Monday, February 2, 2026
Monday, February 2, 2026

ಜನವರಿ 31 ರೊಳಗೆ ಶಿವಮೊಗ್ಗ ಹೇಗಿರಬೇಕು? ಲೇಖನ ಸಲ್ಲಿಸಿ- ಎನ್.ಗೋಪಿನಾಥ್

Date:

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶಿವಮೊಗ್ಗ ವಿಷನ್ 2050 ಡಾಕ್ಯುಮೆಂಟ್ ತರಲು ಉದ್ದೇಶವಿದೆ. 2050 ರಲ್ಲಿ ಶಿವಮೊಗ್ಗ ಹೇಗಿರಬೇಕು ಎಂಬ ಕಲ್ಪನೆಯೊಂದಿಗೆ ಕನಸಿನ ಅಮೂರ್ತ ರೂಪಕ್ಕೆ ಮೂರ್ತರೂಪ ಕೊಟ್ಟು ಯೋಜನೆ ರೂಪಿಸಿ, ಕಾರ್ಯಗತಗೊಳಿಸಿ, ನಮ್ಮ ಶಿವಮೊಗ್ಗವನ್ನು ಮಾದರಿ ಶಿವಮೊಗ್ಗವನ್ನಾಗಿ ರೂಪಿಸುವ ಉದ್ದೇಶ. ಈಗಿನ ಶಿವಮೊಗ್ಗ ನಗರದ ಜನಸಂಖ್ಯೆ ಸುಮಾರು ನಾಲ್ಕು ಲಕ್ಷ ಗಳಾಗಿದೆ. 2050 ರಲ್ಲಿ ಹಿಂದಿನ ಅಂಕಿ ಅಂಶದಂತೆ ಅಂದಾಜು 9 ಲಕ್ಷ ಆಗುವ ಸಾಧ್ಯತೆ ಇದೆ. ಆದ್ದರಿಂದ, ಅಂದಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈಗಲೇ ಅದಕ್ಕೆ ಯೋಜನೆ ರೂಪಿಸುವ ಅವಶ್ಯಕತೆ ಇದೆ. ಮುಖ್ಯವಾಗಿ ಶಿಕ್ಷಣ ಆರೋಗ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಿ ಬೆಳೆಸುವ ಯೋಜನೆಗಳು ರೂಪಗೊಳ್ಳಬೇಕಾಗಿದೆ .ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಜಿಲ್ಲೆ ಪ್ರಧಾನವಾಗಿ ಕೃಷಿ ಆಧಾರಿತ ಜಿಲ್ಲೆಯಾಗಿದ್ದು ಕೃಷಿಗೆ ಪೂರಕವಾದಂತ ಕೈಗಾರಿಕಾಗಳನ್ನು ಸ್ಥಾಪಿಸಿ ರೈತರು ಬೆಳೆದ ಬೆಳಗ್ಗೆ ಮೌಲ್ಯವನ್ನು ತಂದುಕೊಡಬೇಕಾದ ಅವಶ್ಯಕತೆ ಇದೆ.

ಎಲ್ಲಾ ರಂಗಗಳ ಸರ್ವೋ ತಮ ಅಭಿವೃದ್ಧಿಗೆ ಯೋಚಿಸಿ ,ಯೋಜನೆ ರೂಪಿಸಿ, ಕಾರ್ಯಕರ್ತಗೊಳಿಸಿದಲ್ಲಿ ಶಿವಮೊಗ್ಗ ಜಿಲ್ಲೆ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಹೊಂದುತ್ತದೆ. ಶಿಕ್ಷಣ ರಂಗದಲ್ಲಿ ಹಲವಾರು ವಿದ್ಯಾ ಸಂಸ್ಥೆಗಳು ಕೆಲಸ ಮಾಡುತ್ತಿದೆ.

ಶಿವಮೊಗ್ಗವನ್ನು ಎಲ್ಲಾ ರೀತಿಯ ಶಿಕ್ಷಣ ಸಿಗುವ ಜಿಲ್ಲೆ ಮಾಡಬೇಕಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಿವಮೊಗ್ಗ ಹೆಲ್ತ್ ಬ್ ಆಗಿ ರೂಪಗೊಳ್ಳುತ್ತಿದ್ದ, ಅದನ್ನು ಭದ್ರ ಬುನಾದಿಯ ಮೇಲೆ ಬೆಳೆಸಬೇಕಾದ ಅವಶ್ಯಕತೆ ಇದೆ.

ಜೊತೆಗೆ ಆಯುಷ್ ವಿಶ್ವವಿದ್ಯಾ ನಿಲಯ ಪ್ರಾರಂಭವಾಗುತ್ತಿದೆ. ಆರೋಗ್ಯ ಪುನಃ ಚೇತನ ಗೊಳಿಸುವ ಆರೋಗ್ಯ ದಾಮಗಳನ್ನು ಪ್ರಾರಂಭಿಸಬಹುದಾಗಿದೆ. ಕೈಗಾರಿಕಾ ರಂಗದಲ್ಲಿ ಪೌಂಡರಿ ಕ್ಷೇತ್ರ ಹೆಸರುಗಳಿಸಿದೆ. ಜೊತೆಗೆ ಸೆಮಿಕಂಡಕ್ಟರ್, ಟೆಕ್ಸ್ಟೈಲ್ ಮುಂತಾದ ಕೈಗಾರಿಗಳನ್ನು ಪ್ರಾರಂಭಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆ 3 ರಾಷ್ಟ್ರೀಯ ಹೆದ್ದಾರಿ, ಒಳ್ಳೆಯ ರೈಲು ಸೌಲಭ್ಯ ಹಾಗೂ ವಾಯು ಯಾನ ಸೌಲಭ್ಯ ವಿದೆ. ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡಿದೆ. ಶಿವಮೊಗ್ಗದ ಪ್ರತಿಯೊಬ್ಬ ನಾಗರೀಕನು ಯಾವುದಾದರೂ ಒಂದು ಕೌಶಲ್ಯನನ್ನು ಪಡೆದಿರಬೇಕೆಂಬುದು ನಮ್ಮ ಆಶಯ ಹಾಗಾಗಿ ಸುಸಜ್ಜಿತ ಹೊಸ ತಂತ್ರಜ್ಞಾನದೊಂದಿಗೆ ಕೌಶಲ್ಯ ಕೇಂದ್ರವನ್ನು ಪ್ರಾರಂಭಿಸುವ ಉದ್ದೇಶ ನಮ್ಮ ಸಂಸ್ಥೆಯದು. ಶಿವಮೊಗ್ಗದ ಪ್ರತಿಯೊಬ್ಬ ನಾಗರೀಕರಿಗೂ ಪ್ರಯೋಜನ ವಾಗುವ ರೀತಿಯಲ್ಲಿ ಯೋಜನೆ ರೂಪಿಸಿ ಜಾರಿಗೆ ತರುವ ದೃಷ್ಟಿಯಿಂದ ವಿಷನ್ ಡಾಕ್ಯುಮೆಂಟ್ ತಯಾರಿಸಲಾಗುತ್ತಿದೆ. ಶಿವಮೊಗ್ಗದ ನಾಗರಿಕರು ತಮ್ಮ ಕಲ್ಪನೆಯ ಶಿವಮೊಗ್ಗದ ಬಗ್ಗೆ ಕನಸು ಕಂಡು, ಯೋಜನೆಗಳ ಮುಖಾಂತರ ಸಾಕಾರಗೊಳಿಸುವ ಯೋಜನೆಗಳನ್ನು ನಮ್ಮೊಡನೆ ಹಂಚಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...