Wednesday, July 8, 2026
Wednesday, July 8, 2026

Karnataka Board of School Examination and Valuation ಎಸ್ ಎಸ್ ಎಲ್ ಸಿ & ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರಕವಾಗಿ ಮೂರು ವಾರ್ಷಿಕ ಪರೀಕ್ಷೆ

Date:

Karnataka Board of School Examination and Valuation ಸಾಮಾನ್ಯವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗುತ್ತಿದ್ದರು. ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು ಮುಂದಿನ ವಾರ್ಷಿಕ ಪರೀಕ್ಷೆಗಾಗಿ ಕಾಯಬೇಕಾಗಿತ್ತು.

ಈ ಅವಧಿಯ ಮಧ್ಯೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳದೆ ಶಿಕ್ಷಣದಿಂದ ದೂರ ಉಳಿಯುತ್ತಿದ್ದರು.

ಇದನ್ನು ಹೋಗಲಾಡಿಸುವ ಉದ್ದೇಶದಿಂದ ಇದೇ ಪ್ರಥಮ ಬಾರಿಗೆ ಮಂಡಳಿಯು ದ್ವಿತೀಯ ಪಿಯುಸಿಗೆ ಎರಡನೇ ಪೂರಕ ಪರೀಕ್ಷೆ ಪರಿಚಯಿಸಿತ್ತು.

ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ಪಾಸಾದಲ್ಲಿ ಅಂಕಪಟ್ಟಿಯ ಮೇಲೆ ಪೂರಕ ಪರೀಕ್ಷೆ ಎಂದು ನಮೂದಾಗುತ್ತಿದ್ದರಿಂದ ಇದು ವಿದ್ಯಾರ್ಥಿಗಳಿಗೆ ಮುಜುಗರ ತರುತ್ತಿತ್ತು. ವಿದ್ಯಾರ್ಥಿಯಲ್ಲಿ ಕೀಳರಿಮೆ ಯನ್ನು ಹೋಗಲಾಡಿಸುವ ಮತ್ತು ಶಿಕ್ಷಣದಿಂದ ವಂಚಿತರಾಗುವುದನ್ನ ತಪ್ಪಿಸುವ ಉದ್ದೇಶದಿಂದ ಮಂಡಳಿಯು ಮೂರು ವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

Karnataka Board of School Examination and Valuation ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯ ಸಂಭವನೀಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. 10ನೇ ತರಗತಿಯ ಮೊದಲ ಪರೀಕ್ಷೆ ಮಾರ್ಚ್ ತಿಂಗಳ 30 ರಿಂದ ಏಪ್ರಿಲ್ 15ರವರೆಗೆ ನಡೆಯಲಿದೆ. ಜೂನ್ ಎರಡನೇ ವಾರ ದ್ವಿತೀಯ ಮತ್ತು ಜುಲೈಯಲ್ಲಿ ಅಂತಿಮ ತೃತಿಯ ಪರೀಕ್ಷೆ ಜುಲೈ 2ನೇ ವಾರದಲ್ಲಿ ನಡೆಯಲಿದೆ. ಇದು ಸಂಭವನೀಯ ವೇಳಾಪಟ್ಟಿಯಾಗಿದೆ. ಈ ವೇಳಾಪಟ್ಟಿಯಲ್ಲಿ ದಿನಾಂಕಗಳು ಬದಲಾಗುವ ಸಾಧ್ಯತೆಗಳು ಕೂಡ ಇವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...