ಭಾರತೀಯ ಸೇನೆಯ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ವಿರೋಧಿಸಿದ್ದ ಕಾಂಗ್ರೆಸ್ಗೆ ತೀವ್ರ ಮುಜುಗರ ಎದುರಾಗಿದೆ. ಸಶಸ್ತ್ರ ಪಡೆಗಳಿಗೆ ವಿವಾದಾತ್ಮಕ ಅಗ್ನಿಪಥ್ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಲು ಬರೆದಿದ್ದ ಪತ್ರಕ್ಕೆ ಕಾಂಗ್ರೆಸ್ ಇಂದು ದೊಡ್ಡ ಮುಖಭಂಗವನ್ನು ಎದುರಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ವಿರೋಧಿಸಿ ಬರೆದಿದ್ದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸಮಿತಿಯು 20 ಸದಸ್ಯರನ್ನು ಹೊಂದಿದೆ. 13 ಲೋಕಸಭೆಯಿಂದ ಹಾಗೂ ಸುಮಾರು 7 ರಾಜ್ಯಸಭೆಯ ಸದಸ್ಯರನ್ನು ಈ ಸಮಿತಿಯು ಒಳಗೊಂಡಿದೆ. ಈ ಸಮಿತಿಗೆ ನೀಡಲು ಕಾಂಗ್ರೆಸ್ ಈ ಪತ್ರ ಬರೆದಿತ್ತು ಎನ್ನಲಾಗಿದೆ.
ಈ ಮುನ್ನ ಮನೀಷ್ ತಿವಾರಿ ಅವರು ಅಗ್ನಿಪಥ್ ಯೋಜನೆಗೆ ಮೌಖಿಕವಾಗಿ ವಿರೋಧವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನಿಲುವನ್ನು ಬೆಂಬಲಿಸಿದ್ದರು. ಇಂದು ಅವರು ಭಾರತೀಯ ಸೇನೆಯ ಆಧುನೀಕರಣದ ಪರವಾಗಿದ್ದೇನೆ. ಆದರೂ ಅಗ್ನಿಪಥ್ ಅನುಷ್ಠಾನಕ್ಕೆ ವಿರುದ್ಧವಾಗಿದ್ದೇನೆ ಎಂದು ತಿಳಿಸಿದ್ದಾರೆ. ಆದರೂ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಬರೆದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.