Sunday, August 2, 2026
Sunday, August 2, 2026

Harathalu Halappa ನನ್ನ ಶಾಸಕ ಅವಧಿಯಲ್ಲಿ₹1,50 ಕೋಟಿ ಅನುದಾನವಿತ್ತು. ಈಗಿನ ಶಾಸಕರು ಅದಕ್ಕೂ ಹೆಚ್ಚು ತರಲಿ- ಹರತಾಳು ಹಾಲಪ್ಪ

Date:

Harathalu Halappa ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಶುಕ್ರವಾರ ರಿಪ್ಪನಪೇಟೆ ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಂತರ ಅವರು, ಪತ್ರಕರ್ತರೊಂದಿಗೆ ಮಾತನಾಡಿ,ಪ್ರಜಾಪ್ರಭುತ್ವ ವ್ಯವಸ್ಥೆ ಅಂದರೆ ಹಾಗೆ ಯಾರು ಚುನಾಯಿತ ಪ್ರತಿನಿಧಿ ಆಗಿರುತ್ತಾರೋ ಅವರೇ ಉದ್ಘಾಟನೆ ಹಾಗೂ ಗುದ್ದಲಿಪೂಜೆ ಮಾಡಬೇಕು. ಆದರೆ, ಯಾರೋ ತಂದ ಅನುದಾನಕ್ಕೆ ನಾನೇ ತಂದೆ ಎಂದು ಸುಳ್ಳು ಹೇಳಿಕೊಂಡು ತಿರುಗುವುದು ಬಿಡಬೇಕು. ಸರ್ಕಾರದಿಂದ ಅನುದಾನ ತರುವುದು ಒಂದು ಕಲೆ ಹಾಗೂ ಸಾಮರ್ಥ್ಯ ವಿಧಾನಸೌಧದ ಕಂಬ-ಕಂಬಗಳನ್ನು ಸುತ್ತಿ ಓಡಾಡಬೇಕು ಹಾಗಿದ್ದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಪಡಿಸಬಹುದು.ಅಮ್ಮನಘಟ್ಟ ಕ್ಷೇತದ ಅಭಿವೃದ್ಧಿಗೆ ನಮ್ಮ ಅವಧಿಯಲ್ಲಿ 1.50 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇವೆ. ಹಾಲಿ ಶಾಸಕರು ಅನುದಾನ ಬಿಡುಗಡೆಗೊಳಿಸುವುದರೊಂದಿಗೆ, ಇನ್ನು ಹೆಚ್ಚಿನ ಅನುದಾನ ತಂದು ತಾಯಿಯ ಪುಣ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ ಎಂದು ಹೇಳಿದರು.

Harathalu Halappa ವಿದ್ಯುತ್ ಲೋಡ್ ಶೆಡ್ಡಿಂಗ್ ಬಗ್ಗೆ ಮಾತನಾಡಿ, ಜನಸಾಮಾನ್ಯರ ದಿನಚರಿ ಪ್ರಾರಂಭವಾಗುವುದೇ ವಿದ್ಯುತ್ ನಿಂದ ಹಾಗೂ ಮುಖ್ಯವಾಗಿ ರೈತರಿಗೆ ತುಂಬಾ ಅನಾನುಕೂಲವಾಗುತ್ತಿರುವ ಬಗ್ಗೆ ನಮ್ಮ ನಾಯಕರು ರಾಜ್ಯಮಟ್ಟದಲ್ಲಿ ಚರ್ಚೆ ನೆಡೆದಿದೆ. ಸಮರ್ಪಕ ವಿದ್ಯುತ್ ಒದಗಿಸುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...