Monday, February 2, 2026
Monday, February 2, 2026

Mysuru Dasara Ambari Elephant Balarama no More ಅಂಬಾರಿ ಚಾಂಪಿಯನ್ ಬಲರಾಮ ಇನ್ನಿಲ್ಲ

Date:

Mysuru Dasara Ambari Elephant Balarama no More ನಮ್ಮ ಬಲರಾಮ ಹದಿನಾಲ್ಕು ದಸರೆಯ ಹಬ್ಬಗಳನ್ನ ನೋಡಿ ನಲಿದಿದ್ದ. ಅಂದರೆ ಅವನು ಮೊದಲು ದಸರೆಗೆ ಬಂದಾಗ ಅವನಿಗೆ ಐವತ್ಮೂರು ವರ್ಷ ವಯಸ್ಸು. ಮುಂಚಿನ ವರ್ಣಮಯ ನಾಡಹಬ್ಬದಲ್ಲಿ ನಾಡದೇವಿ ಶ್ರೀಚಾಮುಂಡೇಶ್ವರಿಯನ್ನ ಹೊತ್ತು ಅಂಬಾರಿ ಸೇವೆಗೈದ ಮಹಾಜೀವಿ,ಬಲರಾಮ.

ಈಗ್ಯೆ ಬಹಳ ದಿನಗಳಿಂದ ಆರೋಗ್ಯ ಕ್ಷೀಣಿಸಿ ನೆಲಹಿಡಿದಿದ್ದ. ವೈದ್ಯರೂ ಅವನ ಬಳಿಯೇ ಡೇರೆ ಹೂಡಿ ಚಿಕಿತ್ಸೆ ನೀಡುತ್ತಿದ್ದರು.
ಡಾ.ರಮೇಶ್ ಅವರು ಅವನ ಆಪ್ತ ವೈದ್ಯರು. ಬಾಯಿಯಲ್ಲಿ ಹುಣ್ಣಾಗಿತ್ತಂತೆ. ಅದು ಕ್ಷಯವಾಗಿರಬಹುದು ಎಂಬುದು ಅವರ ಹೇಳಿಕೆ.

ಆಹಾರ ನೀರು ಏನನ್ನೂ ಸೇವಿಸದ ಸ್ಥಿತಿಯಲ್ಲಿ ನಿತ್ರಾಣಗೊಂಡಿದ್ದ.
ದಸರೆಯಲ್ಲಿ ಅವನ ಗಜಗಾಂಭೀರ್ಯ
ನಡಿಗೆ ಮೆಚ್ಚದವರಿಲ್ಲ. ಎಲ್ಲರ ಕಣ್ಮನಗಳನ್ನ ಸೆಳೆದ ಬಲರಾಮ
ತೀರಿಕೊಂಡ ಸುದ್ದಿ ಕೇಳಿ ಬಹಳ ಬೇಸರವಾಯಿತು.

Mysuru Dasara Ambari Elephant Balarama no More ಬಲರಾಮ,ಆನೆಯಾದರೂ ಅವನೊಂದಿಗೆ
ಮನುಷ್ಯರ ಒಡನಾಟ ಮರೆಯುವಂತಿಲ್ಲ.
ಮಾವುತರೂ ಪಕ್ಕದಲ್ಲಿದ್ದರು.
ಮೃತ್ಯು ಬಂದಾಗ ಯಾರಿದ್ದರೇನು ?
ಬಲರಾಮ ಕೊನೆಯುಸಿರೆಳೆದ.
ಬಲರಾಮನ ಆತ್ಮಕ್ಕೆ ಚಿರಶಾಂತಿ ಸಿಗಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...