Friday, April 18, 2025
Friday, April 18, 2025

ಮೈಸೂರು ಮಾಹಿತಿ

Date:

ಚಾಮುಂಡಿ ಬೆಟ್ಟ :
ಪ್ರಸ್ತುತ ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಕ್ರಮೇಣ ನಗರ ಬೆಟ್ಟದ ಸುತ್ತ ಹರಡಿಕೊಳ್ಳುತ್ತಿದ್ದಂತೆ ಮೈಸೂರು ನಗರದ ಮದ್ಯ ಭಾಗದಲ್ಲಿದ್ದಂತೆ ಭಾಸವಾಗುತ್ತಿದೆ.


ಮೈಸೂರಿನ ಆಗ್ನೇಯಕ್ಕೆ ಪೂರ್ವಪಶ್ಚಿಮವಾಗಿ ಹಬ್ಬಿಕೊಂಡಿರುವ ಈ ಬೆಟ್ಟ ಸುಮಾರು 1073 ಮೀಟರ್ ಎತ್ತರವಿದೆ . ಬೆಟ್ಟದಸುತ್ತಲೂ ದಟ್ಟವಲ್ಲದಿದ್ದರೂ ಅರೆ ಅರಣ್ಯ ಪ್ರದೇಶವಿದೆ .ಈ ಅರಣ್ಯ ವನ್ನು ಚಾಮುಂಡೇಶ್ವರಿ ರಕ್ಷಿತಾರಣ್ಯ ಪ್ರದೇಶವಾಗಿ ಪರಿಗಣಿಸಲಾಗಿದ್ದು ಅನೇಕ ವನ್ಯ ಜೀವಿಗಳಿಗೆ ಆಶ್ರಯ ತಾಣವಾಗಿದೆ . ವಿಶಿಷ್ಟವಾಗಿ ಚಿರತೆ ಗಳು ಹಾಗೂ ವಿಷಯುಕ್ತ ಹಾವುಗಳು ಹೇರಳ ಎಂಬ ವದಂತಿ ಪ್ರಚಲಿತ ವಾಗಿದೆ .


ಪುರಾಣ ಪ್ರಸಿದ್ದವಾದ ಈ ಬೆಟ್ಟ ಪ್ರದೇಶ ಮಹಿಷಾಸುರ ಎಂಬ ಬಲಿಷ್ಠ ರಾಕ್ಷಸ ರಾಜ ನ ಆಳ್ವಿಕೆಗೆ ಒಳಪಟ್ಟಿತ್ತು . ಅವನ ದಬ್ಬಾಳಿಕೆ , ದೌರ್ಜನ್ಯ, ಉಪಟಳ ಕ್ಕೆ ಇತಿಶ್ರೀ ಹಾಡಲು ಶಕ್ತಿ ದೇವತೆ ಚಾಮುಂಡಿಯ ಅವತಾರ ತಾಳಿ ಉಗ್ರ ಯುದ್ಧ ಮಾಡಿ ಮಹಿಷಾಸುರನನ್ನು ಕೊಂದು ಜನರನ್ನು ರಕ್ಷಿಸಿ ದಳೆಂಬುದು ಪುರಾಣ ಪ್ರತೀತ. ಹಾಗಾಗಿ ಈ ಬೆಟ್ಟ ಚಾಮುಂಡಿ ಬೆಟ್ಟವೆಂದು ಪ್ರಸಿದ್ಧವಾಯಿತು . ಚಾಮುಂಡೇಶ್ವರಿ ಆರಾಧನೆಗೆ ಚಾಮುಂಡೇಶ್ವರಿ ದೇವಸ್ಥಾನವು ಸಹ ನಿರ್ಮಾಣಗೊಂಡಿತು.


ಇದಕ್ಕೂ ಪೂರ್ವ ಈ ಬೆಟ್ಟವನ್ನು ಮಹಾಬಲಚಲ”ವೆಂದು ಕರೆಯುತ್ತಿದ್ದರು . ಬೆಟ್ಟದ ಮೇಲೆ ಮಹಾಬಲೇಶ್ವರ ದೇವಸ್ಥಾನವಿದೆ .ಈ ದೇವಸ್ಥಾನ 10 ನೇ ಶತಮಾನದ ಪೂರ್ವದಲ್ಲೇ ನಿರ್ಮಾಣ ಗೊಂಡಿದ್ದು ಪುಣ್ಯ ಕ್ಷೇತ್ರವೆಂದು ಪರಿಗಣಿಸ ಲಾಗಿರುವುದಕ್ಕೆ ಹಾಗೂ 1128 ರಲ್ಲಿ ದತ್ತಿ ನೀಡಿರುವುದರ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ .


ಈ ಬೆಟ್ಟದಮೇಲೆ ಹೋಗಲು ಸುಮಾರು 1008 ಕಲ್ಲಿನ ಮೆಟ್ಟಲುಗಳಿವೆ . ಶಿವನ ವಾಹನ ನಂದಿ , ,ಮಹಿಷಾಸುರನ ಮೂರ್ತಿಗಳನ್ನೂ ಸಹ ಸ್ಥಾಪಿಸಲಾಗಿದೆ . 3000 ಅಡಿ ಎತ್ತರವಿರುವ ಬೆಟ್ಟದ ಮೇಲ್ನಿಂತು ಮೈಸೂರು ನಗರದ ಸುಂದರ ವಿಹಂಗಮ ನೋಟ ವನ್ನು ವೀಕ್ಷಿಸುವುದೇ ಒಂದು ಸಂಭ್ರಮ .
ಚಾಮುಂಡಿಬೆಟ್ಟ ಮೈಸೂರಿನ ಪ್ರಮುಖ

ಯಾತ್ರಾಸ್ಥಳ ಮತ್ತು ಪ್ರಮುಖ ಆಕರ್ಷಣೆ .

ಲೇ: ಎಂ ತುಳಸಿರಾಂ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....