ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮುಖ್ಯಮಂತ್ರಿಆಗಿದ್ದಾಗತಾನೇ ಮುಂದಿನ 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ ಎನ್ನುತ್ತಿದ್ದರು.
ಆದರೆ, ಮುಂದೆ ಏನಾಯಿತು ಎನ್ನುವ ಬಗ್ಗೆ ಬಿ.ಎಸ್ಯಡಿಯೂರಪ್ಪನವರೇ ನೆನಪು ಮಾಡಿಕೊಳ್ಳಬೇಕೆಂದು ಜಿಲ್ಲಾಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಪ್ರಶ್ನಿಸಿದ್ದಾರೆ.
ಶಿಕಾರಿಪುರದಲ್ಲಿ ನಡೆದ ವಿಜಯಅಭಿಯಾನಕಾರ್ಯಕ್ರಮದಲ್ಲಿ ಮುಂದಿನ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಭಾರತೀಯಜನತಾ ಪಕ್ಷಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದು, ಅವರು ಹೇಳಿರುವ ಭವಿಷ್ಯತಾವು ಮುಖ್ಯಮಂತ್ರಿಆಗಿದ್ದಾಗ ಮುಂದಿನ 20 ವರ್ಷಗಳ ಕಾಲ ನಾನೇ ಮುಂಖ್ಯಮಂತ್ರಿ ಎಂದು ಹೇಳುತ್ತಿದ್ದಂತೆ ಇದೆ.
ಆದರೆ, ಬಿ.ಜೆ.ಪಿ ವರಿಷ್ಠರಕಟ್ಟಾಜ್ಞೆಯ ಮೇರೆಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಗ ಕಣ್ಣೀರಧಾರೆ ಹರಿಸಿದ್ದವರು.
ಈಗ ಇದೇಯಡಿಯೂರಪ್ಪರವರು 150 ಸ್ಥಾನಗಳನ್ನು ಭಾರತೀಯಜನತಾ ಪಕ್ಷಗೆಲ್ಲಲಿದೆಎಂದು ಹೇಳಿರುವುದು ಒಂದೇಆಗಲಿದೆ ಎಂದು ವೈ.ಬಿ.ಚಂದ್ರಕಾಂತ್ ಅವರು ಲೇವಡಿ ಮಾಡಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶದಜನರತಲೆಯ ಮೇಲೆ ಶೋಷಣೆಯರೀತಿಯಲ್ಲಿ ಮಿತಿಮೀರಿದತರಿಗೆಯನ್ನು ವಿಧಿಸಿದೆ. ಇಂತಹತೆರಿಗೆಯ ಹಣದಲ್ಲಿ ಶೇ.40ರಷ್ಟು ಮಾತ್ರಅಭಿವೃದ್ದಿ ಕಾರ್ಯಗಳು ನಡೆದಿವೆ.
ಹೀಗಿರುವಾಗ ರಾಜ್ಯದ ಜನರು ಮುಂದಿನ ವಿಧಾನಸಭಾಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳನ್ನು ಹೇಗೆ ತಾನೆಗೆಲ್ಲಿಸಲು ಸಾಧ್ಯ.ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿ.ಜೆ.ಪಿ.ಗೆಲುವು ಕಾಣಲಿದೆ. ತಮ್ಮ ಪಕ್ಷದ ಸರ್ಕಾರವೇ ಪುನಃ ಆಡಳಿತಕ್ಕೆ ಬರಲಿದೆ ಎಂದು ಭಾವಿಸಿರುವುದು ಬಿ.ಜೆ.ಪಿ.ಪಾಲಿಗೆ ತಿರುಕನಕನಸಾಗಲಿದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.
ಹಿಂದೆ ಯಡಿಯೂರಪ್ಪರವರು ಬಿ.ಜೆ.ಪಿ.ತೊರೆದುಕೆ.ಜೆ.ಪಿ. ಸ್ಥಾಪಿಸಿದಾಗ ಯಡಿಯೂರಪ್ಪರವರನ್ನು ಕೊಳೆತ ನದಿಗೆ ಹೋಲಿಸಿದ್ದರು. ಬಿ.ಎಸ್.ವೈ ಬಿ.ಜೆ.ಪಿ ತೊರೆದಿರುವುದು ಗಂಗಾ ನದಿ ಪವಿತ್ರವಾದಂತೆ ಆಗಿದೆ ಎಂದಿದ್ದ ಮಾಜಿ ಸಚಿವೆ ಎಸ್. ಈಶ್ವರಪ್ಪನವರು ಈಗ ತಮಗೆ ವಿಧಾನಸಭಾಟಿಕೆಟ್ ಪಡೆಯುವ ಏಕೈಕ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪರವರನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ.