಲುಪುತ್ತಿವೆ. ಬಾಲ್ಯದಿಂದಲೇ ಯೋಗಭ್ಯಾಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಮಾತನಾಡಿ, ಯೋಗ ವ್ಯಾಯಾಮವಲ್ಲ, ಅದು ಆರೋಗ್ಯವಂತ ಮನುಷ್ಯರನ್ನು ನಿರ್ಮಾಣ ಮಾಡುವ ಒಂದು ದಿವ್ಯ ಶಕ್ತಿ. ಋಷಿ ಮುನಿಗಳ ಕಾಲದಿಂದಲೂ ಯೋಗಕ್ಕೆ ತನ್ನದೇ ಆದ ಇತಿಹಾಸವಿದೆ. ಆದ್ದರಿಂದ ಪೋಷಕರು ತಾವು ಯೋಗ ಮಾಡಬೇಕು. ಈ ರೀತಿಯ ಶಿಬಿರಗಳನ್ನು ಶಿವಮೊಗ್ಗ ನಗರದ ಪ್ರತಿಯೊಂದು ಬಡಾವಣೆಗಳಲ್ಲಿ ಮಾಡುವ ಮಹಾದಾಸೆ ಇದೆ ಎಂದು ನುಡಿದರು.
Shivaganga Yoga Center ಕಾರ್ಯಕ್ರಮದ ಸಂಚಾಲಕ ಬಳ್ಳೇಕೆರೆ ಸಂತೋಷ ಮಾತನಾಡಿ, ಈಗಾಗಲೇ 21 ದಿನಗಳ ಕ್ಯಾಂಪಿನಿಂದ ಹಲವಾರು ಜನ ಯೋಗ ಶಿಬಿರಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಬರುವ ದಿನಗಳಲ್ಲಿ ಪ್ರತಿನಿತ್ಯ ಯೋಗವನ್ನು ಕೃಷಿ ನಗರದ ಶಕ್ತಿ ಗಣಪತಿ ದೇವಸ್ಥಾನದ ಆವರಣದಲ್ಲಿ ನಿರಂತರವಾಗಿ ನಡೆಸಲಾಗುವುದು ಎಂದು ನುಡಿದರು.
ಶಕ್ತಿ ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಟಿಡಿ ಅರವಿಂದ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಕೃಷಿ ನಗರ ಗಣಪತಿ ದೇವಸ್ಥಾನ ಸಮಿತಿಯ ಗಣಪತಿ ಮತ್ತು ಯೋಗ ಶಿಕ್ಷಕ ಚಂದ್ರಶೇಖರಯ್ಯ. ನಾಗರತ್ನಮ್ಮ, ಕಾಟನ್ ಜಗದೀಶ್, ಜಿ.ವಿಜಯಕುಮಾರ್, ಮಹಾಬಲೇಶ್ವರ ಹೆಗಡೆ, ಪರಮೇಶ್ವರ್, ಶಶಿಕುಮಾರ್, ಎಸ್ ಪಿ ನಟರಾಜ್, ನೀಲಕಂಠ ರಾವ್, ಬಬಲೇಶ್ವರ ಹೆಗಡೆ, ಬರೋಡ ಬ್ಯಾಂಕಿನ ಮುಖ್ಯ ಅಧಿಕಾರಿ ಕಮಲೇಶ್, ಎಸ್ ಬಿ ಐ ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿ ಹಾಗೂ 200ಕ್ಕೂ ಹೆಚ್ಚು ಯೋಗ ಶಿಬಿರಾರ್ಥಿಗಳು ಇದ್ದರು.
Shivaganga Yoga Center ಶಿವಗಂಗಾ ಯೋಗಕೇಂದ್ರದಿಂದ ಯೋಗ ಶಿಬಿರಗಳು ಬಡಾವಣೆಗಳಿಗೆ ವಿಸ್ತಾರವಾಗಿದೆ- ಎಸ್.ರುದ್ರೇಗೌಡ
Date:
