Friday, July 10, 2026
Friday, July 10, 2026

Bharat Scout and Guide ಜಿಲ್ಲಾ ಸ್ಕೌಟ್ & ಗೈಡ್ಸ್ ವತಿಯಿಂದ ವಿ ಸ್ಕಾರ್ಫ್ ದಿನಾಚರಣೆ

Date:

Bharat Scout and Guide ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ “ವಿಶ್ವ ಸ್ಕಾರ್ಫ್ ಡೆ ಹಾಗೂ ಸ್ಕೌಟಿಂಗ್ ಸೂರ್ಯೋದಯ ದಿನಾಚರಣೆ”ಯನ್ನು ಆಚರಿಸಲಾಯಿತು.

ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಆರಂಭವಾಯಿತು. ಸಭಾ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ರಾಜೇಶ್.ವಿ.ಅವಲಕ್ಕಿ. ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಇವರು ದಿನದ ಮಹತ್ವವನ್ನು ಸರ್ವರಿಗೂ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಕೌಟಿಂಗ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೋವೆಲ್ ಹಾಗೂ ಶ್ರೀಮತಿ ಲೇಡಿ ಬೇಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಸ್ಕಾರ್ಫ್ ಧರಿಸುವ ಮೂಲಕ ಗೌರವಿಸಲಾಯಿತು.

ಶ್ರೀಮತಿ ಗೀತಾ ಚಿಕ್ಮಠ್ ಜಿಲ್ಲಾ ತರಬೇತಿ ಆಯುಕ್ತರು(ಗೈಡ್) ಇವರು ಸ್ಕೌಟ್ ಗೈಡ್ ವಂದನೆಯೊಂದಿಗೆ ಪ್ರತಿಜ್ಞೆಯ ಪುನರುಚ್ಛಾರಣೆ ಮಾಡಿಸಿದರು.

Bharat Scout and Guide ನಂತರ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡಿದ ಜಿಲ್ಲಾಮುಖ್ಯ ಆಯುಕ್ತರಾದ ಶ್ರೀ.ಕೆ.ಪಿ.ಬಿಂದುಕುಮಾರ್ ಅವರು ವಿಶ್ವ ಸ್ಕಾರ್ಫ್ ದಿನಾಚರಣೆಯ ಪರಿಕಲ್ಪನೆಯಂತೆ ಈ ಹಿಂದೆ ಸ್ಕೌಟಿಂಗ್ ಚಳುವಳಿಯಲ್ಲಿದ್ದವರು ಹಾಗೂ ಪ್ರಸ್ತುತ ಸಕ್ರಿಯವಾಗಿ ರುವ ಎಲ್ಲಾ ಸದಸ್ಯರು ಸಾರ್ವಜನಿಕವಾಗಿ ಸ್ಕಾರ್ಫ್ ನ್ನು ಧರಿಸಿ ಎಂದೆಂದಿಗೂ ಸ್ಕೌಟಿಂಗ್ ಚಳುವಳಿಯ ತತ್ವಗಳನ್ನು ಪ್ರಚಾರಪಡಿಸ ಬೇಕೆಂದು ಹೇಳುತ್ತಾ” ಒಮ್ಮೆ ಸ್ಕೌಟ್ ಆದರೆ ಆತ ಯಾವಾಗಲೂ ಸ್ಕೌಟ್ ಆಗಿರುತ್ತಾನೆ ಎಂದು ಕರೆ ನೀಡಿದರು.

ನಗರದ ವಿವಿಧ ಶಾಲೆಗಳ ಸ್ಕೌಟ್ ಮತ್ತು ಗೈಡ್ ಮಕ್ಕಳು ಹಾಗೂ ದಳನಾಯಕರುಗಳಾದ ಶ್ರೀಮತಿ.M.L.ಶಾಂತಮ್ಮ, ಶ್ರೀಮತಿ. M.ಹೇಮಲತಾ. ಶ್ರೀಮತಿ.ಸುನಂದಮ್ಮ. ಶ್ರೀಮತಿ ನಾಗಪ್ರಿಯಾ, ಶ್ರೀ.ಕೃಷ್ಣಸ್ವಾಮಿ, ಪ್ರತಿನಿಧಿ ಭದ್ರಾವತಿ, ಶ್ರೀ. ನಾಗರಾಜ್, ಹಿರಿಯ ಸ್ಕೌಟ್ ಮಾಸ್ಟರ್, ಶ್ರೀ ವಿವೆಕಾನಂದ ಮಾನೆ , ಸ್ಕೌಟ್ ಮಾಸ್ಟರ್. ಜಿಲ್ಲಾ. ಸಹಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ,ಹಾಗೂ ಜಿಲ್ಲಾ ಸಂಸ್ಥೆಯ ಸಿಬ್ಬಂಧಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಸಂಸ್ಥೆಯ ಕಾರ್ಯದರ್ಶಿ ಶ್ರೀ ಪರಮೇಶ್ವರ ಸ್ವಾಗತವನ್ನು ಕೋರಿದರು. ಶ್ರೀ.ಜಿ. ವಿಜಯಕುಮಾರ್.PRO. ವಂದನಾರ್ಪಣೆ ಮಾಡಿದರು. ಶ್ರೀ ರಾಜೇಶ್.ವಿ.ಅವಲಕ್ಕಿ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ...

Friends Center Organization ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಪ್ರಸಿದ್ಧಿ ಪಡೆದಿದೆ- ಎಸ್.ಎನ್.ಚನ್ನಬಸಪ್ಪ

Friends Center Organization ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಗಳನ್ನು...

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....