Tuesday, April 21, 2026
Tuesday, April 21, 2026

ಸೋಲಾರ್ ವಾಟರ್ ಹೀಟರ್ ನ್ಯೂನತೆ: ಗ್ರಾಹಕರ ಪರ ತೀರ್ಪು

Date:

ಎಕ್ಸಿಸ್ ಟೆಕ್ನಾಲಜಿಸ್ ಬೆಂಗಳೂರು ಇವರ ವಿರುದ್ದ ಅರ್ಜಿದಾರ ರಾಜೇಶ್‍ಎ.ಜಿ ಇವರು ತಾವು ಖರೀದಿಸಿದ ಸರಕಿನ ಸೇವಾನ್ಯೂನ್ಯತೆಗಾಗಿ ಸೂಕ್ತ ಪರಿಹಾರ ಕೋರಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಪೀಠವು ಅರ್ಜಿದಾರರಿಗೆ ಸರಕಿನ ಹಣ ಮತ್ತು ನ್ಯಾಯಾಲಯದ ಮತ್ತು ಇತರೆ ಖರ್ಚುವೆಚ್ಚ ಪಾವತಿಸುವಂತೆ ಆದೇಶಿಸಿದೆ.

ಅರ್ಜಿದಾರರು 2019-20 ರಲ್ಲಿ ಗೃಹೋಪಯೋಗಕ್ಕಾಗಿ ಎಕ್ಸಿಸ್ ಟೆಕ್ನೋಲಜಿಸ್ ಬೆಂಗಳೂರು ಇವರಿಂದ ಸೋಲಾರ್ ವಾಟರ್ ಹೀಟರ್‍ನ್ನು ರೂ.40,000 ಪಾವತಿಸಿ ಖರೀದಿಸಿರುತ್ತಾರೆ. ವಾಟರ್‍ಹೀಟರ್ ನಲ್ಲಿದ್ದ ನ್ಯೂನ್ಯತೆಗಳನ್ನು ತಿಳಿಸಿ ಸಾಕಷ್ಟು ಬಾರಿ ಸರಿಪಡಿಸಿಕೊಂಡರೂ ಸಮಸ್ಯೆ ಪರಿಹಾರವಾಗದೇ ಅರ್ಜಿದಾರರು ಲಿಖಿತ ನೋಟಿಸಿನ ಮೂಲಕ ವಿನಂತಿಸಿದರೂ ಎದುರುದಾರರು ಪ್ರತಿಕ್ರಿಯಿಸಿದ ಕಾರಣ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿರುತ್ತಾರೆ.

ವಾಸ್ತವಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. ಪೀಠವು ಎದುರುದಾರರಿಗೆ ವಾಟರ್ ಹೀಟರ್ ಹಿಂಪಡೆಯುವ ಮುಖಾಂತರ ಖರೀದಿಸಿದ ಮೊತ್ತ ರೂ.40,000 ಗಳನ್ನು ಖರೀದಿಯ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ವಾರ್ಷಿಕ ಶೇ.7 ಬಡ್ಡಿ ದರದಂತೆ ಹಿಂತಿರುಗಿಸಲು ಮತ್ತು ನ್ಯಾಯಾಲಯ ಇತರೆ ವೆಚ್ಚ ರೂ.18000 ಗಳನ್ನು ಹಿಂತಿರುಗಿಸಲು ಆದೇಶಿಸಿದೆ.

ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಪೀಠವು ಜು.1 ರಂದು ಈ ತೀರ್ಪು ನೀಡಿದೆ ಎಂದು ಆಯೋಗದ ಸಹಾಯಕ ನೋಂದಣಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಕ್ರಾಂತಿಕಾರಿ ಬಸವಣ್ಣನವರ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡೋಣ- ಬಿ.ವೈ.ರಾಘವೇಂದ್ರ

B.Y. Raghavendra ಕಾಯಕ- ದಾಸೋಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರಿದ...

Bharat Scouts and Guides ಕೃಷಿ ಕ್ಷೇತ್ರ ಮಾಹಿತಿಯಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯ- ಕೆ.ರವಿ

Bharat Scouts and Guides ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ...

Klive special Article “ಶಂಕರಂ ಲೋಕ ಶಂಕರಂ” ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ

Klive special Article ಶ್ರೀಶಂಕರಾಚಾರ್ಯ ಗುರುಗಳು (ಶ್ರೀಶಂಕರಜಯಂತಿಯ ಸಂದರ್ಭದಲ್ಲಿ)ಪ್ರತಿವರ್ಷ ವೈಶಾಖಮಾಸದ...

RM Manjunath Gowda ಹುಲಿಕಲ್ ಘಾಟಿ ಪ್ರಕರಣ.ಇಂಜಿನಿಯರುಗಳೇ ಹೊಣೆ. ಎಫ್ ಐ ಆರ್ ದಾಖಲಿಸಲು ಎಸ್ ಪಿ.ಅವರಿಗೆ ಮನವಿ ಮಾಡುವೆ- ಆರ್.ಎಂ.ಮಂಜುನಾಥ ಗೌಡ.

RM Manjunath Gowda ಹುಲಿಕಲ್ ಘಾಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮಕೆನಾಡು...