Thursday, June 18, 2026
Thursday, June 18, 2026

B.Y. Raghavendra ನವರಾತ್ರಿಯ ಶುಭಾಶಯ ಕೋರಿದ ಸಂಸದ ಬಿ.ವೈ.ರಾಘವೇಂದ್ರ

Date:

B.Y. Raghavendra ಮತ್ತೆ ಬಂದಿದೆ ಶಕ್ತಿ ದೇವತೆಯನ್ನು ಆರಾಧಿಸುವ ಸಮಯ, ಶಕ್ತಿ ಸ್ವರೂಪಿ ನಾರಿಯರಿಗೆ ನಮಿಸುವ ಸಮಯ.

ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೇ ಇದು, ಹಿಂದೂ ಧರ್ಮದ ಆಚರಣೆಗಳ ವಿಶೇಷವೇ ಇದು: ಇಲ್ಲಿ ಸದಾ ಮುಂಚೂಣಿಯಲ್ಲಿರುವುದು ನಾರಿಶಕ್ತಿ, ಸದಾ ಪ್ರಥಮ ಶ್ರೇಯಸ್ಸು ಸಲ್ಲುವುದು ನಾರಿಸ್ಫೂರ್ತಿಗೆ. ಎಲ್ಲ ಹಬ್ಬಗಳೂ ಸ್ತ್ರೀ ಸಂಭ್ರಮದ ಸುತ್ತಲಲ್ಲೇ ಇರುವಂಥವು. ನವರಾತ್ರಿ ಇನ್ನೂ ವಿಶೇಷವೇಕೆಂದರೆ ಇಲ್ಲಿ ನಾರಿಯ ಮೂರು ಸ್ವರೂಪಗಳನ್ನೂ ಆರಾಧಿಸಲಾಗುತ್ತದೆ: ದುರ್ಗೆ, ಲಕ್ಷ್ಮಿ, ಸರಸ್ವತಿ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ನವರಾತ್ರಿಯ ಶುರುವಾದ ಹಿನ್ನೆಲೆಯಲ್ಲಿ ತಮ್ಮನ್ ಟ್ವಿಟರ್ ಖಾತೆಯಲ್ಲಿ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ.

B.Y Raghavendra ಈ ಮೂರು ಶಕ್ತಿಗಳೇ ಜಗತ್ತಿನ ಚಾಲನಾ ಶಕ್ತಿಗಳು, ಧಾರಣಾ ಶಕ್ತಿಗಳು, ಪ್ರೇರಣಾ ಶಕ್ತಿಗಳು.

ಎಲ್ಲರಿಗೂ ಈ ಮೂರೂ ಶಕ್ತಿದೇವತೆಯರ ಅನುಗ್ರಹ ಸಿಗಲಿ, ಎಲ್ಲರ ಮನೆಯ ಗೃಹಲಕ್ಷ್ಮಿಯರೂ ಸುಖವಾಗಿರಲಿ ಅನ್ನುವುದೇ ನನ್ನ ಪ್ರಾರ್ಥನೆ
ನವರಾತ್ರಿಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...