Sunday, August 2, 2026
Sunday, August 2, 2026

KLive Special ಇಂದಿನ ಕೆ ಲೈವ್ ಕವಿತಾಂಗಣ

Date:

KLive Special “ಇದು ಯುಗ ಯುಗದ ಜನರ ಮನೋಧರ್ಮದ ಕವಿತೆ. ನಿತ್ಯ ಸತ್ಯ ಜಗಧರ್ಮದ ವಿಷಾದದ ಭಾವಗೀತೆ. ಅಂತರ್ಜಾಲದಿ ಕಂಡ ಈ ಅನನ್ಯ ಚಿತ್ರವೇ ಈ ಮಾರ್ಮಿಕ ಕವಿತೆಗೆ ಪ್ರೇರಣವಾದದ್ದು.. ಕಾರಣವಾದದ್ದು. ಅಂದಿಗೂ ಇಂದಿಗೂ ಎಂದಿಗೂ ಈ ಲೋಕಕ್ಕೆ ಪರಿವರ್ತನೆಗೆ ಒಗ್ಗಿಕೊಳ್ಳಲು ಏನೆಲ್ಲ ಸಂಕಷ್ಟ? ಪರಿವರ್ತಕರನ್ನು ಒಪ್ಪಿಕೊಳ್ಳಲು ಅದೆಷ್ಟು ಕಷ್ಟ..?? ಏನಂತೀರಾ..???” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಜಗಧರ್ಮ..!

ಮಿಥ್ಯೆಯ ದರಬಾರಿನಲ್ಲಿ
ಸತ್ಯಕ್ಕೆ ಮರಣ ದಂಡನೆ
ಸುಳ್ಳಾಡುವವರ ಸಾಮ್ರಾಜ್ಯದಿ
ನಿಜ ನುಡಿವವನಿಗೆ ನೇಣು.!

ಬೆತ್ತಲೆಜನರ ಸಂತೆಯಲ್ಲಿ
ಬಟ್ಟೆಗೆ ಸದಾ ಬಹಿಷ್ಕಾರ
ನಗ್ನವಾದವರ ನಡುವಲ್ಲಿ
ಅರಿವೆ ತೊಟ್ಟರೆ ಕಲ್ಲೇಟು.!

ಸೈತಾನರ ನಾಡಿನಲ್ಲಿ
ಸಾಧುವಾದರೆ ಗಡಿಪಾರು
ಕಟುಕರ ಚಕ್ರಾಧಿಪತ್ಯದಲ್ಲಿ
ಕರುಣಿಯಾದರೆ ಶಿರಚ್ಚೇದನ.!

ಮೂರ್ಖರ ನಗರದಲ್ಲಿ
ಮೇಧಾವಿಗೆ ನಿತ್ಯಾಪಮಾನ
ದಡ್ಡರ ಒಡ್ಡೋಲಗದಲ್ಲಿ
ಚತುರನಿಗೆ ದಿನವು ಶಿಕ್ಷೆ.!

ಕಡುಭ್ರಷ್ಟರ ಬಜಾರಿನಲ್ಲಿ
ನಿಷ್ಟನೆಂದೂ ನಿಕೃಷ್ಟ
ವಂಚಕರ ಒಕ್ಕೂಟದಲಿ
ಪ್ರಾಮಾಣಿಕನಿಗೆ ಪ್ರತಿಕ್ಷಣ ಸಂಕಷ್ಟ.!

KLive Special ಯುಗಯುಗದಿಂದ ಹೀಗೆ
ಜಗದ ಜಾತಕದ ಬಗೆ
ತನ್ನೊಡಲ ಬೆಳಗುವ ಬೆಳಕನ್ನೇ
ಒಪ್ಪಿಕೊಳ್ಳದ ಕತ್ತಲಿನ ಹಾಗೆ.!

ಒಳಿತು ಒಳ್ಳೆಯತನಗಳಿಗೆ
ಬೆಳಕು ಬದಲಾವಣೆಗಳಿಗೆ
ಒಪ್ಪದ ಒಗ್ಗಿಕೊಳ್ಳದ ರೀತಿ
ಕ್ರಾಂತಿ ಸಂಕ್ರಾಂತಿಯಿಂದಲೇ
ಪರಿವರ್ತಿಪ ಲೋಕದ ಚಿರನೀತಿ.!

  • ಎ.ಎನ್.ರಮೇಶ್. ಗುಬ್ಬಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...