Sunday, August 2, 2026
Sunday, August 2, 2026

Indian Medical Association Shivamogga ಯುವ ಜನತೆ ಸಾಂಸ್ಕೃತಿಕ ಆಸಕ್ತಿಯಿಂದ ದೂರವಾಗುತ್ತಿರುವುದು ಬೇಸರದ ಸಂಗತಿ- ಡಾ.ಎಚ್.ಎಸ್.ಮೋಹನ್

Date:

Indian Medical Association Shivamogga ನಾಡು, ನುಡಿ, ದೇಶ, ಭಾಷೆಯ ಸಂಸ್ಕೃತಿ ಉಳಿದು, ಬೆಳೆಯುವುದೇ ಸಾಂಸ್ಕೃತಿಕ ಚಟುವಟಿಕೆಗಳಿಂದ.ಆದರೆ, ಇಂದಿನ ಯುವ ಪೀಳಿಗೆ ಸಾಂಸ್ಕೃತಿಕ ಚಟುವಟಕೆಗಳಿಂದ ದೂರವಾಗುತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯೋತ್ಸವ ಪುರಸ್ಕೃತ ವೈದ್ಯ ಸಾಹಿತಿ ಡಾ . ಎಚ್ . ಎಸ್ . ಮೋಹನ್ ಹೇಳಿದರು.

ಅವರು 4.6.2023 ರ ಭಾನುವಾರದಂದು ನಡೆದ ಶಿವಮೊಗ್ಗ ಶಾಖೆಯ ಭಾರತೀಯ ವೈದ್ಯಕೀಯ ಸಂಘದ ಸಾಂಸ್ಕೃತಿಕ ಸಂಜೆ – ಹುಣ್ಣಿಮೆ ವೈಭವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಐಎಂಎ ಶಿವಮೊಗ್ಗ ಆ ನಿಟ್ಟಿನಲ್ಲಿ ಸದಸ್ಯರ ಹಾಗು ಅವರ ಕುಟುಂಬದವರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಒಳ್ಳೆಯ ವೇದಿಕೆ ಕಲ್ಪಿಸಿದೆ , ಹಾಗೆಯೇ ಕಿರಿಯ ಮತ್ತು ಹಿರಿಯ ಸದಸ್ಯರು , ಪುಟಾಣಿ ಮಕ್ಕಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.

Indian Medical Association Shivamogga ಹಾಡು, ಮೂಕ ನಾಟಕ, ಸ್ಟಾಂಡ್ ಅಪ್ ಕಾಮಿಡಿ , ನೃತ್ಯ , ವಾದ್ಯಸಂಗೀತ , ಯಕ್ಷಗಾನ , ಫ್ಯಾಷನ್ ಷೋ ಮುಂತಾದ ಕಾರ್ಯಕ್ರಮಗಳನ್ನೊಳಗೊಂಡ ವರ್ಣರಂಜಿತ ಕಾರ್ಯಕ್ರಮ ಐಎಂಎ ಹಾಲ್ ಹೊರಾಂಗಣದಲ್ಲಿ ನಡೆದು ಹುಣ್ಣಿಮೆ ಚಂದಿರನ ಬೆಳದಿಂಗಳ ರಂಗೇರಿಸಿತು .

ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ .ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ , ವೈದ್ಯ ಬಳಗದ ಒತ್ತಡದ ಬದುಕಿನ ಮಧ್ಯದಲ್ಲಿ ,
ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿಗೆ ಹಿತ ನೀಡುವುದರೊಂದಿಗೆ , ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಒದಗಿಸುತ್ತದೆ. ನಾಯಕತ್ವ, ಟೀಮ್‌ವರ್ಕ್, ಸಹಯೋಗ ಮತ್ತು ಅವರ ಜೀವನಕ್ಕೆ ಅನ್ವಯಿಸಬಹುದಾದ ಹೊಸ ಸ್ನೇಹ ಸಂಬಂಧಗಳನ್ನು ಹುಟ್ಟು ಹಾಕಲು ಸಹಕಾರಿ ಎಂದು ಮಾತನಾಡಿದರು .

ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ , ಖಜಾಂಚಿ ಡಾ . ಶಶಿಧರ್ , ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ . ವಿನಯಾ ಶ್ರೀನಿವಾಸ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...