ವಾಗೀಶ ಆರಾಧ್ಯ ಮಠದವರ ಮೊದಲ ಪ್ರಯತ್ನ ಪಂಜರವ ತೆರೆಯ ತೆರೆದುಬಿಡಿ ಕವನ ಸಂಕಲನದ ಬಿಡುಗಡೆ ಸಮಾರಂಭ ದಿನಾಂಕ 22-12-2022 ನಡೆಯಲಿದೆ.
ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ವಾಗೀಶ ಆರಾಧ್ಯ ಮಠ, ಗಣಿತ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕಲ್ಮನೆ, ಶಿಕಾರಿಪುರ ತಾಲೂಕು ಇವರು ಒಬ್ಬ ಹವ್ಯಾಸಿ ಬರಹಗಾರರಾಗಿದ್ದಾರೆ. ಇವರ ಕೆಲವು ಕವನಗಳನ್ನ ಕವನ ಸಂಕಲನದ ರೂಪದಲ್ಲಿ ಹೊರತರಬೇಕೆಂಬ ಇಚ್ಛೆಯಿಂದ ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ಮುದ್ರಣ ಮಾಡಿಸಿದ್ದಾರೆ. ಇದನ್ನು ಲೋಕಾರ್ಪಣೆ ಮಾಡಬೇಕೆಂಬ ಉದ್ದೇಶದಿಂದ ಡಿಸೆಂಬರ್ 22 ಗುರುವಾರದಂದು ಸಂಜೆ 6:00ಗೆ ಮಥುರ ಪ್ಯಾರಡೈಸ್, ಬಾಲ ರಾಜ್ ಅರಸ್ ರಸ್ತೆ ಇಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಆಸಕ್ತರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.