Friday, April 25, 2025
Friday, April 25, 2025

Lions Club ಈವರೆಗೆ ಧರ್ಮಸ್ಥಳ ಸಂಸ್ಥೆಯಿಂದ 1736 ಮದ್ಯವರ್ಜನಾ ಶಿಬಿರಗಳು ನಡೆದಿವೆ- ಗಣೇಶ್

Date:

Lions Club ಶಿರಾಳಕೊಪ್ಪ ಶ್ರೀ ಚನ್ನಬಸವೇಶ್ವರ ಸಮುದಾಯ ಭವನ ಬಸವನಂದಿಹಳ್ಳಿಯಲ್ಲಿ ಶಿಕಾರಿಪುರ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ಲಯನ್ಸ್ ಕ್ಲಬ್ ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಧ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಅಧ್ಯಕ್ಷರಾದ ಯೋಗಿರಾಜ್ , ಗೌರವಾಧ್ಯಕ್ಷರಾದ ಗಿರೀಶ್, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶಿವಯೋಗಿ, ಶಿರಾಳಕೊಪ್ಪ ಉಪನಿರೀಕ್ಷಕ ಮಂಜುನಾಥ್ ಎಸ್.ಕೆ. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಹೇಮಪ್ಪ, ಧರ್ಮಸ್ಥಳ ಸಂಸ್ಥೆಯ ಮುಖ್ಯಸ್ಥರಾದ ಬಾಬು ನಾಯಕ್ ಜಿಲ್ಲಾ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ಜರುಗಿತು. ಅಮಿತಾರವರು ಎಲ್ಲರನ್ನು ಸ್ವಾಗತಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಸಂಘದ ಗಣೇಶ್ ರವರು ಮಾತನಾಡಿ ಈವರೆಗೆ ನಮ್ಮ ಸಂಸ್ಥೆ 1,736 ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದು ಮದ್ಯಪಾನಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಪಡುತ್ತಿರುವ 40 ವರ್ಷದ ಶ್ರಮದ ಬಗ್ಗೆ ವಿವರಿಸಿದರು.
ಬಾಬು ನಾಯಕ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಸಾಮಾಜಿಕ ಕಳಕಳಿಯ ಸೇವೆಗಳು ಮತ್ತು ಸಂಸ್ಥೆಯ ಜಾಲದ ಬಗ್ಗೆ ಸಂಪೂರ್ಣ ವಿವರ ನೀಡಿದರು. ವೇದಿಕೆಯ ಹಲವು ಗಣ್ಯರು ಮಾತನಾಡಿ ಇದೊಂದು ಅತ್ಯುತ್ತಮ ಸೇವಾ ಕಾರ್ಯಕ್ರಮ. ಒಂದು ಪುಣ್ಯದ ಕೆಲಸ ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಿಬಿರಾರ್ಥಿ ಗಳಲ್ಲಿ ಮನವಿ ಮಾಡಿದರು.

Lions Club ಗೌರವಾಧ್ಯಕ್ಷ ಲಯನ್ ಗಿರೀಶ್ ರವರು ಮಾತನಾಡಿ ಲಯನ್ಸ್ ಸಮಾಜದ ಒಳಿತಿಗಾಗಿ ನಡೆಯುವ ಎಲ್ಲಾ ಸೇವ ಕಾರ್ಯಕ್ರಮಗಳಲ್ಲಿ ಕೈಜೋಡಿಸುತ್ತದೆ . ಆ ನಿಟ್ಟಿನಲ್ಲಿ ಇಂತಹ ಉತ್ತಮ ಕಾರ್ಯಕ್ರಮದಲ್ಲಿ ನಮ್ಮನ್ನು ಸೇರಿಸಿಕೊಂಡ ಆಯೋಜಕರಿಗೆ ಅಭಿನಂದಿಸಿದರು.

ಮತ್ತು ಲಯನ್ಸ್ ಸದಾ ನಿಮ್ಮೊಂದಿಗೆ ಇದೆ ಎಂದು ಆಶ್ವಾಸನೆ ನೀಡಿದರು. ಸಮಾರಂಭದ ಅಧ್ಯಕ್ಷರಾದ ಯೋಗಿರಾಜ್ ರವರು ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರತಿಯೊಂದು ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸಿ ಶಿಬಿರ ಆಯೋಜಿಸಿದೆ. ಮುಂದಿನ ಎಂಟು ದಿನಗಳ ಈ ಶಿಬಿರ ನಿಮಗಾಗಿ. ಹಲವಾರು ಸಂಪನ್ಮೂಲದ ವ್ಯಕ್ತಿಗಳು ಚಿಕಿತ್ಸಕರು, ವೈದ್ಯರು, ಭಜನಾ ಮಂಡಳಿಯವರು ಸತತವಾಗಿ ಹಲವಾರು ಕಾರ್ಯಕ್ರಮಗಳೊಂದಿಗೆ ತಮ್ಮ ಮನಪರಿವರ್ತನೆಗೆ ಶ್ರಮಿಸಲಿದ್ದಾರೆ.

ಇದರಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇರುವುದಿಲ್ಲ . ಸಂಪೂರ್ಣ ಶಿಬಿರದ ಖರ್ಚನ್ನು ಎಲ್ಲ ಸಂಘ ಸಂಸ್ಥೆಗಳು ಮಹಿಳಾ ಸಂಘಗಳು ವಹಿಸಿಕೊಂಡಿರುತ್ತಾರೆ. ಅವರ ಕೊಡುಗೆ ಅಭಿನಂದನಾರ್ಹ. ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಿ .ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.

ವಂದನಾರ್ಪಣೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...