Sunday, August 2, 2026
Sunday, August 2, 2026

ಬಿಗ್ ಬಾಸ್ ಸೀಸನ್ 9 ಇಂದಿನಿಂದ ಕಲರ್ಸ್ ವಾಹಿನಿಯಲ್ಲಿ ಆರಂಭ

Date:

ಕನ್ನಡ ಕಿರುತೆರೆಯ ಜನಪ್ರಿಯತೆ ಪಡೆದುಕೊಂಡಿರುವ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 9 ಇಂದು (ಸೆ.24)ರ ಸಂಜೆ 6ರಿಂದ ಆರಂಭವಾಗಲಿದೆ.

ಬಿಗ್‌ಬಾಸ್‌ ಇತಿಹಾಸದಲ್ಲೇ ಈ ಆವೃತ್ತಿಯು ಸುದೀರ್ಘವಾಗಿರಲಿದೆ. ಒಟ್ಟು 18 ಜನ ಸ್ಪರ್ಧಿಗಳ ನಡುವೆ ಬಿಗ್‌ಬಾಸ್‌ ಪಟ್ಟಕ್ಕೆ ಹಣಾಹಣಿ ಇರಲಿದೆ ಎಂದು ಕಲರ್ಸ್‌ ಕನ್ನಡ ಮಾಹಿತಿ ನೀಡಿದೆ.

ಬಿಗ್‌ಬಾಸ್‌ ಒಟಿಟಿ ಆವೃತ್ತಿ ಮುಗಿದ ಬೆನ್ನಲ್ಲೇ, 9ನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಶನಿವಾರ ಹಾಗೂ ಭಾನುವಾರ(ಸೆ.24-25ರಂದು) ನಟ ಕಿಚ್ಚ ಸುದೀಪ್ ಒಟ್ಟು 18 ಜನರನ್ನು ಬಿಗ್‌ಬಾಸ್ ಮನೆಯೊಳಕ್ಕೆ ಕಳುಹಿಸಿಕೊಡಲಿದ್ದಾರೆ. 100 ದಿನ ಈ ಬಿಗ್‌ಬಾಸ್ ಆಟ ನಡೆಯಲಿದೆ. ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಇದು ಪ್ರಸಾರವಾಗಲಿದೆ. 9ನೇ ಆವೃತ್ತಿ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆಗೆ 9 ಅನುಭವಿ ಸ್ಪರ್ಧಿಗಳು ಕಣದಲ್ಲಿರುತ್ತಾರೆ.

ಆದ್ದರಿಂದ, ಈ ಆವೃತ್ತಿಯನ್ನು ಪ್ರವೀಣರು ಮತ್ತು ನವೀನರ ಹಣಾಹಣಿ ಎಂದು ಕಲರ್ಸ್ ಕನ್ನಡ ಚಾನೆಲ್ ವರ್ಣಿಸಿದೆ.

9 ಅನುಭವಿ ಸ್ಪರ್ಧಿಗಳ ಪಟ್ಟಿಯಲ್ಲಿ ಒಟಿಟಿ ಆವೃತ್ತಿಯಲ್ಲಿ ಟಾಪ್ ಫೋರ್‌ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್‌ ಮತ್ತು ಸಾನ್ಯಾ ಅಯ್ಯರ್ ಇರುತ್ತಾರೆ. ಇವರ ಜೊತೆಗೆ ಹಿಂದಿನ ಬಿಗ್‌ಬಾಸ್ ಆವೃತ್ತಿಯಲ್ಲಿ ಆಡಿ ಜನಮೆಚ್ಚುಗೆ ಗಳಿಸಿದ 5 ಸ್ಪರ್ಧಿಗಳು ಇರಲಿದ್ದಾರೆ. ಈ ಪೈಕಿ ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌ ಹಾಗೂ ಅನುಪಮಾ ಗೌಡ ಮನೆ ಪ್ರವೇಶಿಸುವುದು ಖಚಿತವಾಗಿದೆ. ಇನ್ನುಳಿದವರು ಯಾರು ಎನ್ನುವ ಕುತೂಹಲವನ್ನು ಚಾನೆಲ್‌ ಇನ್ನೂ ಉಳಿಸಿಕೊಂಡಿದೆ.

ಇವರ ಜೊತೆಗೆ ಮನೆ ಪ್ರವೇಶಿಸಲಿರುವ 9 ಜನ ಹೊಸ ಸ್ಪರ್ಧಿಗಳು ಯಾರು ಎಂಬುವುದು ಇಂದು ಶನಿವಾರದ ಸಂಚಿಕೆಯಲ್ಲಿ ತಿಳಿಯಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...