Wednesday, October 2, 2024
Wednesday, October 2, 2024

Dr. Kiran ಬೈಸಿಕಲ್ ನಲ್ಲಿ ಮನೆ ಭೇಟಿಗೆ ಬರುತ್ತಿದ್ದ ಜನಪ್ರಿಯ “ಕಿರಣ್ ಡಾಕ್ಟರ್” ಇನ್ನಿಲ್ಲ

Date:

Dr. Kiran ರಿಪ್ಪನ್ ಪೇಟೆ ಪಟ್ಟಣದಲ್ಲಿ ನಾಲ್ಕು ದಶಕಗಳ ಕಾಲ( ಕಿರಣ್ ಕ್ಲಿನಿಕ್ ) ಮೂಲಕ ವೈದ್ಯಕೀಯ ಸೇವೆ ಸಲ್ಲಿಸಿದ ಡಾಕ್ಟರ್ ಟಿ. ಆರ್. ಮಂಜುನಾಥ್ ರಾವ್ ಯಾನೆ
ಕಿರಣ್ ಡಾಕ್ಟರ್ (84) ಅವರು ಬುಧವಾರ ತೀರ್ಥಹಳ್ಳಿಯ ಪುತ್ರನ ಮನೆಯಲ್ಲಿ ಅಲ್ಪ ಕಾಲದ ಅನಾರೋಗ್ಯ
ದಿಂದ ನಿಧನರಾದರು.ಮೂಲತಃ ಚಿಕ್ಕ ಮಗಳೂರು ಜಿಲ್ಲೆ. ಬಾಳೆಹೊನ್ನೂರಿನವರಾದ ಇವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು 1972 ರಲ್ಲಿ ರಿಪ್ಪನ್ ಪೇಟೆಯಲ್ಲಿ ಖಾಸಗಿ ಕ್ಲಿನಿಕ್ ತೆರೆದು ವೈದ್ಯಕೀಯ ವೃತ್ತಿ ಆರಂಭಿಸಿದರು. ಬೆಳ್ಳೂರು, ಮಸ್ಕಾನಿ, ಬಸವಾ ಪುರ, ಅರಸಾಳು, ಕಲ್ಲೂರು, ಜಂಬಳ್ಳಿ, ಜೇನಿ, ಹರತಾಳು ಸೇರಿದಂತೆ ಸುತ್ತ, ಮುತ್ತಲಿನ ಗ್ರಾಮೀಣ ಭಾಗದಲ್ಲಿನ ಜನರಿಗೆ ಬೈಸಿಕಲ್ ನಲ್ಲಿ ತೆರಳಿ ಕೇವಲ ಎರಡು ರೂ ನಲ್ಲಿ ಚುಚ್ಚು ಮದ್ದು ನೀಡುವ ಮೂಲಕ ಇವರು ಕಿರಣ್ ಡಾಕ್ಟರ್ ಎಂದು
ಪ್ರಖ್ಯಾತಿ ಹೊಂದಿದ್ದರು.
Dr. Kiran ನಂತರ ಇವರ ಮಗ ಗಣೇಶ್ ನಾಯಕ್ ರವರು ತೀರ್ಥಹಳ್ಳಿ ಯಲ್ಲಿ ಕಿರಣ್ ಹೆಲ್ತ್ ಕೇರ್ ಎಂಬ ನರ್ಸಿಂಗ್ ಹೋಂ ಪ್ರಾರಂಭ ಮಾಡಿದ ತರುವಾಯು, ಇವರ ವೈದ್ಯಕೀಯ ಸೇವೆ ಇಂದ ನಿವೃತ್ತಿ ಪಡೆದು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದು ವಿಶ್ರಾಂತಿ ಜೀವನ ನಡೆಸುತ್ತಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...