Thursday, June 18, 2026
Thursday, June 18, 2026

Manvantara Mahila Mandali Shivamogga ನಮ್ಮೀ ದೇಶ ಶ್ರೇಷ್ಠ ಭಾರತ ಎಂಬ ಹೆಗ್ಗಳಿಕೆ ನಮ್ಮದಾಗಲಿ- ರಂಜಿನಿ ದತ್ತಾತ್ರಿ

Date:

Manvantara Mahila Mandali Shivamogga ಮನ್ವಂತರ ಮಹಿಳಾ ಮಂಡಳದ ವತಿಯಿಂದ 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

77ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ನಮಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯ ಮಹತ್ವದ ಅರಿವಿರಬೇಕು. ಮಾತೆಯರು, ಮಹಿಳೆಯರು,ಸಾರ್ವಜನಿಕ ಬಂದುಬಾಂಧವರು ಹಾಗೂ ವಿದ್ಯಾರ್ಥಿಗಳು, ಯುವಕ/ಯುವತಿಯರು ಈ ದಿನದ ವಿಶೇಷತೆಯನ್ನು ಸ್ಮರಿಸಿ, ಸಮಾಜಕ್ಕೆ ಪೂರಕವೂ, ದೃಢತೆ ತುಂಬುವ ವಿಚಾರಗಳ ಮಂಥನ ಮಾಡಬೇಕು.. ಗಡಿ ರಕ್ಷಣೆಯ ಜೊತೆಜೊತೆಗೆ ಸಮಾಜದ ರಕ್ಷಣೆಯ ಜವಾಬ್ದಾರಿ ನನ್ನದು ಮಾತ್ರವಲ್ಲದೆ, ನನ್ನ ಸಮಾಜದ ಸುತ್ತಲು ನಡೆಯುವ ಸೂಕ್ಷ್ಮ ಚಲನವಲನಗಳತ್ತವೂ ನಮ್ಮ ಚಿತ್ತವಿಟ್ಟು.ಈ ದೇಶದ ಸಂತುಲನ, ಸದೃಢತೆ ಕಾಪಾಡುವುದು ನನ್ನ ಕರ್ತವ್ಯ ಎಂಬ ಸಂಕಲ್ಪ ಮಾಡಬೇಕು. 77 ನೇ ಸ್ವಾತಂತ್ರ್ಯದ ಪಥದಲ್ಲಿರುವ ಈ ಭಾರತ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಅಭಿವೃದ್ಧಿ ಪಥದತ್ತ ನಡೆದಿರುವ ನಮ್ಮೀ ದೇಶ ಶ್ರೇಷ್ಠ ಭಾರತ ಎಂಬ ಹೆಗ್ಗಳಿಕೆಯೊಂದಿಗೆ ಹೆಸರು ಮಾಡಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹೆಮ್ಮೆ ಪಡುವ ವಿಷಯ ಎಂದು ಮನ್ವಂತರದ ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ತಿಯವರು ಧ್ವಜಾರೋಹಣ ನೆರವೇರಿಸಿ ಹೇಳಿದರು.

ಹಿರಿಯರಾದ ಸಾವಿತ್ರಕ್ಕ ಶಾಲಾ/ಕಾಲೇಜಿನ ಅವಧಿಯ ನಂತರವೂ ಸ್ವಾತಂತ್ರ ಸಂಭ್ರಮದಲ್ಲಿ ಸ್ವತಃ ಪಾಲ್ಗೊಳ್ಳುವ ಅವಕಾಶ ನೀಡುವ ಸಂಘಟನೆಗಳ ಮಹತ್ವ ತಿಳಿಸಿದರು.

ಮನ್ವಂತರದ ಮಹಿಳೆಯರು ರಾಷ್ಟ್ರಗೀತೆ, ಧ್ವಜ ವಂದನೆ ಮಾಡಿದರು. ನಂತರ ಕೀರ್ತನಾರಿಂದ ಏ ಮೇರೆ ವತನ್ ಕೆ ಲೋಗೋ ಹಾಡಿನ ಮೂಲಕ ಸಮಸ್ತ ಯೋಧರಿಗೆ ನಮನ ಅರ್ಪಿಸಿ, ನಂತರ ಸದಸ್ಯರೆಲ್ಲರೂ ಸೇರಿ ದೇವಿ ಭುವನ ಮನಮೋಹಿನಿ, ವಂದೇ ಮಾತರಂ ಗೀತೆಗಳನ್ನು ಹಾಡಿದರು..

Manvantara Mahila Mandali Shivamogga ಕಾರ್ಯದರ್ಶಿ ವಿಜಯಾಶಿವು, ಖಜಾಂಚಿ ಉಷಾ, ಸದಸ್ಯರಾದ ನೇತ್ರಾ, ಅಖಿಲ, ಸುಜಾತ, ಸ್ವಪ್ನ, ಕುಸುಮ, ಗೀತ, ರತ್ನ,ವಿಜಯಕ್ಕ , ಶ್ವೇತ,ಸಂಧ್ಯಾ ಅರಸ್, ಸಧ್ಯಾವಿನಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...