Saturday, March 1, 2025
Saturday, March 1, 2025

Klive Special Article ಕೊನೇ ಹಂತದ ಕ್ಯಾನ್ಸರ್ ಭಯ ಬೇಡ- ಡಾ.ಅಪರ್ಣಾ ಶ್ರೀವತ್ಸ

Date:

ಫೆಬ್ರವರಿ 4. ಕ್ಯಾನ್ಸರ್ ಜಾಗೃತಿ ದಿನ.
ದಿನೇದಿನೆ ಕ್ಯಾನ್ಸರ್‌ಗೆ ಬಹಳ ಮಂದಿ ತುತ್ತಾಗುತ್ತಿದ್ದಾರೆ . ಕ್ಯಾನ್ಸರ್ ಬಗ್ಗೆ ‌ಮಾಹಿತಿ‌ ತಿಳಿಸುವ ಉದ್ದೇಶದಿಂದ‌ ಶಿವಮೊಗ್ಗದ ಸಹ್ಯಾದ್ರಿ
ನಾರಾಯಣ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಲಹಾ ತಜ್ಞೆಯಾಗಿರುವ ಡಾ. ಅಪರ್ಣ ಶ್ರೀವತ್ಸ ಅವರಿಂದ ನಿಮಗಾಗಿ ಲೇಖನ.

Klive Special Article ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಪತ್ತೆ ಆದರೆ ಸಂಪೂರ್ಣ ಪಡಿಸಬಹುದಾದ ಅಂದರೆ ಕ್ಯೂರ್ ಮಾಡಬಹುದಾದ ಕಾಯಿಲೆ ಆದರೆ ಭಾರತದಲ್ಲಿ ಪತ್ತೆ ಆಗುವ ಬಹುತೇಕ ಕ್ಯಾನ್ಸರ್ ರೋಗಿಗಳು ಅಂತಿಮ ಹಂತಗಳಲ್ಲಿ ಪತ್ತೆ ಆಗುತ್ತಿರುವುದು ದುರದೃಷ್ಟಕರ ಸಂಗತಿ ಕ್ಯಾನ್ಸರ್‌ನ ರೋಗಲಕ್ಷಣಗಳ ಬಗೆಗೆ ಅರಿವಿಲ್ಲದ ಕಾರಣ, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ನಿರ್ಲಕ್ಷಿಸಿದ ರೋಗಿಗಳು ಅಂತಿಮ ಹಂತದ ಕ್ಯಾನ್ಸರ್ ಪತ್ತೆಯಾದಾಗ ಹತಾಶರಾಗುತ್ತಾರೆ. ಕ್ಯಾನ್ಸರ್‌ನ ರೋಗ ಲಕ್ಷಣಗಳು ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು. ದೇಹದ ಯಾವುದೇ ಭಾಗದಲ್ಲಿ ಗೆಡ್ಡೆ ಕಾಣಿಸಿಕೊಳ್ಳುವುದು ರಕ್ತಸ್ರಾವ (ಮೂಗಿನಿಂದ, ಕಫದಲ್ಲಿ, ಮಲದಲ್ಲಿ, ಅನಿಯಮಿತ ಋತುಸ್ರಾವ), ಹುಣ್ಣು ಹೊಟ್ಟೆ ಉಬ್ಬರ, ಭೇದಿ ಅಥವಾ ಮಲಬದ್ಧತೆ, ದ್ವನಿ ಬದಲಾವಣೆ, ಕೆಮ್ಮು, ಎದುಸಿರು ಇಂತಹ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
Klive Special Article ಕ್ಯಾನ್ಸರ್ ಕೊನೆಯ ಹಂತದಲ್ಲಿ ಪತ್ತೆಯಾದರೂ ಸಹ ಅದನ್ನು ನಿಯಂತ್ರಿಸಲು ಅನೇಕ ಉಪಾಯಗಳಿವೆ ಒಂದು ಕಾಲದಲ್ಲಿ ಅಂತಿಮ ಹಂತದ ಕ್ಯಾನ್ಸರ್‌ಗೆ ಕೀಮೋಥರಪಿ ಒಂದೇ ದಾರಿ ಆಗಿತ್ತು. ಆದರೆ ಇಂದು ಕೀಮೋಥರಪಿಗಿಂತ ಕಡಿಮೆ ಅಡ್ಡಪರಿಣಾಮಗಳನ್ನು ಉಂಟುಮಾಡುವ, ಹಾಗೂ ಅದಕ್ಕಿಂತ ಹೆಚ್ಚು ಕ್ಯಾನ್ಸರ್ ಕರಗಿಸಬಲ್ಲ ಅನೇಕ ಅತ್ಯಾದುನಿಕÀ ಚಿಕಿತ್ಸೆಗಳಿವೆ.
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕೊನೆಯ ಹಂತದ ಕ್ಯಾನ್ಸರ್‌ಗಳಿಗೆ ಟಾರ್ಗೆಟ್‌ಥೆರಪಿ, ಇಮ್ಯೂನೋಥೆರಪಿ, ಹಾರ್ಮೋನ್‌ಥೆರಪಿಗಳ ಸಹಾಯದಿಂದ ಅಡ್ಡ ಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ. ಕೊನೆಯ ಹಂತದ ಕ್ಯಾನ್ಸರ್‌ನಲ್ಲಿ ನೋವು ನಿವಾರಣೆಗೆ ಅತ್ಯಂತ ಪರಿಣಾಮಕಾರಿ ಔಷದಗಳನ್ನು ಉಪಯೋಗಿಸಲಾಗುತ್ತಿದೆ ಆರಂಭಿಕ ಹಂತಗಳ ಕ್ಯಾನ್ಸರ್ ಚಿಕಿತ್ಸೆಯಲ್ಲಿ “ನೋವುರಹಿತ ಕೀಮೋಥರಪಿ” ನೀಡಲು ಪಿಕ್‌ಲೈನ್ ಅನ್ನು ಅಳವಡಿಸಿ ರೋಗಿಯ ಕ್ಯಾನ್ಸರ್ ಸಮರವನ್ನು ಆರಾಮದಾಯಕವಾಗಿಸಿದೆ. ಇಂತಹ ಚಿಕಿತ್ಸೆಗಳಿಂದ ಕೊನೆಯ ಹಂತದ ಕ್ಯಾನ್ಸರ್ ರೋಗಿಗಳು ಆಶಾದಾಯಕ ಹಾಗೂ ಸಕ್ರಿಯ ಜೀವನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾನ್ಸರ್ ರೋಗ ಲಕ್ಷಣಗಳ ಅರಿವು ಪ್ರತಿಯೊಬ್ಬರಿಗೂ ಅತ್ಯಗತ್ಯ ಕೊನೆ ಹಂತದ ಕ್ಯಾನ್ಸರ್ ಬಗ್ಗೆ ರೋಗಿಗಳಿಗೆ ಭಯ ಬೇಡ ಆಶಾವಾದದಿಂದ ಚಿಕಿತ್ಸೆಗೆ ಮುಂದಾಗುವುದು ಸೂಕ್ತ.

– ಡಾ. ಅಪರ್ಣ ಶ್ರೀವತ್ಸ ಮೆಡಿಕಲ್ ಅಂಕಲಜಿಸ್ಟ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Science Day ವೈಜ್ಞಾನಿಕ ಚಿಂತನೆಯಿಂದ ಮೂಢ ನಂಬಿಕೆ ತೊಡೆದು ಹಾಕಿ-ಡಿಡಿಪಿಐ ಮಂಜುನಾಥ್

National Science Day ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು, ವಿಜ್ಞಾನದ ಅಧ್ಯಯನದಲ್ಲಿ...

KUWJ Shivamogga ಶಿವಮೊಗ್ಗದ ಪತ್ರಕರ್ತರಾದ ಗಿರೀಶ್ ‌ಉಮ್ರಾಯ್, ಶೃಂಗೇರಿ ಚಂದ್ರಶೇಖರ್ & ಕವಿತಾ ಅವರಿಗೆ ವಾರ್ಷಿಕ ದತ್ತಿ ಪ್ರಶಸ್ತಿ

KUWJ Shivamogga ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಮತ್ತು ಸಾಧನೆಗಳನ್ನು ಗುರುತಿಸಿ...

Karnataka Govt Urban Development ಹೊರಗುತ್ತಿಗೆ ವಾಹನ ಚಾಲಕರು & ಸಹಾಯಕರಿಗೆ ನೇರ‌ಪಾವತಿ ಮಾಡಲು ಮನವಿ

Karnataka Govt Urban Development ಶಿವಮೊಗ್ಗನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ...