Thursday, April 24, 2025
Thursday, April 24, 2025

Sports News ತನಿಶಿ ಕ್ರಿಕೆಟರ್ಸ್ ವಿನೋಬನಗರ ತಂಡಕ್ಕೆ ಟ್ಯಾಂಕ್ ಪ್ರಿಮೀಯರ್ ಲೀಗ್ಸೀಸನ್ 2 ಪ್ರಶಸ್ತಿ

Date:

Sports News ಶಿವಮೊಗ್ಗ, ವಿನೋಬನಗರದ ಸಿಹಿಮೊಗ್ಗೆ ಕನ್ನಡ ಯುವ ವೇದಿಕೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಯುವಪಡೆ ವತಿಯಿಂದ ಫೆ.೩ ಮತ್ತು ೪ರಂದು ಎ.ಟಿ.ಎನ್.ಸಿ.ಸಿ ಮೈದಾನದಲ್ಲಿ ಆಯೋಜಿಸಿದ್ದ ‘ಟೆನ್ನಿಸ್ ಬಾಲ್ ಕ್ರಿಕೇಟ್’ ಪಂದ್ಯಾವಳಿಯ ಟ್ಯಾಂಕ್ ಪ್ರೀಮಿಯರ್ ಲೀಗ್ ಸೀಸನ್-2ರಲ್ಲಿ ತನಿಶಿ ಕ್ರಿಕೆಟರ್ಸ್ ವಿನೋಬನಗರ ತಂಡವು ಎ.ಜೆ. ಕ್ರಿಕೆಟರ್ಸ್ ವಿನೋಬನಗರ ತಂಡದ ವಿರುದ್ಧ 18ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸುವ ಮುಖಾಂತರ ಟ್ಯಾಂಕ್ ಪ್ರೀಮಿಯರ್ ಲೀಗ್ ಕಪ್ ತನ್ನ ಮುಡಿಗೆರಿಸಿಕೊಂಡಿದೆ.
ಎರಡು ದಿನಗಳ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದೆ.

ವಿಶೇಷವಾಗಿ ವಿನೋಬನಗರ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ನೇತೃತ್ವದಲ್ಲಿ ಪೊಲೀಸ್ ತಂಡ ಎರಡು ಲೀಗ್ ಮ್ಯಾಚ್‌ಗಳಲ್ಲಿ ಹಾಗೂ ಶಿವಾಲಯ ಟ್ಯಾಂಕನ ಗುರುಪ್ರಸಾದ್ ಅವರ ನೇತೃತ್ವದ ಕಡ್ಡಿಪುಡಿ ತಂಡ ಅತಿ ಉತ್ಸಾಹಕತೆಯಿಂದ ಆಟವಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಈ ಪಂದ್ಯಾವಳಿಯ ಮುಖ್ಯ ರೂವಾರಿಗಳಾಗಿ ಖ್ಯಾತ ಉದ್ಯಮಿ ಪರಮೇಶ್ವರ್, ಮಾಜಿ ಉಪ ಮೇಯರ್ ಹೆಚ್.ಪಾಲಾಕ್ಷಿ, ಕಾಂಗ್ರೆಸ್ ಪಕ್ಷದ ಯುವ ನಾಯಕ ಕೆ.ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರೀಶ್, ಭಾಗವಹಿಸಿದ್ದರು.

Sports News ಈ ಸಂದರ್ಭದಲ್ಲಿ ಆಯೋಜಕರು ಹಾಗೂ ಸಿಹಿಮೊಗ್ಗೆ ಕನ್ನಡ ಯುವ ವೇದಿಕೆಯ ಅಧ್ಯಕ್ಷ ಟಿ.ಗುರುಪ್ರಸಾದ್, ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಯುವ ಪಡೆಯ ಅಧ್ಯಕ್ಷ ಸಂದೀಪ್ ಸುಂದರ್‌ರಾಜ್ ಪ್ರಮುಖರಾದ ಶ್ರೀಕಾಂತ್, ರಮೇಶ್, ಜಶ್ವಂತ್, ರಾಯಲ್ಸ್ ಟೀಮ್‌ನ ಸಂತೋಷ್, ಲೋಹಿತ್, ಮನೋಜ್, ರವಿಕಿರಣ್, ರವಿ, ಜಿಮ್ ಶರತ್, ಹರೀಶ್, ಚಂದನ್, ಮಾಲತೇಶ್, ಚಂದನ್, ಕಾರ್ತಿಕ್ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...