Monday, August 3, 2026
Monday, August 3, 2026

ಎಲ್ಲರ ಮನಸೆಳೆದ ವಿಶಿಷ್ಟ ಗಾಳಿಪಟ ಹಬ್ಬ

Date:

ಶಿವಮೊಗ್ಗ : ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಲು ಲಕ್ಷ್ಯ ಸ್ಕೂಲ್ ಮತ್ತು ಪೀಪಲ್ ಫಾರ್ ಎಜುಕೇಷನ್ ವತಿಯಿಂದ ನಗರದ ಸವಳಂಗ ರಸ್ತೆಯ ಕೃಷಿ ಕಾಲೇಜು ಮೈದಾನದಲ್ಲಿ ಗಾಳಿ ಪಟ ಹಬ್ಬ ಆಚರಿಸಲಾಯಿತು.

ಬೆಂಗಳೂರಿನಿಂದ ನುರಿತ ಗಾಳಿಪಟ ತಯಾರಕರು ಬಂದಿದ್ದರು ಮಕ್ಕಳಿಗೆ ಗಾಳಿಪಟ ತಯಾರಿಕೆ ಬಗ್ಗೆ, ಸೂತ್ರ ಹೇಗೆ ಕಟ್ಟುವುದು, ಅದರ ಬಾಲಂಗೋಚಿ ಎಷ್ಟಿರಬೇಕು ಎಂಬ ವಿಷಯವನ್ನು ಕಲಿಸಿದರು.

ಗಾಳಿಪಟ ಹಬ್ಬದಲ್ಲಿ ಸುಮಾರು 600 ಕ್ಕೂ ಹೆಚ್ಚು ಮಕ್ಕಳ ಜೊತೆಗೆ ಪಾಲಕರು ಭಾಗವಹಿಸಿದ್ದು ವಿಶೇಷವಾಗಿತ್ತು.

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಲಕ್ಷ್ಯ ಸ್ಕೂಲ್ ಪೀಪಲ್ ಫಾರ್ ಎಜುಕೇಷನ್ ವತಿಯಿಂದ ಆಗಸದಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಪಕ್ಷಿಗಳ ಜೊತೆಗೆ ಡ್ರ್ಯಾಗನ್ , ಸ್ಪೈಡರ್ ಮ್ಯಾನ್, ಅವತಾರ್, ತಿರಂಗ ಪ್ರತ್ಯಕ್ಷವಾಗಿದ್ದವು. ಮಕ್ಕಳು, ಮಹಿಳೆಯರು, ವೃದ್ಧರು ವಿಶೇಷ ಅತಿಥಿಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಸವಳಂಗ ರಸ್ತೆಯ ಕೃಷಿ ಕಾಲೇಜಿನ ಮೈದಾನದಲ್ಲಿ ಮಕ್ಕಳ ಗಾಳಿಪಟ ಹಬ್ಬದಲ್ಲಿ ಕಂಡುಬಂದ ಮನಮೋಹಕ ದೃಶ್ಯಗಳು. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಸಲುವಾಗಿ 2ನೇ ಬಾರಿಗೆ ಸಂಸ್ಥೆಯು 3 ವರ್ಷದಿಂದ 18 ವರ್ಷದೊಳಗಿನವರಿಗೆ 2 ವಿಭಾಗದಲ್ಲಿ ಗಾಳಿಪಟ ಹಬ್ಬವನ್ನು ಆಯೋಜಿಸಿತ್ತು.

ಕೃಷಿ ಕಾಲೇಜಿನ ಆವರಣದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಆಗಸದಲ್ಲಿ ರಾರಾಜಿಸಿದವು. ಗಾಳಿಪಟಗಳನ್ನು ಹಾರಿಸಿದ ಮಕ್ಕಳ ಸಂಭ್ರಮಕ್ಕೆ ಪಾರವೆ ಇರಲಿಲ್ಲ. ಅವರೊಂದಿಗೆ ಪಾಲಕರು ಕೂಡ ಗಾಳಿಪಟ ಹಾರಿಸಿ ಹಬ್ಬಕ್ಕೆ ಮೆರಗು ನೀಡಿದರು. 3 ರಿಂದ 13 ಮತ್ತು 13 ರಿಂದ 14 ವರ್ಷದೊಳಗಿನ ಅಂದಾಜು 450ಕ್ಕೂ ಅಧಿಕ ಮಕ್ಕಳು ಗಾಳಿಪಟ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಆಗಸದಲ್ಲಿ ಹಾರಾಡುತ್ತಿದ್ದ ಬಗೆ ಬಗೆಯ ಚಿತ್ತಾಕರ್ಷಕ ಗಾಳಿಪಟಗಳು ಜನರನ್ನು ಆಕರ್ಷಿಸಿದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...