Saturday, May 16, 2026
Saturday, May 16, 2026

Sahyadri Ranga Taranga ಜೂನ್ 9 ರಂದು” ಡೈರೆಕ್ಟ್ ಆಕ್ಷನ್” ನಾಟಕ ಪ್ರದರ್ಶನ

Date:

Sahyadri Ranga Taranga ಸಹ್ಯಾದ್ರಿ ರಂಗತರಂಗ, ರೈತ ಸಂಘ ಮತ್ತು ಹಸಿರು ಸೇನೆ ಇವರ ಸಹಯೋಗದಲ್ಲಿ ರೈತ ಹೋರಾಟಗಾರ ಎಂ ಡಿ ನಂಜುಡಸ್ವಾಮಿ ಅವರ ಜೀವನಾಧಾರಿತ ನಾಟಕ ಡೈರೆಕ್ಟ್ ಆಕ್ಷನ್ ಜೂನ್ ೯ರಂದು ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಲ್ಪಡಲಿದೆ.
ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಾಟಕದ ನಿರ್ದೇಶಕ ಕಾಂತೇಶ್ ಕದರಮಂಡಲಗಿ, ನಾಟಕವನ್ನು ಪ್ರೊ. ನಟರಾಜ ಹುಳಿಯಾರ್ ರಚಿಸಿದ್ದು, ತಾನು ನಿರ್ದೇಶಿಸಿದ್ದೇನೆ. ರಾಘವೇಂಧ್ರ ಪ್ರಭು ಅವರ ಸಂಗೀತವಿದೆ. ಮಂಜುನಾಥ ಕೂದುವಳ್ಳಿ ಬೆಳಕಿನ ನಿರ್ದೇಶನ ಮಾಡಿದ್ದಾರೆ. ನಂಜುಂಡಸ್ವಾಮಿಯವರ ಹೋರಾಟ, ರೈತ ಸಂಘವನ್ನು ರಾಜ್ಯದ ಮೂಲೆಮೂಲೆಯವರೆಗೆ ತಿರುಗಿ ಕಟ್ಟಿದ್ದು, ಡಬ್ಲ್ಯುಟಿಓ, ವಿರುದ್ಧ ಹೋರಾಟ, ರೈತರ ಬದುಕನ್ನು ಹಸನುಗೊಳಿಸಲು ಮಾಡಿದ ಯತ್ನ, ಕಿವುಡು ವ್ಯವಸ್ಥೆಯ ವಿರುದ್ಧ್ದ ಸಿಡಿದೆದ್ದಿದ್ದನ್ನು ನಾಟಕದಲ್ಲಿ ತೋರಿಲಾಗಿದೆ ಎಂದರು.
ಡೈರೆಕ್ಟ ಆಕ್ಷನ್ ಎನ್ನುವ ಪದ ಬಳಕೆ ನೇರ ಕ್ರಮ ಎನ್ನುವ ಅರ್ಥಕ್ಕೆ ಸಂಬಂಧಿಸಿದ್ದಾಗಿದೆ. ಈ ಪದವನ್ನು ನಂಜುಂಡಸ್ವಾಮಿಯವರು ಜಡ್ಡುಗಟ್ಟಿದ ಸರಕಾರಿ ವ್ಯವಸ್ಥೆಯ ವಿರುದ್ಧ ಬಳಸಿದರು.. ಶೇ. ೭೫ರಷ್ಟು ರೈತರು ಈ ನಾಡಿನಲ್ಲಿದ್ದರೂ ಸರಕಾರಗಳು ಅವರ ನೋವುಗಳಿಗೆ ಸ್ಪಂದಿಸದೆ ಉದ್ಯಮಿಗಳನ್ನು ಓಲೈಸುವ ಹಿನ್ನೆಲೆಯಲ್ಲಿ ಬಳಸುತ್ತಿದ್ದರು ಎಂದರು.
Sahyadri Ranga Taranga ಅಂದು ಸಂಜೆ ೬ ಗಂಟೆಗೆ ನಾಟಕ ಆರಂಭವಾಗಲಿದೆ. ಇದರಲ್ಲಿ ನಂಜುಂಡಸ್ವಾಮಿಯ ಪಾತ್ರವನ್ನು ನಿವೃತ್ತ ಪ್ರಾಚಾರ್ಯ ನಾಗಭೂಷಣ ನಿರ್ವಹಿಸುವರು. ಎಚ್ ಎಸ್ ರುದ್ರಪ್ಪ ಪಾತ್ರವನ್ನು ದಿನೇಶ್ ಬಾಯಾರ್, ಶಾಮಣ್ಣನ ಪಾತ್ರವನ್ನು ಆರ್. ನಿಖಿಲ್, ಸುಂದರೇಶ್ ಪಾತ್ರವನ್ನು ವೇದಮೂರ್ತಿ ಮತ್ತು ಗಂಗಾಧರ ಪಾತ್ರವನ್ನು ಗಂಗಾಧರ್ ಅವರೇ ನಿರ್ವಹಿಸುವರು. ನಾಟಕಕ್ಕೆ ೫೦ ರೂ. ಗೌರವ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ನಾಗಭೂಷಣ, ಕೆ ಟಿ ಗಂಗಾಧರ್, ತಿಪ್ಪಣ್ಣ, ಚಂದ್ರೇಗೌಡ, ಕೆ ಜಿ ವೆಂಕಟೇಶ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...