Sunday, May 24, 2026
Sunday, May 24, 2026

ಡಾ.ಬಿ.ಸಿ.ರಾಯ್ ವೈದ್ಯರ ದಿನದ ಕಾರಣೀಭೂತ ವ್ಯಕ್ತಿತ್ವ

Date:

ಭಾರತದಲ್ಲಿ ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿ ಡಾ. ಬಿಧಾನ್ ಚಂದ್ರ ರಾಯ್ ಸ್ಮರಣಾರ್ಥ ಜು.1ರಂದು ‘ರಾಷ್ಟ್ರೀಯ ವೈದ್ಯರ ದಿನ’ ಆಚರಿಸಲಾಗುತ್ತದೆ.

1882ರ ಜು.1ರಂದು ಜನಿಸಿದ ರಾಯ್, 1962ರಲ್ಲಿ ಅಂದೇ ನಿಧನರಾದರು. ಅಸಾಧಾರಣ ವೈದ್ಯರಾಗಿದ್ದ ಅವರ ಗಣನೀಯ ಸೇವೆ ಪರಿಗಣಿಸಲು 1961ರ ಫೆ. 4ರಂದು ಕೇಂದ್ರ ಸರ್ಕಾರ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಾತ್ರವಲ್ಲ, ಅವರ ಬದುಕು ಹಾಗೂ ಸೇವೆಯ ನೆನಪಿಗಾಗಿ 1991ರ ಜು.1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಘೋಷಿಸಿತು. ಅಪ್ರತಿಮ ವೈದ್ಯರಾಗಿದ್ದ ಡಾ. ರಾಯ್, ತಮ್ಮ ದೂರದೃಷ್ಟಿಯ ನಿಲುವುಗಳಿಂದ ವೈದ್ಯಲೋಕಕ್ಕೆ ಅವಿಸ್ಮರಣೀಯ ಕೊಡುಗೆ ಕೊಟ್ಟರು. ಮೇಲು- ಕೀಳು ಎನ್ನದೆ, ಜಾತಿಭೇದ ಮಾಡದೆ ಎಲ್ಲರನ್ನೂ ಒಂದೇ ರೀತಿ ನೋಡಿದ ಜನರ ಮೆಚ್ಚುಗೆ ಗಳಿಸಿದ್ದರು.

ವೈದ್ಯರು ಸಾಮಾನ್ಯವಾಗಿ ಸುದೀರ್ಘ ಕೆಲಸ ಮತ್ತು ರೋಗಿಗಳ ಭಾವನೆಗಳಿಗೆ ಸ್ಪಂದಿಸುವುದರ ಜತೆಗೆ ಚಿಕಿತ್ಸೆ ನೀಡುವುದು. ಗಂಭೀರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಸವಾಲಾಗಿರುತ್ತದೆ.
ಕೋವಿಡ್ ಅಬ್ಬರದಿಂದ ಜಗತ್ತು ತಲ್ಲಣಗೊಂಡಿದ್ದರೂ ದೈವಸ್ವರೂಪಿಗಳಂತೆ ಪ್ರಾಣವನ್ನೇ ಒತ್ತೆ ಇಟ್ಟು ಸೇವೆ ನೀಡುತ್ತಿದ್ದಾರೆ ವೈದ್ಯರು. ಆ ಮೂಲಕ ‘ವೈದ್ಯೋ ನಾರಾಯಣ ಹರಿಃ’ ಎಂಬ ಮಾತಿಗೆ ಅರ್ಥ ತುಂಬಿದ್ದಾರೆ. ವೈದ್ಯರ ನಿಸ್ವಾರ್ಥ ಸೇವೆಯಿಂದ ಜು. 1ರ ವೈದ್ಯರ ದಿನ ಸಾರ್ಥಕತೆ ಪಡೆದುಕೊಂಡಿದೆ.
ವೈಯಕ್ತಿಕ ಜೀವನ ಮತ್ತು ಸಮುದಾಯಗಳಿಗೆ ವೈದ್ಯರ ಕೊಡುಗೆಗಳನ್ನು ಗುರುತಿಸಲು ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

ಒಂದೊಂದು ದೇಶದಲ್ಲಿ ಒಂದೊಂದು ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಜು.1ರಂದು ಆಚರಿಸಲಾಗುತ್ತದೆ. ಆರೋಗ್ಯ ಕ್ಷೇತ್ರದ ಫಲಾನುಭವಿಗಳು ಹಾಗೂ ರೋಗಿಗಳು ಆಚರಿಸಬೇಕೆಂದು ಭಾವಿಸಲಾಗಿದ್ದರೂ ಸಾಮಾನ್ಯವಾಗಿ ಆರೋಗ್ಯ ಸಂಸ್ಥೆಗಳು ಆಚರಿಸುತ್ತವೆ. ವೈದ್ಯರ ಕೊಡುಗೆಗಳನ್ನು ಹಾಗೂ ಅವರ ಸೇವೆಯನ್ನು ಸ್ಮರಿಸುವ ದಿನವಾಗಿದೆ.

ರಾಷ್ಟ್ರೀಯ ವೈದ್ಯರ ದಿನದ ಮುನ್ನಾದಿನದಂದು ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಗ್ರಾಮಗಳು ಇತ್ಯಾದಿಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
ಸೆಮಿನಾರ್‌ಗಳನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸುತ್ತದೆ. ವಿವಿಧ ವೈದ್ಯಕೀಯ ಕಾಲೇಜುಗಳು ಒಂದು ದಿನದ ಸಮ್ಮೇಳನ ಮತ್ತು ವೈದ್ಯಾಧಿಕಾರಿಗಳನ್ನು ಉದ್ದೇಶಿಸಿ ಸೆಮಿನಾರ್‌ಗಳನ್ನು ಆಯೋಜಿಸಲಾಗುತ್ತದೆ.

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಮುನ್ನಾದಿನದಂದು ವಿವಿಧ ವೈದ್ಯಕೀಯ ಸಂಸ್ಥೆಗಳು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತವೆ. ಗಾಯಾಳುಗಳಲ್ಲಿ ವೈದ್ಯರ ಅದ್ಭುತ ಪ್ರಯತ್ನಗಳಿಗೆ ಪ್ರಶಸ್ತಿ ನೀಡುವುದು ರಾಷ್ಟ್ರೀಯ ವೈದ್ಯರ ದಿನದಂದು ಸಾಕ್ಷಿಯಾದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ.

ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ವಿವಿಧ ಚಿತ್ರಗಳು, ಸಂದೇಶಗಳು, ಉಲ್ಲೇಖಗಳು ಮತ್ತು ಟ್ಯಾಗಿಂಗ್ ಚಟುವಟಿಕೆಗಳನ್ನು ವೀಕ್ಷಿಸಲಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು...

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...