Thursday, July 9, 2026
Thursday, July 9, 2026

ಸೇರಿಗೆ ಸವ್ವಾಸೇರು… ಈ ಘಟನೆ!

Date:

ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿಚಿತ್ರ ಘಟನೆ ನಡೆದಿದೆ.

ಲೈನ್‌ಮ್ಯಾನ್‌ ಒಬ್ಬಾತನ ಬೈಕ್‌ಗೆ ದಾಖಲೆ ಪತ್ರಗಳಲ್ಲಿ ಎಂದು ಪೊಲೀಸ್‌ ಅಧಿಕಾರಿ ದಂಡ ವಿಧಿಸಿದರು. ಇದಕ್ಕೆ ಪ್ರತಿಯಾಗಿ ಇದೇ ಲೈನ್‌ಮ್ಯಾನ್‌, ಪೊಲೀಸ್‌ ಠಾಣೆಗೆ ಮೀಟರ್‌ ಸಂಪರ್ಕವಿಲ್ಲ ಎಂದು ಪವರ್‌ ಕಟ್‌ ಮಾಡಿ ಸುದ್ದಿಯಾಗಿದ್ದಾರೆ.

ಹರ್ದಾಸ್‌ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ತನಿಖೆಗೆ ವಿದ್ಯುತ್‌ ಇಲಾಖೆ ಆದೇಶ ನೀಡಿದೆ.

ಹರ್ದಾಸ್‌ಪುರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್‌ ಅಧಿಕಾರಿ ಮೋದಿ ಸಿಂಗ್‌ ವಾಹನ ತಪಾಸಣೆ ಮಾಡುತ್ತಿದ್ದರು. ಆಗ ಅದೇ ದಾರಿಯಲ್ಲಿ ಲೈನ್‌ಮ್ಯಾನ್‌ ಭಗವಾನ್‌ ಸ್ವರೂಪ್ ಬೈಕ್‌ ಚಲಾಯಿಸಿಕೊಂಡು ಬಂದಿದ್ದರು. ಅವರ ಬೈಕ್‌ ಅನ್ನು ತಡೆದ ಮೋದಿ ಸಿಂಗ್‌, ಅಗತ್ಯ ದಾಖಲೆಗಳನ್ನು ತೋರಿಸಲು ಹೇಳಿದ್ದರು. ಈಗ ಇಲ್ಲ, ಮನೆಗೆ ಹೋಗಿ ತಂದು ತೋರಿಸುವೆ ಎಂದು ಭಗವಾನ್‌ ಮನವಿ ಮಾಡಿದ್ದರು.

ಆದರೆ, ಭಗವಾನ್‌ ಅವರ ಮನವಿಯನ್ನು ತಿರಸ್ಕರಿಸಿದ ಮೋದಿ ಸಿಂಗ್‌, 500 ರೂಪಾಯಿ ದಂಡ ಪಾವತಿಸುವಂತೆ ಚಲನ್‌ ನೀಡಿದ್ದರು. ಇದರಿಂದ ನೊಂದ ಭಗವಾನ್‌, ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ವಿವರ ನೀಡಿದ್ದ. ಅಲ್ಲದೆ, ಪೊಲೀಸ್‌ ಠಾಣೆಯ ಪವರ್‌ ಕಟ್‌ ಮಾಡುವಂತೆ ಕೇಳಿಕೊಂಡಿದ್ದ.

ಶನಿವಾರ ರಾತ್ರಿ ವಿದ್ಯುತ್‌ ಇಲಾಖೆ ಸಿಬ್ಬಂದಿ ಹರ್ದಾಸ್‌ಪುರ ಪೊಲೀಸ್‌ ಠಾಣೆಯ ಪವರ್‌ ಕಟ್‌ ಮಾಡಿದ್ದರು. ಏಕೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಕೇಳಿದಾಗ ಭಗವಾನ್‌ ಹೆಸರು ಪ್ರಸ್ತಾಪವಾಗಿದೆ. ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆತ, ಪೊಲೀಸ್‌ ಠಾಣೆಯಲ್ಲಿ ವಿದ್ಯುತ್‌ ಮೀಟರ್‌ ಇರಲಿಲ್ಲ. ಹೀಗಾಗಿ ಅದು ಅಕ್ರಮ ವಿದ್ಯುತ್‌ ಸಂಪರ್ಕ ಎಂದು ಹೇಳಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...