Sunday, April 20, 2025
Sunday, April 20, 2025

Kanaka Dasa Jayanti 2024 ಭಕ್ತಿ ಮಾರ್ಗದ ಭುವನ ರತ್ನ, ಶ್ರೀ ಕನಕದಾಸರು ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

Date:

Kanaka Dasa Jayanti 2024 ಹರಿದಾಸರ ಪಂಕ್ತಿಯಲ್ಲಿ ಶ್ರೇಷ್ಠ ಹರಿದಾಸರ ಸಾಲಿಗೆ
ಸೇರಿದವರು ಕನಕದಾಸರು.ಇವರು ಕನ್ನಡ
ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆಕಾಣಿಕೆಯನ್ನಿತ್ತವರು.
ಇವರುಶ್ರೀವ್ಯಾಸರಾಯರಪರಮಾಪ್ತಶಿಷ್ಯರು.ಶ್ರೀವ್ಯಾಸರಾಯ ಗುರುಗಳಿಂದ ಅಂಕಿತ ಪಡೆದ ಹರಿದಾಸರು ಕನಕದಾಸರು.
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆ
ಗಳೆಂದು ಬಣ್ಣಿಸಲಾಗಿದೆ.ಪ್ರಹ್ಲಾದರಾಜರು ಹೇಗೆ ತನ್ನ ತಂದೆಯಾದ ಹಿರಣ್ಯಕಶಿಪುವಿಗೆ ದೇವರು ಎಲ್ಲ ಕಡೆಯೂಇದ್ದಾನೆಎಂಬುದನ್ನುತೋರಿಸಿಕೊಟ್ಟರೋ ಹಾಗೆಯೇ ಕನಕದಾಸರೂ ಕೂಡ ಲೋಕಕ್ಕೆ ದೇವರಿಲ್ಲದ ಜಾಗವೇ ಇಲ್ಲಎಂದು ಮನವರಿಕೆ ಮಾಡಿಕೊಟ್ಟ ಮಹಾನುಭಾವರು.
ಅವರು ಕಡಲ ತಡಿಯಲ್ಲಿರುವ ಉಡುಪಿ ಕ್ಷೇತ್ರಕ್ಕೆ
ಬಂದಾಗ ಕೃಷ್ಣದೇವರು ಅವರ ಭಕ್ತಿಗೆ ಓಗೊಟ್ಟು ಕಿಂಡಿಯಲ್ಲಿ ದರ್ಶನ ಕೊಡುತ್ತಾನರೆ.ಕನಕದಾಸರಿಗೆ
ಶ್ರೀಕೃಷ್ಣ ದರ್ಶನ ಕೊಟ್ಟ ಕಿಂಡಿಯು “ಕನಕನ ಕಿಂಡಿ”ಎಂದೇ ಹೆಸರು ಪಡೆದಿದೆ. ಭಕ್ತನಿಗೆ ದೇವರ ಮೇಲೆ ಇರುವ ಪ್ರೇಮಕ್ಕಿಂತದೇವರಿಗೆಭಕ್ತನ ಮೇಲಿರುವ ಪ್ರೇಮ ಅತಿ ಹೆಚ್ಚಾಗಿರುತ್ತದೆ ಎಂಬುದು ಉಡುಪಿಯ ಕೃಷ್ಣನು ಕನಕದಾಸರಿಗೆ ದರ್ಶನ ಕೊಟ್ಟರೀತಿಯಲ್ಲೇ ತಿಳಿಯುತ್ತದೆ.ಶ್ರೀಕೃಷ್ಣನ ದರ್ಶನಕ್ಕಾಗಿ ಕಾಯುತ್ತಿದ್ದ ಕನಕದಾಸರಿಗೆ ಶ್ರೀಕೃಷ್ಣನ ವಿಗ್ರಹವೇ ಅವರ ಕಡೆ ಳ
ಮುಖಮಾಡಿ ತಿರುಗಿದ್ದುದನ್ನು ನೋಡಿದರೆ ಭಗವಂತನಿಗೆ ಭಕ್ತರ ಮೇಲಿರುವ ಪ್ರೇಮದ ಪರಾಕಾಷ್ಠತೆಯನ್ನುತೋರಿಸುತ್ತದೆ.ಇವರುಅನೇಕಕೀರ್ತನೆಗಳನ್ನು,ಉಗಾಭೋಗಗಳನ್ನು,ಮುಂಡಿಗೆಗಳನ್ನು ರಚಿಸಿದ್ದಾರೆ.
ಇವರುರಚಿಸಿರುವಐದುಮುಖ್ಯಕಾವ್ಯಕೃತಿಗಳೆಂದರೆಮೋಹನತರಂಗಿಣಿ,ನಳಚರಿತ್ರೆ,ರಾಮಧಾನ್ಯ ಚರಿತೆ,ಹರಿಭಕ್ತಿಸಾರ,ಮೋಹನ ತರಂಗಿಣಿ
ಮತ್ತು ನರಸಿಂಹಸ್ತವ.ಕೇಶವನಾಮದ “ಈಶ ನಿನ್ನ ಚರಣ ಭಜನೆ “ಎಂಬ ಕೀರ್ತನೆಯೂ ಇವರ ರಚನೆ
ಯಾಗಿದೆ.
ಕನಕದಾಸರು ಸಂಗೀತ ಕ್ಷೇತ್ರಕ್ಕೆಕೊಟ್ಟಿರುವಕೊಡುಗೆ
ಅನನ್ಯವಾದುದು.ಶ್ರೀವ್ಯಾಸರಾಯರು,ಶ್ರೀವಾದಿರಾಜರು,ಶ್ರೀಕೃಷ್ಣದೇವರಾಯ,ಶ್ರೀಪುರಂದರದಾಸರು,ಶ್ರೀವೈಕುಂಠದಾಸರಸಮಕಾಲೀನರುಶ್ರೀಕನಕದಾಸರು.ಇವರ ಜನ್ಮನಾಮತಿಮ್ಮಪ್ಪನಾಯಕನೆಂದು.ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯಿಂದಲೇಪೋಷಿಸಲ್ಪಟ್ಟುಕತ್ತಿವರಸೆ,ಬೇಟೆ,ಕಲಿತು ಪಾಳೇಗಾರರಾಗಿದ್ದರು.ವಿಜಯನಗರ ರಾಜರಸಂಸ್ಥಾನದಲ್ಲಿಕಾರ್ಯನಿರ್ವಹಿಸುತ್ತಿದ್ದರು.
ಒಮ್ಮೆಇವರನೇತೃತ್ವದಲ್ಲಿಭೂಮಿಯನ್ನುಅಗೆಯುತ್ತಿದ್ದಾಗಅಲ್ಲಿ ಭಾರೀಬಂಗಾರದನಿಧಿಸಿಕ್ಕಿತು.ಆದ್ದರಿಂದ ತಿಮ್ಮಪ್ಪ ಕನಕಪ್ಪನಾಗುತ್ತಾನೆ.ಕಾಗಿನೆಲೆಯಲ್ಲಿ ಶ್ರೀಆದಿಕೇಶವ ಸ್ವಾಮಿಯದೇವಸ್ಥಾನಕಟ್ಟಿಸುತ್ತಾರೆ.
ಶ್ರೀಆದಿಕೇಶವನು ಅವರ ಕನಸಿನಲ್ಲಿ ಹಲವಾರು ಸಾರಿ ಬಂದು ನನ್ನ ದಾಸನಾಗು ಎಂದರೂ ಇವರ ಮನಸ್ಸುಒಪ್ಪಿರಲಿಲ್ಲ.ಅವರ ಹೆಂಡತಿ ಮತ್ತು ತಾಯಿ ತೀರಿಕೊಂಡಾಗಲೂ ಅವರಿಗೆವೈರಾಗ್ಯಬಂದಿರಲಿಲ್ಲ.
ಒಮ್ಮೆ ತಿಮ್ಮಪ್ಪನಾಯಕರು ವಿಜಯನಗರ ಸಾಮ್ರಾಜ್ಯದ ಪರವಾಗಿ ಯುದ್ಧ ಮಾಡುತ್ತಿದ್ದಾಗ ,ಶತೃಪಡೆಯಿಂದಇವರಿಗೆಭಾರೀಆಘಾತವಾಯಿತು.ಕೈಯಲ್ಲಿ ಹಿಡಿದ ಕತ್ತಿಯೂ ಕೆಳಗೆಬಿತ್ತು.ಬಹಳವಾಗಿ ಏಟು ಬಿದ್ದದ್ದರಿಂದ ರಕ್ತಸ್ರಾವವಾಗುತ್ತಿತ್ತು.ಶತೃ ಪಡೆಯವರುಇವರುಮೂರ್ಛೆಹೋಗಿದ್ದನ್ನುನೋಡಿ ಸತ್ತೇ ಹೋಗಿರಬಹುದೆಂದು ಊಹಿಸಿ ಹೊರಟು ಹೋಗುತ್ತಾರೆ.ಆಗ ಆದಿಕೇಶವ ಸ್ವಾಮಿಯು ಒಬ್ಬ ಸಾಮಾನ್ಯ ಮನುಷ್ಯನ ವೇಷದಲ್ಲಿ ಬಂದು ಇವನ ಆರೈಕೆ ಮಾಡಿ ಹೋಗುತ್ತಾನೆ.ಆಗ ಕನಕಪ್ಪನಿಗೆ ತಾನುಉಳಿದದ್ದು ಆದಿಕೇಶವನ ಅನುಗ್ರಹದಿಂದ ಎಂದುತಿಳಿದುಪೂರ್ಣವೈರಾಗ್ಯತಾಳುತ್ತಾನೆ.ಆದಿಕೇಶವನುಇವನ ಕನಸಿನಲ್ಲಿ ಶ್ರೀವ್ಯಾಸರಾಯರ ಬಳಿ Kanaka Dasa Jayanti 2024 ಹೋಗಿಹರಿದಾಸದೀಕ್ಷೆಪಡೆಯುವಂತೆಸೂಚಿಸುತ್ತಾನೆ.ಸ್ವಪ್ನಸೂಚನೆಯಂತೆಕನಕಪ್ಪನುಶ್ರೀವ್ಯಾಸರಾಯರನ್ನುಭೇಟಿಯಾಗಿಅವರಿಂದದಾಸದೀಕ್ಷೆಯನ್ನುಪಡೆದು,ಕನಕದಾಸರೆಂದಾಗುತ್ತಾರೆ.ಇವರ ಅಂಕಿತ ಆದಿಕೇಶವ.ಕನಕದಾಸರು ಚಿನ್ನದ ಬದುಕಿಗೆ ದಾಸರಾಗದೆ ಎಲ್ಲ ಮೋಹವನ್ನೂ ತ್ಯಾಗಮಾಡಿ ಶ್ರೀಕೃಷ್ಣ ಪರಮಾತ್ಮನನ್ನೇಒಲಿಸಿಕೊಂಡ ಅಪ್ಪಟ ಚಿನ್ನವಾದವರು.ನುಡಿದಂತೆ ನಡೆ ಇದೇ ಜನ್ಮ ಕಡೆ ,ಬಾಗಿನಡೆದರೆಬಾಳುಬಂಗಾರನಾನುನೀನುಎನ್ನದಿರುಹೀನಮಾನವ.”ನಾನು”ಹೋದರೆಹೋದೇನು.ಎಂದರೆನಾನುನನ್ನದುಎಂಬಅಹಂಕಾರಹೋಗಬೇಕು ಎಂಬುದು ದಾಸರಅಭಿಪ್ರಾಯ.ತಮ್ಮಜೀವನದ ಅನುಭವ ಮತ್ತು ಅನುಭಾವಗಳ ಮೂಲಕ ನಡೆ-ನುಡಿಗಳೊಂದಿಗೆಸಾಮಾಜಿಕ,ವೈಚಾರಿಕ,
ಆಧ್ಯಾತ್ಮಿಕ,ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಮಾಜ ತಿದ್ದುವಕೈಂಕರ್ಯವನ್ನುತಿದ್ದುವಕೆಲಸಮಾಡಿದವರು ಶ್ರೀಕನಕದಾಸರು.ಕನಕದಾಸರು ಪುರಂದರದಾಸರ ಸಮಕಾಲೀನರು.ಈ ಇಬ್ಬರು ದಾಸರು ಭಕ್ತಿಮಾರ್ಗ
ದಲ್ಲಿ ಸಾಗಿದವರು.ದಾಸ ಸಾಹಿತ್ಯದ ಕಾಲದ ಶ್ರೇಷ್ಠ ಸಂತರೆನಿಸಿದ್ದಾರೆ.ಜನತೆಯನ್ನು ಭಕ್ತಿಮಾರ್ಗದಲ್ಲಿ ಮುನ್ನಡೆಸಿದ ಶ್ರೇಷ್ಠ ಸಂತರು ಎನಿಸಿಕೊಂಡಿದ್ದಾರೆ.
ಶ್ರೀಕನಕದಾಸರಜಯಂತಿಯಂದು,ಶ್ರೀದಾಸರಸ್ಮರಣೆ ಮಾಡಿ ,ಭಕ್ತಿಯ ನಮನಗಳನ್ನು ಸಲ್ಲಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...