Thursday, April 24, 2025
Thursday, April 24, 2025

Klive Special Article ರಾಜ್ಯ ಪತ್ರಕರ್ತರ ಸಮಾವೇಶ- ಹಿರಿಯ ಮಾಧ್ಯಮ ತಜ್ಞ ಶೇಷಚಂದ್ರಿಕ ಅವರ ಟಿಪ್ಪಣಿ

Date:

Klive Special Article ನೆನಪು ಹಾರಿಹೋಗುವ ಮುನ್ನ…

ದಾವಣಗೆರೆ ಪತ್ರಕರ್ತರ ಮೇಳ ಕುರಿತು ಇನ್ನೂ
ಒಂದೆರಡು ಅನಿಸಿಕೆ –
ಅಭಿಪ್ರಾಯ ಹೇಳುವುದಿದೆ.

  1. ಇಬ್ಬರು ಪತ್ರಕರ್ತರು
    ಪರಸ್ಪರ ಒಮ್ಮತಕ್ಕೆ ಬರುವುದು ಕಷ್ಟ ಎನ್ನುವ
    ಪರಿಸ್ಥಿತಿ ನಮ್ಮದು. ಇಂತಹ ವಾತಾವರಣದಲ್ಲಿ ನಾಡಿನ ಸಾವಿರಕ್ಕೂ ಹೆಚ್ಚು ಪತ್ರಕರ್ತರು ಎರಡು ದಿನ ಒಮ್ಮನಸ್ಸಿನ ಕಲಾಪ ನಡೆಸಿದರು, ಕಷ್ಟ-ಸುಖ
    ಹಂಚಿಕೊಂಡರು ಮತ್ತು
    ಸರ್ವಾನುಮತದ ನಿರ್ಣಯಗಳಿಗೆ ಕೈ ಜೋಡಿಸಿದರು ಎಂದರೆ
    ಆಶ್ಚರ್ಯ ನಿಶ್ಚಿತ.
    (ನಾನು ಮತ್ತು ಈಶ್ವರ
    ದೈತೋಟರು ವೇದಿಕೆ
    ಮೇಲೆ ಮತ್ತು ಕೆಳಗೆ ಇದ್ದು ಕಂಡ ದೃಶ್ಯ ಇದು)

2.ಕೇವಲ ಬೆಂಗಳೂರಿನ
ತಜ್ಞರು ಇಂತಹ ಮೇಳ-
ದಲ್ಲಿ ಭಾಗವಹಿಸಿ, ತಮ್ಮ
ವೃತ್ತಿಪ್ರಭುತ್ವ ಹೇಳಿ ಹೋಗುವುದು ಸರ್ವೇ
ಸಾಮಾನ್ಯ. ದಾವಣಗೆರೆ
ಸಮ್ಮೇಳನದಲ್ಲಿ ಗ್ರಾಮೀಣ ಮತ್ತು ಜಿಲ್ಲಾ
ಪತ್ರಕರ್ತರು ತಮ್ಮ ಕಷ್ಟ
ಸುಖ ಹೇಳಿಕೊಳ್ಳಲು
ಅವಕಾಶವಿದ್ದದ್ದು ಮೆಚ್ಚುವ ಸಂಗತಿ.

  1. ವಿಶಾಲ ಸಭಾಸದನ,
    ಹಳ್ಳಿ ತಿಂಡಿ, ರೊಟ್ಟಿ ಊಟ – ಹೀಗೆ ಉದಾರ
    ಮನಸ್ಸಿನ ಸ್ಥಳೀಯ
    ಪತ್ರಕರ್ತರ ವ್ಯವಸ್ಥೆ :
    ಅಣ್ಣ ಶಾಮನೂರರ
    ಮೇಲುಸ್ತುವಾರಿ.. ಇತ್ಯಾದಿ ಸತ್ಕಾರವ್ಯೆಭವ
    ವರ್ಣನೆಗೆ ಮೀರಿದಂತಿತ್ತು.
  2. KUWJ ಪದಾಧಿಕಾರಿಗಳು ನಿರ್ವಹಿಸಿದ ಎಚ್ಚರಿಕೆ,
    ಕಾರ್ಯಕ್ರಮನಿರ್ವಹಣೆ
    ಮತ್ತು ಸಮನ್ವಯತೆ
    ಅಭಿನಂದನಾರ್ಹ.
    ಸಂಘಟನೆಯ ರೂವಾರಿ
    ಮತ್ತು KUWJ ಅಧ್ಯಕ್ಷ
    ಶಿವಾನಂದ ತಗಡೂರರ
    ಸಾರಥ್ಯ ಸದಾಕಾಲ
    ನೆನಪಿನಲ್ಲಿ ಇರುವಂತೆ
    ವಿಜೃಂಭಣೆಯಿಂದ
    ಸಮಾವೇಶ ನಡೆಯಿತು.
    –ಭಾಗವಹಿಸಿದ ಪತ್ರಕರ್ತರ ಪರವಾಗಿ.

Klive Special Article ಲೇ: ಶೇಷಣ್ಣ, ಈಶ್ವರ ದೈತೋಟ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...