Thursday, May 7, 2026
Thursday, May 7, 2026

ರಾಣಿ 2ನೇ ಎಲಿಜಬೆತ್ ಅವರು ಬರೆದಿರುವ ಪತ್ರ 2085ರವರೆಗೆ ಓದುವಂತಿಲ್ಲ

Date:

ಅದು 1986ರಲ್ಲಿ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರು ಬರೆದಿರುವ ಪತ್ರ. ಆದರೆ, ಈವರೆಗೆ ಅದನ್ನು ಯಾರೂ ಓದಿಲ್ಲ. ಅದರೊಳಗೆ ಏನಿದೆ ಎಂಬುದೂ ಗೊತ್ತಿಲ್ಲ. ಈಗ ರಾಣಿ ಬದುಕಿಲ್ಲ. ಹಾಗಂತ ಆ ಪತ್ರವನ್ನು ಈಗಲಾದರೂ ಓದಬಹುದೇ? ಎಂದರೆ ಅದೂ ಇಲ್ಲ.

2085ರವರೆಗೂ ಆ ಪತ್ರದಲ್ಲಿರುವ ಅಂಶಗಳು ರಹಸ್ಯವಾಗಿಯೇ ಇರಬೇಕು ಎಂಬುದು ಸ್ವತಃ ರಾಣಿಯ ಆಜ್ಞೆಯಾಗಿದೆ. ಈ ಸೀಕ್ರೆಟ್‌ ಪತ್ರ ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ವಿಕ್ಟೋರಿಯಾ ಕಟ್ಟಡದ ಕೋಣೆಯೊಂದರೊಳಗೆ ಭದ್ರವಾಗಿದೆ. ಅದನ್ನು ನಿರ್ಬಂಧಿ ಪ್ರದೇಶದಲ್ಲಿ ಗಾಜಿನ ಪೆಟ್ಟಿಗೆಯೊಂದರಲ್ಲಿ ರಕ್ಷಿಸಿಡಲಾಗಿದೆ.

ಪತ್ರದಲ್ಲಿ ಏನನ್ನು ಬರೆಯಲಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ರಾಣಿಯು ಸಿಡ್ನಿಯ ಜನರಿಗೆ ಈ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಪತ್ರದ ಹೊರಗೆ ನೀಡಿರುವ ಟಿಪ್ಪಣಿಯಲ್ಲಿ ಸಿಡ್ನಿ ಮೇಯರ್‌ ಅನ್ನು ಉದ್ದೇಶಿಸಿ, “ನೀವೇ ಆಯ್ಕೆ ಮಾಡಿರುವ ದಿನಾಂಕದಂತೆ 2085ರಲ್ಲಿ ನೀವು ಈ ಪತ್ರವನ್ನು ತೆರೆಯಬೇಕು ಮತ್ತು ಸಿಡ್ನಿ ಜನರಿಗೆ ನಾನು ನೀಡಿರುವ ಸಂದೇಶವನ್ನು ರವಾನಿಸಬೇಕು’ ಎಂದು ಬರೆಯಲಾಗಿದೆ.

ಈ ನಡುವೆ, ಬ್ರಿಟನ್‌ ರಾಜನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅಲ್ಲಿನ ಸಂಸತ್‌ ಉದ್ದೇಶಿಸಿ ರಾಜ ಮೂರನೇ ಚಾರ್ಲ್ಸ್‌ ಮಾತನಾಡಿದ್ದಾರೆ.

“ಸಾಂವಿಧಾನಿಕ ಆಡಳಿತದ ಅಮೂಲ್ಯ ತತ್ವಗಳನ್ನು ಎತ್ತಿಹಿಡಿಯುವಲ್ಲಿ ದಿ. ರಾಣಿ ಎರಡನೇ ಎಲಿಜಬತ್‌ ಅವರ ನಿಸ್ವಾರ್ಥ ಕರ್ತವ್ಯದ ಹಾದಿಯನ್ನು ಅನುಸರಿಸಲಾಗುವುದು,” ಎಂದು ವಾಗ್ಧಾನ ಮಾಡಿದ್ದಾರೆ.

ಸೆ.19ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಅಬ್ಬೇಯಲ್ಲಿ ನಡೆಯಲಿರುವ ರಾಣಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ವಿಶ್ವನಾಯಕರಿಗೆ ಹಲವು ಷರತ್ತುಗಳು ಹಾಗೂ ನಿಬಂಧನೆಗಳನ್ನು ವಿಧಿಸಲಾಗಿದೆ. “ಖಾಸಗಿ ವಿಮಾನಗಳಲ್ಲಿ ಬರುವಂತಿಲ್ಲ, ಬದಲಿಗೆ ವಾಣಿಜ್ಯ ವಿಮಾನಗಳ ಮೂಲಕ ಆಗಮಿಸಿ. ಯು.ಕೆ.ಗೆ ಪ್ರವೇಶಿಸಿದ ಬಳಿಕವೂ ಹೆಲಿಕಾಪ್ಟರ್‌ ಬಳಸುವಂತಿಲ್ಲ. ಅಂತ್ಯಕ್ರಿಯೆ ನಡೆಯುವಲ್ಲಿಗೆ ನಿಮ್ಮ ಸ್ವಂತ ಸರ್ಕಾರಿ ಕಾರುಗಳಲ್ಲಿ ಬರುವಂತಿಲ್ಲ. ಬದಲಿಗೆ ನಾವೇ ಕಳುಹಿಸಿಕೊಡುವ ಬಸ್‌ ಮೂಲಕವೇ ಆಗಮಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಹತ್ತು ಚಿನ್ನದ ಪದಕ ಮುಡಿಗೇರಿಸಿದ ಕುವೆಂಪು ವಿವಿಗೇ ಪ್ರಥಮ ವಿದ್ಯಾರ್ಥಿಎಂ.ಎ.(ಕನ್ನಡ) ವಿಭಾಗದ ಪ್ರತಿಭೆ, ಹೆಚ್.ಎಂ.ಅಭಿಷೇಕ್.

Kuvempu University ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಗಮನ...

Kuvempu university ಕುವೆಂಪು ವಿವಿಯಿಂದ ಗೌರಗ ಡಾಕ್ಟರೇಟ್ ಪಡೆದ ಮಹನಿಯರ ಮಾಹಿತಿ

Kuvempu university ಕುವೆಂಪು ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ನಾಡಿನ ಮೂವರು ಗಣ್ಯ...

Kuvempu University ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ಎತ್ತರಗಳನ್ನ ಸಾಧಿಸಿ,ದೇಶದವಾಭಿವೃದ್ಧಿಗೆ ಕೊಡುಗೆ ನೀಡಿ- ಗೌ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Kuvempu University “ಕೇವಲ ಉದ್ಯೋಗಾಕಾಂಕ್ಷಿಯಾಗಿರದೆ ಅವಕಾಶಗಳ ಸೃಷ್ಟಿಕರ್ತರಾಗಿ. ಸ್ಟಾರ್ಟ್‌ಅಪ್ ಸಂಸ್ಕೃತಿ, ನಾವೀನ್ಯತೆ...

S.N. Channabasappa ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಸೇವೆ ಅಪ್ರತಿಮ- ಎಸ್.ಎನ್.ಚನ್ನಬಸಪ್ಪ

S.N. Channabasappa "ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿ ಕನ್ನಡ...