Monday, April 21, 2025
Monday, April 21, 2025

ಪಾಕ್ ನಲ್ಲಿ ಬಿಗಡಾಯಿಸಿದ ನಾಗರಿಕರ ದೈನಿಕ ಜೀವನ

Date:

ಒಂದಲ್ಲ ಒಂದು ಕಾರಣದಿಂದ ಇಷ್ಟೂದಿನ ಪಾಕಿಸ್ತಾನ ಅಂತಾರಾಷ್ಟ್ರೀಯ ವಾಗಿ ಸುದ್ದಿಯಲ್ಲಿತ್ತು.
ಹೆಚ್ಚಾಗಿ ಸುದ್ದಿಗಳು ರಾಜಕಾರಣ,ಉಗ್ರವಾದಿಗಳು ಇತ್ಯಾದಿ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದವು.

ಈಗ ಅವೆಲ್ಲವೂ ಮೀರಿದ ಮನಕಲಕುವ ಸಮಾಚಾರಗಳು ಬರುತ್ತಿವೆ. ಒಂದು ದೇಶ ತನ್ನ ಆರ್ಥಿಕತೆಯ ಸ್ವಾಸ್ಥ್ಯ ಕಾಪಾಡಿಕೊಳ್ಳದಿದ್ದರೆ ಅದರ ಕೆಟ್ಟ ಪರಿಣಾಮ ಆ ದೇಶದ ನಾಗರಿಕರ ಮೇಲೇ ಬೀಳುತ್ತದೆ.
ಈಗ ಅಲ್ಲಿ ಆಹಾರದ ದರ ಏರುತ್ತಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್, ಡಿಸೆಲ್ ದರಗಳು ಗಗನಕ್ಕೇರಿವೆ. ಹಣದುಬ್ಬರ ಶೇ 25 ಆಗಿದೆ. ನಮ್ಮ ನೆರೆಯ ಶ್ರೀಲಂಕಾ ದಲ್ಲಿ ಈ ರೀತಿ ಹಾಹಾಕಾರವುಂಟಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚೀಲ ಗೋದಿ ಹಿಟ್ಟಿಗಾಗಿ ನಾಕಾರು ಜನ ಕೈ ಕೈ ಮಿಲಾಯಿಸಿ ಹಿಟ್ಟಿಗಾಗಿ ಹೊಡೆದಾಡುವ ವಿಡಿಯೊ ಸರಿದಾಡುತ್ತಿದೆ.
ಕರಾಚಿಯಲ್ಲಿ ಒಂದು ಕೆಜಿ ಗೋಧಿ ಹಿಟ್ಟಿಗೆ
₹ 160. ಬಲೂಚಿಸ್ತಾನದಲ್ಲಿ 20 ಕೆಜಿ ಗೆ ₹ 3100.

ಇನ್ನೂ ಮೂರು ತಿಂಗಳು ಇದೇ ರೀತಿ ಪಾಕ್ ಅನುಭವಿಸಬೇಕಿದೆ.
ಆಪತ್ತಿನಲ್ಲಿ ನೆರವಿಗೆ ಸೌದಿ ಅರೆರಬಿಯಾ ಹತ್ತು ಶತಕೋಟಿ ಡಾಲರ್ ನೆರವು ಘೋಷಿಸಿದೆ.
ಪಾಕ್ ಪ್ರಧಾನಿ ಶಹಬಾಜ್ ಅವರ ರಾಜತಾಂತ್ರಿಕ ನಡಿಗೆ
ಮುಂದೆ ಹೇಗಿದೆ ಎಂಬುದೇ ವಿಶ್ವ ಕಾದು ನೋಡಬೇಕಿದೆ.

ಇವನ್ನೆಲ್ಲ ನೋಡಿದರೆ ನಮ್ಮ ಭಾರತ ಎಷ್ಟು ಸದೃಢ ಎನ್ನುವ ಅಭಿಮಾನ ತೃಪ್ತಿ ಮೂಡುತ್ತದೆ. ಆದರೂ ನಾವು ಅತ್ಯಂತ ಜಾಗರೂಕವಾಗಿ ನಮ್ಮ ಯೋಜನೆಗಳು, ಸಂಪನ್ಮೂಲಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

eAsset ಇ-ಸ್ವತ್ತು ದಾಖಲೀಕರಣ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ- ಪ್ರಿಯಾಂಕ ಖರ್ಗೆ

eAsset ಇ-ಸ್ವತ್ತು ಅನುಷ್ಠಾನದಲ್ಲಿ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹರಿಸಲು...

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...