Friday, June 13, 2025
Friday, June 13, 2025

Shatabdi Train ಬಸ್ ಚಾಲಕ ಶತಾಬ್ದಿ ರೈಲಿಗೆ ಸಿಕ್ಕು ದುರ್ಮರಣ

Date:

Shatabdi Train ಜನಶತಾಬ್ದಿ ರೈಲಿಗೆ ಸಿಲುಕಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಲವಗೊಪ್ಪದ ರೈಲ್ವೆ ಟ್ರ‍್ಯಾಕ್ ಬಳಿ ಸಂಭವಿಸಿದೆ.
೧೨೦೯೦ ಕ್ರಮ ಸಂಖ್ಯೆಯ ಜನಶತಾಬ್ದಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ಗುರುವಾರ ಮುಂಜಾನೆ ಬೆಳಿಗ್ಗೆ ೫-೧೫ ಕ್ಕೆ ಬಿಟ್ಟು ಮಲವಗೊಪ್ಪದ ಬಳಿ ಬಂದಾಗ ಬಸ್ ಚಾಲಕ ರೈಲಿಗೆ ಸಿಲುಕಿ ಸಾವು ಕಂಡಿದ್ದಾನೆ.
Shatabdi Train ಚಾಲಕನ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಸಾವುಕಂಡಿದ್ದಾನೋ ಗೊತ್ತಾಗಬೇಕಿದೆ. ಮೃತÀ ಕೆಎಸ್ ಆರ್ ಟಿಸಿ ಚಾಲಕನನ್ನು ಗಣೇಶ್ ವಿ ಎಂದು ಗುರುತಿಸಲಾಗಿದೆ.
ಗಣೇಶ್ ವಿ (೪೦) ಭದ್ರಾವತಿ ಡಿಪೋದ ಚಾಲಕನಾಗಿದ್ದು ಕಳೆದ ಮೂರು ವರ್ಷದ ಹಿಂದೆ ಸಂಸ್ಥೆಗೆ ಚಾಲಕನಾಗಿ ಸೇರ್ಪಡೆಗೊಂಡಿದ್ದರು. ಇವರ ತಂದೆಯೂ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದು ಇವರ ಅಕಾಲಿಕ ಮರಣದಿಂದ ಗಣೇಶ್ ಗೆ ಕೆಲಸ ಲಭಿಸಿತ್ತು. ಗಣೇಶ್ ಶಿವಮೊಗ್ಗದ ಹರಕೆರೆ ನಿವಾಸಿಯಾಗಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...