Wednesday, December 17, 2025
Wednesday, December 17, 2025

Aam Aadmi Party ಅನೇಕ ಭಾಗಗಳಲ್ಲಿ ಬರ ಬಂದಿದೆ.ಕೇವಲ ಘೋಷಣೆ ಸಾಲದು ಪರಿಹಾರ ಕೈಗೊಳ್ಳಿ- ಡಾ.ಸುಂದರಗೌಡ

Date:

Aam Aadmi Party ನಾಡಿನ ರೈತರು ಬರಪೀಡಿತದಿಂದ ಅನುಭವಿಸುತ್ತಿರುವ ಸಂದರ್ಭದಲ್ಲಿ ರಾಜ್ಯಸರ್ಕಾರ ಪರಿಹಾರ ನೀಡುವ ಬಗ್ಗೆ ಚಿಂತಿಸುವ ಬದಲು ಘೋಷಿಸಿದರೆ ರೈತರ ಬದುಕು ಎಂದಿಗೂ ಹಸನಾಗಲು ಸಾಧ್ಯವಿಲ್ಲ ಎಂದು ಆಮ್‌ಆದ್ಮಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ.ಸುಂದರಗೌಡ ಹೇಳಿದ್ದಾರೆ.

ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಯಲುಸೀಮೆಯ ಅನೇಕ ಭಾಗಗಳಲ್ಲಿ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ರೈತರ ಮುಂದಿನ ಜೀವನಕ್ಕೆ ರಾಜ್ಯಸರ್ಕಾರ ಸವಲತ್ತುಗಳನ್ನು ಒದಗಿಸುವ ಬದಲು ಘೋಷಣೆಯಿಂದ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಯಲುನಾಡಿನ ಮುಖ್ಯ ಕೃಷಿ ಉತ್ಪನ್ನವು ಕೊಬ್ಬರಿಯಾಗಿದೆ. ಕಡೂರಿನಲ್ಲಿ ಕಳೆದ ವರ್ಷ 20 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು 8 ಸಾವಿರಕ್ಕೆ ಇಳಿಸಿರುವುದು ಸರ್ಕಾರದ ಬರ ಪರಿಹಾರದ ತೀವ್ರತೆಗೆ ಹಿಡಿದ ಕೈಗನ್ನಡಿ ಯಾಗಿದ್ದು ಕೊಬ್ಬರಿ ಉತ್ಪತ್ತಿ ತೀವ್ರಗತಿಯಲ್ಲಿ ಇಳಿಮುಖವನ್ನು ಕಂಡಿರುವುದು ರೈತರ ಆತ್ಮಹತ್ಯಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ರೈತರು ತೀವ್ರ ಬರವನ್ನು ಅನುಭವಿಸುತ್ತಿರುವ ಸಮಯದಲ್ಲಿ ಬ್ಯಾಂಕಿನವರು, ಮೈಕ್ರೋ ಫೈನಾನ್ಸ್ ನವರು ಹಿಂಸಿಸುವುದರಿಂದ ರೈತ ಮಹಿಳೆಯರು ಕೂಡಾ ಆತ್ಮಹತ್ಯೆಗೆ ಬಲಿಯಾಗಿದ್ದಾರೆ, ರೈತರ ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಕಾಪಾಡುವಲ್ಲಿ ರಾಜ್ಯಸರ್ಕಾರ ವಿಫಲತೆ ಕಾಣಲಾಗುತ್ತಿದೆ ಎಂದು ದೂರಿದ್ದಾರೆ.

Aam Aadmi Party ಇದರ ನಡುವೆ ಮದ್ಯ ಮತ್ತು ವಿದ್ಯುಚ್ಚಕ್ತಿಯ ದುಬಾರಿತನದಿಂದ ಮದ್ಯವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟ ದಲ್ಲಿ ತೆರೆಯಲು ಮುಂದಾಗಿರುವುದು ರೈತರ ಶಕ್ತಿಗುಂದಿಸುವ ಮೂಲಕ ಮಾನವ ಶಕ್ತಿಯ ನಾಶಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ನಿದರ್ಶನವಾಗಿದೆ. ಇನ್ನೊಂದೆಡೆ ವ್ಯಸಮುಕ್ತ ಚಟುವಟಿಕೆ ನಡೆಸಲು ಕರೆ ನೀಡುವ ಸರ್ಕಾರ ಮತ್ತೊಂದೆಡೆ ಮದ್ಯದಾಸರಾಗಲು ಗ್ರಾ.ಪಂ.ಗಳಲ್ಲಿ ತೆರೆಯಲು ಮುಂದಾಗಿರುವುದು ಸರಿಯಿಲ್ಲ.
ವಿದ್ಯುತ್ ಉಚಿತವಾಗಿ ನೀಡುತ್ತೇವೆಂದು ಗ್ರಾಮೀಣ ಜನರಿಂದ ಲೋಡ್‌ಶೆಡ್ಡಿಂಗ್ ಮಾಡುವ ಮುಖಾಂತರ ಉತ್ಪತ್ತಿ ಕುಗ್ಗಿಸುವುದೇ ಸರ್ಕಾರದ ಗುರಿಯೇ.ಇಷ್ಟೆಲ್ಲಾ ಸಾಮಾನ್ಯಜನತೆಗೆ ಉಚಿತವೆಂದು ಹೇಳುವ ಮೂಲಕ ಕಂಡಿಷನ್, ಕಡಿವಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇನ್ನೆಷ್ಟು ದಿನ ಅಧಿಕಾರದಲ್ಲಿ ಮುಂದುವರೆಯಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...