Wednesday, August 12, 2026
Wednesday, August 12, 2026

Sri Adichunchanagiri Education Trust Shivamogga ಸಾವಿರಾರು ಮಕ್ಕಳಿಗೆ ಶಿಕ್ಷಣದ ಜೊತೆ ಕ್ರೀಡಾ ಕ್ಷೇತ್ರದಲ್ಲೂ ಶಿವಮೊಗ್ಗದ ಶ್ರೀಪ್ರಸನ್ನನಾಥ ಶ್ರೀಗಳ ಪ್ರೋತ್ಸಾಹ ಶ್ಲಾಘನೀಯ- ಶ್ರೀಸಾಯಿನಾಥಶ್ರೀ

Date:

Sri Adichunchanagiri Education Trust Shivamogga ಶ್ರೀಗಳ ಅವಿರತ ಪರಿಶ್ರಮ, ಅವರು ಕೂಡಿಟ್ಟ ಆಧ್ಯಾತ್ಮ ತುಡಿತದ ಮನೋ ಭೂಮಿಕೆಯಿಂದ ಸಾವಿರಾರು ಮಕ್ಕಳು ಶಿಕ್ಷಣದ ಜೊತೆಗೆ , ಕ್ರೀಡಾ ಕ್ಷೇತ್ರಗಳಲ್ಲಿ ಇಂದು ಅಗ್ರ ಪಂಕ್ತಿಯ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಶಾಲಾ, ಕಾಲೇಜಿನ ಆವರಣದಲ್ಲಿ ನಡೆದ ಪೂಜ್ಯ ಶ್ರೀ ಪ್ರಸನನನಾಥ ಸ್ವಾಮೀಜಿಯವರ 57ನೇ ವರ್ಧಂತಿಯ ಮಹೋತ್ಸವದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ,ಆಶೀರ್ವಚನ ನೀಡುತ್ತಾ,ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಂಬು ಗ್ರಾಮ ಒಂದು ಕುಗ್ರಾಮದ ಪೂರ್ವಾಶ್ರಮದಲ್ಲಿ ಜನಿಸಿದರು.
Sri Adichunchanagiri Education Trust Shivamogga ಏನನ್ನಾದರೂ ಮಹತ್ತರ ವಾದದನ್ನು ಸಾಧಿಸಬೇಕೆಂಬ ಸದುದ್ದೇಶದಿಂದ ಐಹಿಕ ಜೀವನದಲ್ಲಿ ವೈರಾಗ್ಯವನ್ನು ಹೊಂದಿ, ಪರಮ ಪೂಜ್ಯ ಜಗದ್ಗುರುಗಳವರಿಂದ ಬ್ರಹ್ಮಚಾರಿ ದೀಕ್ಷೆಯನ್ನು ಪಡೆದುಕೊಂಡರು.ಜಾತಿ ಮತದ ಭೇದ ಭಾವವಿಲ್ಲದೆ ಸರ್ವರನ್ನು ಸಮಾನವಾಗಿ ಗುರುತಿಸುವ ಶ್ರೀಗಳು,
ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಕಾಲಿಟ್ಟ ಕಡೆಯೆಲ್ಲ ಶಿಸ್ತು, ಸ್ವಚ್ಛತೆ ಉತ್ಸಾಹವೇ ತುಂಬಿ ಹರಿದು ಸದೃಢ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣದ ಅಡಿಗಲ್ಲಾಗಿ ನಿಂತಿದ್ದಾರೆ ಎಂದರು. ನೂತನ ವಿನೂತನ ಶಿಕ್ಷಣ ಹಾಗೂ ಪ್ರತಿಭೆಗಳ ಆವಿಷ್ಕಾರಕ್ಕೆ ತಮ್ಮದೇ ಆದ ಕೊಡುಗೆ ಪೂಜ್ಯರು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...