Sunday, August 2, 2026
Sunday, August 2, 2026

Madhu Bangarappa ಪರಿಸರ ಜಾಗೃತಿ ಚಳವಳಿಯಲ್ಲಿದ್ದ ಮುಂಚೂಣಿ ಸಾಹಿತಿ,ನಾ.ಡಿಸೋಜ- ಮಧು‌ಬಂಗಾರಪ್ಪ ಕಂಬನಿ

Date:

Madhu Bangarappa ನಾಡಿನ ಖ್ಯಾತ ಸಾಹಿತಿ ನಾ ಡಿಸೋಜಾ ಅವರ ನಿಧನಕ್ಕೆ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾ.ಡಿಸೋಜಾ ಅರು ಈ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದ ದಿಗ್ಗಜರಲೊಬ್ಬರಾಗಿದ್ದ ಅವರು ನಮ್ಮೆಲ್ಲರ ಮಾರ್ಗದರ್ಶಿಯಾಗಿದ್ದಾರೆ. ಬರೀ ಸಾಹಿತಿಯಾಗಿರದೆ ಒಬ್ಬ ಜನಪರ ಹೋರಾಟಗಾರರೂ ಆಗಿದ್ದ ಅವರು, ಮಲೆನಾಡಿನ ನೆಲ ಜಲದ ವಿಚಾರದಲ್ಲಿ ಸದಾ ಸಮಾಜವನ್ನು ಜಾಗೃತಗೊಳಿಸುತ್ತಿದ್ದರು. ಸಾಗರ ತಾಲೂಕಿನ ರೈಲ್ವೆ, ಪರಿಸರ, ಶರಾವತಿ ಕಣಿವೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಮುಂಚೂಣಿಯಲ್ಲಿರುತಿದ್ದ ನಾ ಡಿಸೋಜಾ ಅವರದ್ದು ಮಾದರಿ ವ್ಯಕ್ತಿತ್ವ ಎಂದು ಮಧುಬಂಗಾರಪ್ಪ ಹೇಳಿದ್ದಾರೆ.
Madhu Bangarappa ಡಿಸೋಜಾ ಅವರು ಬೌತಿಕವಾಗಿ ನಮ್ಮನ್ನು ಅಗಲಿರಬಹುದು ಆದರೆ ಅವರ ಉತ್ಕೃಷ್ಟ ಸಾಹಿತ್ಯಕ್ಕೆ ಎಂದೂ ಸಾವಿಲ್ಲ. ಅವರ ಸಾಹಿತ್ಯ ಈ ಸಮಾಜಕ್ಕೆ ಎಂದೂ ದಾರಿದೀಪವಾಗಿದೆ. ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಅವರ ಕಾದಂಬರಿಗಳು ಬೆಳಕು ಚೆಲ್ಲಿವೆ. ಅ ಜನರ ಪರವಾಗಿ ಡಿಸೋಜಾ ಅವರು ಧ್ವನಿ ಎತ್ತಿದ್ದರು. ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅವರ ಅಗಲಿಕೆ ಇಡೀ ಓದುಗ ವಲಯಕ್ಕೆ ತುಂಬಲಾರದ ನಷವಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಮಧುಬಂಗಾರಪ್ಪ ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...