Wednesday, April 23, 2025
Wednesday, April 23, 2025

Kannada Development Authority ಕನ್ನಡದ ಸೊರಗುವಿಕೆಗೆ ಜನರ ಅನಾಸಕ್ತಿ, ಸರ್ಕಾರಗಳ ಧೋರಣೆಯೂ ಕಾರಣ- ಕೋಣಂದೂರು ಲಿಂಗಪ್ಪ

Date:

Kannada Development Authority ಇಂದಿನ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು, ಸಮಾಜವಾದದ ತತ್ವಸಿದ್ಧಾಂತಗಳ ಕುರಿತು ಜನರು ಸಿನಿಕರಾಗಿರುವುದು ಪ್ರಮುಖ‌ ಕಾರಣವಾಗಿದೆ‌ ಎಂದು ಖ್ಯಾತ ಸಮಾಜವಾದಿ ಚಿಂತಕ ಕೋಣಂದೂರು ಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ‌ ಗೋಕಾಕ್ ಚಳವಳಿಯ ನೆನಪಿನಲ್ಲಿ ಕನ್ನಡ ಚಳವಳಿಯ ಪ್ರವರ್ತಕ ಸನ್ಮಾನವನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ‌ ತಮ್ಮ ಸ್ವಗೃಹದಲ್ಲಿ ಸ್ವೀಕರಿಸಿ ಮಾತನಾಡಿದ ಅವರು ಜನಪರವಾದ ಹೋರಾಟಗಳಿಲ್ಲದೇ ಇಂದು ಸಮಾಜವು ಸೊರಗುತ್ತಿದ್ದು, ಬಡವ ಬಲ್ಲಿದರ‌ ನಡುವಿನ ಕಂದಕ ಹಿರಿದಾಗುತ್ತಲೇ‌ ಇದೆ.

ತಮ್ಮ ಕಾಲದ‌ ಚಳವಳಿಗಳಲ್ಲಿನ ಸಾಮಾಜಿಕ ಕಳಕಳಿ, ತತ್ವನಿಷ್ಠೆಗಳು ಇಂದು ಕಾಣುತ್ತಿಲ್ಲ, ಹೋರಾಟಗಳಿಗೆ ಪ್ರೇರಣೆಯೂ ಸಿಗುತ್ತಿಲ್ಲ. ಕನ್ನಡ‌ ಭಾಷೆ ಸೊರಗುತ್ತಿರುವುದಕ್ಕೆ ಜನರ ಅನಾಸಕ್ತಿಯ ಜೊತೆಯಲ್ಲಿ ಸರ್ಕಾರಗಳ ಧೋರಣೆಯೂ ಕಾರಣವಾಗಿದೆ.‌ ಇದು ವಿಷಾದನೀಯವಾದ ಸಂಗತಿ ಎಂದರು.

Kannada Development Authority ಸಮಾಜವಾದಿ ಆದರ್ಶ ತತ್ತ್ವಸಿದ್ಧಾಂತಗಳನ್ನು ನಂಬಿದ ಶಾಂತವೇರಿ ಗೋಪಾಲಗೌಡ ಅವರಿಂದಾಗಿ ತಮ್ಮ ಬದುಕಿಗೆ ಅರ್ಥ ದೊರಕಿದ್ದು ಅವರ ನಿರಂತರ ಮಾರ್ಗದರ್ಶನ ತಮ್ಮ ಹೋರಾಟದ ಮನಸ್ಥಿತಿಗೆ ಪ್ರೇರೇಪಣೆಯಾಯಿತೆಂದು ನೆನೆದ ಅವರು ಅಂದಿನ ದಿನಮಾನಕ್ಕೆ ಸತ್ವಯುತವಾದ ಹೋರಾಟ ಅವಶ್ಯಕವಿತ್ತು. ತಮ್ಮ ಜವಾಬ್ದಾರಿಯನ್ನು ತಾನು ನಿರ್ವಹಿಸಿದೆ ಎನ್ನುವ ತೃಪ್ತಿ ತನಗೆ ಇದೆ ಎಂದರು.

ಈ ಸಂದರ್ಭದಲ್ಲಿ 91 ವರ್ಷದ ಅವರು ಲೋಹಿಯಾ, ಶಾಂತವೇರಿ ಮತ್ತು ಜಾರ್ಜ್ ಫೆರ್ನಾಂಡೀಸ್ ಅವರೊಡನೆಯ ಒಡನಾಟದ ಸ್ವಾರಸ್ಯಕರ ನೆನಪುಗಳನ್ನು ಲವಲವಿಕೆಯಿಂದ ಹಂಚಿಕೊಂಡರು.‌

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೋಣಂದೂರು ಲಿಂಗಪ್ಪನವರನ್ನು ಸನ್ಮಾನಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....