74ನೇ ಗಣರಾಜ್ಯೋತ್ಸವವನ್ನು ಭಾರತೀಯ ವೈದ್ಯಕೀಯ ಸಂಘದಿಂದ ಇಂದು ಧ್ವಜಾರೋಹಣ ಮತ್ತು ಐಎಂಎ ಸದಸ್ಯರ ಪುಟ್ಟ ಮಕ್ಕಳ ಛದ್ಮ ವೇಷದೊಂದಿಗೆ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು .
ಸಮಾರಂಭದ ಅಧ್ಯಕ್ಷತೆಯನ್ನು ಡಾ . ಅರುಣ್ ಎಂ ಎಸ್ ವಹಿಸಿ , ನಾವು ಸಮಾನತೆಯಿಂದ, ಎಲ್ಲ ವರ್ಗದ ಜನರು ಸಮಾನವಾಗಿ ಬದುಕುತ್ತಿರುವುದೇ ಸಂವಿಧಾನ ಜಾರಿಗೆ ಬಂದಿದ್ದರಿಂದ. ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು ಎಂದು ನೆನೆದರು.
ವೈದ್ಯರಾಗಿ ನಾವೆಲ್ಲರೂ ದೇಶದ , ಸಮಾಜದ ಆರೋಗ್ಯ ಸೇವೆಯಲ್ಲಿ ಇನ್ನು ಹೆಚ್ಚು ಮನಃಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಎಂದು ನೆರೆದಿರುವ ಎಲ್ಲ ಸದಸ್ಯರಿಗೂ ಕರೆಕೊಟ್ಟರು.
ಗಣರಾಜ್ಯೋತ್ಸವದ ದೆಹಲಿಯ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ‘ನಾರಿ ಶಕ್ತಿʼ ಸ್ತಬ್ಧಚಿತ್ರವನ್ನು ನೆನೆಯುತ್ತ , ಐಎಂಎ ಮಹಿಳಾ ವೈದ್ಯರ ಸಮಿತಿ ಹಾಗು ಆಸ್ಪತ್ರೆ ಮಂಡಳಿ ಸಮಿತಿಯ ಉದ್ಘಾಟನೆ ಈ ಸಂದರ್ಭದಲ್ಲಿ ನಡೆಸಲಾಯಿತು.
ಕಾರ್ಯದರ್ಶಿ ಡಾ . ರಕ್ಷಾ ರಾವ್ ಹಾಗು ಖಜಾಂಚಿ ಡಾ .ಶಶಿಧರ್ ಹಾಗು ಎಲ್ಲಾ ಐಎಂಎ ಸದಸ್ಯರು ಉಪಸ್ಥಿತರಿದ್ದರು .
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.