Shatabdi Train ಜನಶತಾಬ್ದಿ ರೈಲಿಗೆ ಸಿಲುಕಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಲವಗೊಪ್ಪದ ರೈಲ್ವೆ ಟ್ರ್ಯಾಕ್ ಬಳಿ ಸಂಭವಿಸಿದೆ.
೧೨೦೯೦ ಕ್ರಮ ಸಂಖ್ಯೆಯ ಜನಶತಾಬ್ದಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ಗುರುವಾರ ಮುಂಜಾನೆ ಬೆಳಿಗ್ಗೆ ೫-೧೫ ಕ್ಕೆ ಬಿಟ್ಟು ಮಲವಗೊಪ್ಪದ ಬಳಿ ಬಂದಾಗ ಬಸ್ ಚಾಲಕ ರೈಲಿಗೆ ಸಿಲುಕಿ ಸಾವು ಕಂಡಿದ್ದಾನೆ.
Shatabdi Train ಚಾಲಕನ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಸಾವುಕಂಡಿದ್ದಾನೋ ಗೊತ್ತಾಗಬೇಕಿದೆ. ಮೃತÀ ಕೆಎಸ್ ಆರ್ ಟಿಸಿ ಚಾಲಕನನ್ನು ಗಣೇಶ್ ವಿ ಎಂದು ಗುರುತಿಸಲಾಗಿದೆ.
ಗಣೇಶ್ ವಿ (೪೦) ಭದ್ರಾವತಿ ಡಿಪೋದ ಚಾಲಕನಾಗಿದ್ದು ಕಳೆದ ಮೂರು ವರ್ಷದ ಹಿಂದೆ ಸಂಸ್ಥೆಗೆ ಚಾಲಕನಾಗಿ ಸೇರ್ಪಡೆಗೊಂಡಿದ್ದರು. ಇವರ ತಂದೆಯೂ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದು ಇವರ ಅಕಾಲಿಕ ಮರಣದಿಂದ ಗಣೇಶ್ ಗೆ ಕೆಲಸ ಲಭಿಸಿತ್ತು. ಗಣೇಶ್ ಶಿವಮೊಗ್ಗದ ಹರಕೆರೆ ನಿವಾಸಿಯಾಗಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Shatabdi Train ಬಸ್ ಚಾಲಕ ಶತಾಬ್ದಿ ರೈಲಿಗೆ ಸಿಕ್ಕು ದುರ್ಮರಣ
Date: