Wednesday, September 16, 2026
Wednesday, September 16, 2026

S N Channabasappa ಜ್ಞಾನವ್ಯಾಪಿ-ಮಸೀದಿ ಬಗ್ಗೆ ನ್ಯಾಯಾಲಯ ತೀರ್ಪಿನ ಬಗೆಗಿನ ವಿವಾದ ,ಚಾಂದ್ ಪಾಷಾ ಅವರ ಬಂಧನಕ್ಕೆ ಆಗ್ರಹ

Date:

S N Channabasappa ಜ್ಞಾನವಾಪಿ ಮಸೀದಿ ವಿಷಯದಲ್ಲಿ ನ್ಯಾಯಾಲಯ ನೀಡಿದ ಆದೇಶವನ್ನು ನಿಂದನೆ ಮಾಡುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ರಾಮನಗರದ ನ್ಯಾಯವಾದಿ ಚಾಂದ್ ಪಾಷಾ ಅವರನ್ನು ಬಂಧಿಸಿ ಎನ್‌ಐಎ ತನಿಖೆಯನ್ನು ನಡೆಸಬೇಕೆಂದು ಶಾಸಕ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದರು..

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಇಂತಹ ಕೃತ್ಯವನ್ನು ಎಸಗುತ್ತಾರೆ. ದೇಶವನ್ನು ಅಸ್ಥಿರಗೊಳಿಸುವಂತಹ ಇಂತಹ ವ್ಯಕ್ತಿ ವಿರುದ್ದ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸವಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಯೇ ಸೂಕ್ತ ಎಂದರು.

ಈತನ ವಿರುದ್ದ ಸ್ಥಳೀಯ ವಕೀಲರು ದೂರು ನೀಡಿದರೆ ಠಾಣೆಯ ಎಸ್‌ಐ ತನ್ವೀರ್ ಅಹಮ್ಮದ್ ದೂರು ದಾಖಲಿಸಿಲ್ಲ. ಪಾಷಾ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ದುರಂತವೆಂದರೆ ದೂರು ಕೊಟ್ಟವರ ಮೇಲೆಯೇ ಬೆದರಿಕೆ ಹಾಕಲಾಗಿದೆ. ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

S N Channabasappa ದೇಶದ್ರೋಹಿಗಳ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಪರೀಕ್ಷಾ ವೇಳಾಪಟ್ಟಿಯಲ್ಲಾದ ಸಮಯದ ಬದಲಾವಣೆಯನ್ನು ಏಕೆ ಎಂದು ಪ್ರಶ್ನಿಸಿದ ಚಕ್ರವರ್ತಿ ಸೂಲಿಬೆಲೆಯ ಮೇಲೆ ಎಫ್‌ಐಆರ್ ಮಾಡಲಾಗುತ್ತದೆ ಎಂದು ಟೀಕಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...