Monday, December 15, 2025
Monday, December 15, 2025

Red Cross Sanjeevini Blood Bank ರಕ್ತದ ಕೊರತೆ ತೀವ್ರವಾಗಿದೆ ಮಹಿಳೆಯರು ರಕ್ತದಾನಿಗಳಾಗಿರುವುದು ಶ್ಲಾಘನೀಯ- ರೇಖಾ ಮುರಳೀಧರ್

Date:

Red Cross Sanjeevini Blood Bank ಜನಸಂಖ್ಯೆ ಹೆಚ್ಚಾದಂತೆ, ಅಪಘಾತಗಳು, ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಉಂಟಾಗುತ್ತಿದೆ ಎಂದು ವಿಶ್ವರಕ್ತದಾನಿಗಳ ದಿನವನ್ನು ರೆಡ್ ಕ್ರಾಸ್ ರಕ್ತ ಸಂಜೀವಿನಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿದ ಶಿವಮೊಗ್ಗ ಭಾವನ ಹಾಗೂ ಸೀನಿಯರ್ ಚೇಂಬರ್ ಅಧ್ಯಕ್ಷೆ ರೇಖಾಮುರುಳೀದರ್ ಮಾತನಾಡುತ್ತಿದ್ದರು.
ಎಲ್ಲಾ ದಾನಗಳಿಗಿಂತ ಇಂದು ರಕ್ತದಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ರಕ್ತದ ಕೊರತೆ ತೀವ್ರವಾಗಿ ಹೆಚ್ಚುತ್ತಿದ್ದು, ಜೀವಕ್ಕೆ ಜೀವ ಕೊಡುವ ರಕ್ತವನ್ನು ಮಹಿಳೆಯರು ಕೊಡಬಹುದು ಎಂದು ತೋರಿಸಿಕೊಟ್ಟು ಜನಸಾಮಾನ್ಯರಿಗೆ ಮಾರ್ಗ ದರ್ಶಕರಾಗಿರುವ ಮಹಿಳೆಯರನ್ನು ಇಂದು ಗುರ್ತಿಸಿ ಗೌರವಿಸಲಾಗಿದೆ. ಇದನ್ನು ಇಂದಿನ ಯುವತಿಯರು ಗಮನಿಸಿ, ರಕ್ತದಾನಕ್ಕೆ ಮುಂಚೋಣಿಗೆ ಬರಬೇಕೆಂದರು.
Red Cross Sanjeevini Blood Bank ಸನ್ಮಾನಿತರ ಪರವಾಗಿ ಮಾತನಾಡಿದ ಪ್ರೋ.ಡಾ.ಅಶ್ವಿನಿ ಗಂಡಸರಿಗೆ ಸರಿ ಸಮನಾಗಿ ಇಂದಿನ ಮಹಿಳೆಯರು ಸ್ವರ್ಧಾಕಣದಲ್ಲಿ ಇದ್ದು ರಕ್ತದಾನದಲ್ಲಿ ಮಾತ್ರ ಸ್ವಲ್ಪ ಹಿಂದುಳಿದ್ದಿದ್ದಾರೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ಹೊಸ ಚೈತನ್ಯ ದೊರಕುತ್ತದೆ. ಯುವತಿಯರು ರಕ್ತದಾನ ಮಾಡುವ ಮೂಲಕ ಕೊರತೆಯನ್ನು ನೀಗಿಸಬೇಕೆಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಈ ಸಭೆಯಲ್ಲಿ ಎಂ.ಸುರೇಶ್, ಆರ್.ಗಿರೀಶ್, ಕೆ.ಸಿ.ಬಸವರಾಜ್ ಭಾವನ ಜೇಸಿಯ ಸದಸ್ಯೆಯರು ಇದ್ದರು. ದರಣೇಂದ್ರ ದಿನಕರ್ ಸ್ವಾಗತಿಸಿ, ಜಿ.ವಿಜಯಕುಮಾರ್ ನಿರೂಪಿಸಿ, ಲಕ್ಷ್ಮೀರುದ್ರೇಶ್ ಎಲ್ಲರಿಗೂ ವಂದಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...