Sunday, June 28, 2026
Sunday, June 28, 2026

ಮುನಿದ ಮಣಿಕಂಠ ಸಕ್ರಬೈಲ್ ನಲ್ಲಿ ಎಲ್ಲರಿಗೂ ಟೆನ್ಷನ್

Date:

ಶಿವಮೊಗ್ಗದ ಸಕ್ರೆ ಬೈಲ್ ಆನೆ ಬಿಡಾರದ ಪುಂಡನೆ ಎಂದು ಖ್ಯಾತಿ ಪಡೆದಿರುವ ಮಣಿಕಂಠ ಎಂಬ ಆನೆ ನಿನ್ನೆ ಶನಿವಾರ ಮತ್ತೆ ಮಾವುತನ ಮೇಲೆ ದಾಳಿಗೆ ಯತ್ನಿಸಿದೆ.

ನಿನ್ನೆ ಸಕ್ರೆ ಬೈಲ್ ಆನೆ ಬಿಡಾರದಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದ್ದ ಮಣಿಕಂಠನನ್ನು ಕಾವಾಡಿ ಇಮ್ರಾನ್ ಕಾಡಿಗೆ ಕರೆದ್ಯೊಯಲು ಅದರ ಹೆಗಲು ಏರಿದ್ದ, ಮಾವುತ ಕಲಿಲ್ ಮಣಿಕಂಠನನ್ನು ಹಿಂಬಾಲಿಸಿಕೊಂಡು ಸ್ಕೂಟರಲ್ಲಿ ಹೊರಟಿದ್ದರು. ಆದರೆ ಮಾವುತನ ಮೇಲೆ ಸೇಡು ತೀರಿಸಿಕೊಳ್ಳಲೆಂದೆ ಆತನ ಬರುವಿಕೆಗಾಗಿ ಕಾದು ಕೂತಿದ್ದ ಮಣಿಕಂಠ ಎಂಬ ಆನೆ ಸಕ್ರೆ ಬೈಲ್ ಜಂಗಲ್ ರೆಸಾರ್ಟ್ ಗೇಟ್ ಬಳಿ ನಿಂತು ಬಿಟ್ಟ. ಹಿಂಬದಿಯಿಂದ ಮಾವುತ ಬರುತ್ತಿರುವುದನ್ನು ಮಣಿಕಂಠ ಎಂಬ ಆನೆ ಗಮನಿಸಿ ಏಕಾಏಕಿ ಅಟ್ಟಾಡಿಸಿಕೊಂಡು ಬಂದಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಕ್ಷಣವೇ ಮಾವುತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲೇ ಹತ್ತಿರದಲ್ಲಿ ನಿಂತಿರುವ ಕಾರಿನಲ್ಲಿ ಇಬ್ಬರು ಮಹಿಳೆಯರು ಕೂತಿದ್ದರು. ಅದೃಷ್ಟವಶಾತ್ ಯಾವುದೇ ತೊಂದರೆಗಳಾಗಿಲ್ಲ.

ತಕ್ಷಣವೇ ವೈದ್ಯರು ಮಣಿಕಂಠ (ಆನೆ)ನಿಗೆ ಅರವಳಿಕೆ ಮದ್ದು ನೀಡಿ ಪಳಗಿಸಿದ್ದಾರೆ. ನಂತರ ಅಲ್ಲಿನ ಕುಮ್ಕಿ ಸಹಕಾರದಿಂದ ಉಳಿದ ಮಾವುತ ಕಾವಾಡಿಗಳು ಮಣಿಕಂಠನನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಾದಕ ವಸ್ತುಗಳ ಸಾಗಾಣೆ ಮತ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ದಿಟ್ಟಕ್ರಮ : ಬಿ.ನಿಖಿಲ್

ಶಿವಮೊಗ್ಗ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಣೆ,...

B.Y. Raghavendra ಶ್ರೀ ಕೆಂಪೇಗೌಡರು ದೂರದೃಷ್ಟಿಯಿಂದ ನಾಡನ್ನು‌ ಕಟ್ಟಿ ಮಾದರಿಯಾಗಿದ್ದಾರೆ : ಬಿ.ವೈ.ರಾಘವೇಂದ್ರ

B.Y. Raghavendra ನಾಡಪ್ರಭು ಶ್ರೀ ಕೆಂಪೇಗೌಡರು ಓರ್ವ ದಕ್ಷ ಆಡಳಿತಗಾರ, ಅಪ್ರತಿಮ...