ಶಿವಮೊಗ್ಗ ವಿದ್ಯಾನಗರದ ಮಿಸ್ ಫೈಯರ್ ಕೆಸ್ ನಡೆದಿದೆ.
ಕಳೆದ ರಾತ್ರಿ ಮಂಜುನಾಥ್ ಓಲೇಕರ್ ಎಂಬಾತನ ಡಬಲ್ ಬ್ಯಾರಲ್ ಗನ್ ನಿಂದ ಮಿಸ್ ಫೈಯರ್ ಆಗಿತ್ತು.
ವಿನಯ್ (34) ಅವರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿನಯ್ ಮೂಲತಃ ಹೊಸನಗರದವರಾಗಿದ್ದಾರೆ. ವಾಲಿಬಾಲ್ ಆಟಗಾರನಾಗಿದ್ದರು.
ಜಿಮ್ಮಿ ಚಾರ್ಜ್ ವಾಲಿಬಾಲ್ ಕ್ಲಬ್ ನಲ್ಲಿ ಅನೇಕ ವರ್ಷಗಳ ಕಾಲ ಆಟ ವಾಡಿದ್ದರು.
ನಿನ್ನೆ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ಗನ್ ಲೋಡ್ ಮಾಡುವಾಗ ಈ ಘಟನೆ ಸಂಭವಿಸಿದೆ. ಮಂಜುನಾಥ್ ಓಲೇಕರ್ ಅವರು ಏರ್ ಫೈಯರ್ ಮಾಡುವಾಗ ಈ ಘಟನೆ ಸಂಭವಿಸಿದೆ.
ಈ ಘಟನೆಯ ನಂತರ ಆತಂಕಕ್ಕಿಡಾಗಿ ಮಂಜುನಾಥ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಂಜುನಾಥ್ ಅವರ ಮಗ ಸಂದೀಪ್ ಮತ್ತು ಮೃತ ವಿನಯ್ ಈರ್ವರೂ ಗೆಳೆಯರಾಗಿದ್ದರು ಎಂದು ತಿಳಿದುಬಂದಿದೆ.