Sunday, August 2, 2026
Sunday, August 2, 2026

World Bicycle Day ಸೈಕಲ್ ಚಾಲನೆಯಿಂದ ದೇಹದ ಸ್ನಾಯುಗಳು ಸದೃಢ-ಶ್ರೀಕಾಂತ್

Date:

World Bicycle Day ಸೈಕಲ್ ಚಾಲನೆಯಿಂದ ದೇಹದ ಸ್ನಾಯುಗಳು ಬಲಗೊಂಡು ಶಕ್ತಿ ತುಂಬುತ್ತದೆ, ಇದರಿಂದ ಅನಾರೋಗ್ಯದಿಂದ ದೂರ ಇರಬಹುದು ಎಂದು “ವಿಶ್ವಸೈಕಲ್ ದಿನಾಚರಣೆ” ಪ್ರಯುಕ್ತ ಶಿವಮೊಗ್ಗ ಸೈಕಲ್ ಕ್ಲಬ್ ಆಯೋಜಿಸಿದ ಜಾತ ಉದ್ಘಟಿಸಿದ ಕ್ಲಬ್ ನ ಅಧ್ಯಕ್ಷ ಶ್ರೀಕಾಂತ್ ಮಾತನಾಡುತ್ತಿದ್ದರು.

ಕಳೆದ 8 ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿದ್ದ, ಸರ್ಕಾರದ ಹಲವಾರು ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯ ಸೈಕಲ್ ಕ್ಲಬ್ ಸದಸ್ಯರು ಮಾಡುತ್ತಿದ್ದಾರೆ ಎಂದರು.

ಪರಿಸರ ಸ್ನೇಹಿಯಾದ ಸೈಕಲ್, ಇಂಧನ ಉಳಿಸುತ್ತದೆ, ಹೊಗೆ ಸೂಸುವುದಿಲ್ಲ. ಶಬ್ದಮಾಲಿನ್ಯ ಇರುವುದಿಲ್ಲ ಹಾಗೂ ದೇಹಕ್ಕೆ ಶಕ್ತಿ ತುಂಬಿ ಸದೃಡ ಜೀವನ ನಡೆಸಲು ಸಹಕಾರಿ ಎಂದು ಯೂತ್ ಹಾಸ್ಟೆಲ್ಸ್ ಛೇರ್ಮನ್ ಎಸ್.ಎಸ್.ವಾಗೇಶ್ ನುಡಿದರು.

    ಮಾನಸಿಕ ದೃಡತೆ, ಲವಲವಿಕೆಯ ಜೀವನಕ್ಕೆ ಸೈಕಲ್ ಅತ್ಯುತ್ತಮ ಸಹಕಾರಿ ಎಂದು ರೋಟರಿ ವಿಜಯಕುಮಾರ್ ತಿಳಿಸಿದರು.

World Bicycle Day ತರುಣೋದಯ ಘಟಕದ ಕಾರ್ಯದರ್ಶಿ ಸ್ವಾಗತಿಸಿದರು, ಸೈಕಲ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಕಾಮತ್ ವಂದಿಸಿದರು ಹರೀಶ್ ಪಾಟಿಲ್ ನಿರೂಪಿಸಿದರು, ಡಿಎಸ್ ಡಿಒ ಸುರೇಶ್, ಚಂದ್ರಕೇಸರಿ, ಮಿಥುನ್, ವಿಜಯೇಂದ್ರ, ರವಿ ನಲವತ್ತು ಜನ ಸದಸ್ಯರು ಜಾತದಲ್ಲಿ ಪಾಲ್ಗೊಂಡು ನಗರದ ಗಾಂಧಿ ಉದ್ಯಾನವನ ದಿಂದ ಪ್ರಾರಂಭಗೊಂಡು ವಿಶ್ವೇಶ್ವರಾಯ ರಸ್ತೆ ಬಾಲರಾಜ್ ಅರಸ್ ರಸ್ತೆ, ನೆಹರು ರಸ್ತೆ, ಬಿಹೆಚ್ ರಸ್ತೆ ಬಸ್ ನಿಲ್ದಾಣದ ಮೂಲಕ ಸಾಗರ್ ರಸ್ತೆ ರಿಂಗ್ ರಸ್ತೆ ಮೂಲಕ ಸ್ವಾತಂತ್ರ್ಯ ಉದ್ಯಾನವನ ಸೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...