Wednesday, February 19, 2025
Wednesday, February 19, 2025

Na. D’Souza ಸಾಹಿತಿ ನಾ.ಡಿಸೋಜಾ ನಿಧನಕ್ಕೆ ಶಿವಮೊಗ್ಗ ಅಭಾಸಾಪ ಸಂತಾಪ

Date:

ನಾಡಿನ ಖ್ಯಾತ ಸಾಹಿತಿ ಮತ್ತು ಲೇಖನಗಳಿಂದ ಜನಮನ ಸ್ಪಂದಿಸಿದ
ಡಾ.ನಾ.ಡಿಸೋಜಾ ಅವರ ನಿಧನದಿಂದ
ಮಲೆನಾಡಿನ ಬಹುಮುಖ್ಯ ಸಾಹಿತ್ಯಕ ಎಳೆಯೊಂದು ಕಡಿದಂತಾಗಿದೆ.
ತಮ್ಮ ಕತೆ ಕಾದಂಬರಿಗಳ ಮೂಲಕ ವರ್ತಮಾನದ ಸಾಮಾಜಿಕ ಬಿಗುವುಗಳಿಗೆ ಕಾರಣ ಮತ್ತು ಪರಿಣಾಮಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಬಿಂಬಿಸಿದ್ದರು.

ಮಲೆನಾಡಿನ ಬನಿ ಅವರ ಬರವಣಿಗೆಗಳಲ್ಲಿ ಸದಾ ಒಳಧಾರೆಯಾಗಿ ವ್ಯಕ್ತವಾಗಿವೆ.

Na. D’Souza ಪತ್ರಿಕೆಗಳೇ ಅಲ್ಲದೆ ರೇಡಿಯೊ, ದೂರದರ್ಶನ ಮತ್ತು ಸಿನಿಮಾ ಮಾಧ್ಯಮಗಳಲ್ಲಿ
ಅವರ ಕೃತಿಗಳು ಪ್ರಕಟ,ಪ್ರಸಾರ ಮತ್ತು ಪ್ರೇಕ್ಷಕರ ಮನಗೆದ್ದಿವೆ.
ಭದ್ರಾವತಿ ಆಕಾಶವಾಣಿ ಕೇಂದ್ರದ ಮೂಲಕ ಅವರ ಹಲವು ಚಿಂತನ ಭಾಷಣಗಳು ಪ್ರಸಾರವಾಗಿವೆ.
ಅವರ ಪ್ರಖ್ಯಾತ ಕಾದಂಬರಿ ‘ಮುಳುಗಡೆ” ಭದ್ರಾವತಿ ಕೇಂದ್ರದ ಮೂಲಕ‌ ರೇಡಿಯೋ ರೂಪವಾಗಿ ಪ್ರಸಾರವಾಗಿದೆ.
ಅಸಂಖ್ಯ ಕೇಳುಗರ ಮೆಚ್ವುಗೆಯನ್ನೂ ಪಡೆದಿದೆ.
“ನಾಡಿ” ಈ ಬಗ್ಗೆ ಆಕಾಶವಾಣಿ ಭದ್ರಾವತಿ ಕೇಂದ್ರದ
ಬಗ್ಗೆ ಮೆಚ್ಚುಗೆ ಸೂಸಿ ಮಾತಾಡಿದ್ದರು.
ನಾಡಿನ ಸಾಹಿತ್ಯಕ ವಲಯದಲ್ಲಿ
ಅವರೊಬ್ಬ ಎಲ್ಲಧರ್ಮಗಳನ್ನೂ ಮೀರಿದ ಬರಹಗಾರರಾಗಿದ್ದರು ಎಂದು ಕೆ ಲೈವ್ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ
ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ ಅವರು ನಾ.ಡಿಸೋಜಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Chennabasappa ಜಗಜೀವನ್ ರಾಂ ಭವನದ ಕಾಮಗಾರಿ ಪರಿಶಿಲಿಸಿದ ಶಾಸಕ‌ ಎಸ್.ಎನ್.ಚನ್ನಬಸಪ್ಪ

S.N. Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು...

Shikaripura Horticulture Department ತರಕಾರಿ ಬೀಜಗಳ ‌ಕಿಟ್ ವಿತರಣೆಗೆ ಅರ್ಜಿ ಆಹ್ವಾನ

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ತರಕಾರಿ...

Shimoga Rangayana ಫೆಬ್ರವರಿ 13. ಶಿವಮೊಗ್ಗ ರಂಗಾಯಣ ಆಶ್ರಯದಲ್ಲಿ ” ಮೈ ಫ್ಯಾಮಿಲಿ‌” ನಾಟಕ‌ ಪ್ರದರ್ಶನ

Shimoga Rangayana ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಫೆ. 13 ರಂದು ಸಂಜೆ...