Monday, December 15, 2025
Monday, December 15, 2025

Mysuru Dasara Ambari Elephant Balarama no More ಅಂಬಾರಿ ಚಾಂಪಿಯನ್ ಬಲರಾಮ ಇನ್ನಿಲ್ಲ

Date:

Mysuru Dasara Ambari Elephant Balarama no More ನಮ್ಮ ಬಲರಾಮ ಹದಿನಾಲ್ಕು ದಸರೆಯ ಹಬ್ಬಗಳನ್ನ ನೋಡಿ ನಲಿದಿದ್ದ. ಅಂದರೆ ಅವನು ಮೊದಲು ದಸರೆಗೆ ಬಂದಾಗ ಅವನಿಗೆ ಐವತ್ಮೂರು ವರ್ಷ ವಯಸ್ಸು. ಮುಂಚಿನ ವರ್ಣಮಯ ನಾಡಹಬ್ಬದಲ್ಲಿ ನಾಡದೇವಿ ಶ್ರೀಚಾಮುಂಡೇಶ್ವರಿಯನ್ನ ಹೊತ್ತು ಅಂಬಾರಿ ಸೇವೆಗೈದ ಮಹಾಜೀವಿ,ಬಲರಾಮ.

ಈಗ್ಯೆ ಬಹಳ ದಿನಗಳಿಂದ ಆರೋಗ್ಯ ಕ್ಷೀಣಿಸಿ ನೆಲಹಿಡಿದಿದ್ದ. ವೈದ್ಯರೂ ಅವನ ಬಳಿಯೇ ಡೇರೆ ಹೂಡಿ ಚಿಕಿತ್ಸೆ ನೀಡುತ್ತಿದ್ದರು.
ಡಾ.ರಮೇಶ್ ಅವರು ಅವನ ಆಪ್ತ ವೈದ್ಯರು. ಬಾಯಿಯಲ್ಲಿ ಹುಣ್ಣಾಗಿತ್ತಂತೆ. ಅದು ಕ್ಷಯವಾಗಿರಬಹುದು ಎಂಬುದು ಅವರ ಹೇಳಿಕೆ.

ಆಹಾರ ನೀರು ಏನನ್ನೂ ಸೇವಿಸದ ಸ್ಥಿತಿಯಲ್ಲಿ ನಿತ್ರಾಣಗೊಂಡಿದ್ದ.
ದಸರೆಯಲ್ಲಿ ಅವನ ಗಜಗಾಂಭೀರ್ಯ
ನಡಿಗೆ ಮೆಚ್ಚದವರಿಲ್ಲ. ಎಲ್ಲರ ಕಣ್ಮನಗಳನ್ನ ಸೆಳೆದ ಬಲರಾಮ
ತೀರಿಕೊಂಡ ಸುದ್ದಿ ಕೇಳಿ ಬಹಳ ಬೇಸರವಾಯಿತು.

Mysuru Dasara Ambari Elephant Balarama no More ಬಲರಾಮ,ಆನೆಯಾದರೂ ಅವನೊಂದಿಗೆ
ಮನುಷ್ಯರ ಒಡನಾಟ ಮರೆಯುವಂತಿಲ್ಲ.
ಮಾವುತರೂ ಪಕ್ಕದಲ್ಲಿದ್ದರು.
ಮೃತ್ಯು ಬಂದಾಗ ಯಾರಿದ್ದರೇನು ?
ಬಲರಾಮ ಕೊನೆಯುಸಿರೆಳೆದ.
ಬಲರಾಮನ ಆತ್ಮಕ್ಕೆ ಚಿರಶಾಂತಿ ಸಿಗಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...