Friday, April 25, 2025
Friday, April 25, 2025

ವಿದ್ಯಾರ್ಥಿಗಳು ಕಷ್ಟವೆನಿಸುವ ಪಠ್ಯ ವಿಷಯಗಳನ್ನ ಪ್ರೀತಿಸಬೇಕು

Date:

ವಿದ್ಯಾರ್ಥಿಗಳು ತಮಗೆ ಕಷ್ಟವೆನಿಸುವ ವಿಷಯಗಳನ್ನು ಮೊದಲು ಪ್ರೀತಿಸಬೇಕು. ಆಗ ಅದು ನಿಮ್ಮದಾಗಿ ಅರ್ಥವಾಗುತ್ತದೆ, ಸುಲಭವಾಗುತ್ತದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಕಿವಿಮಾತು ಹೇಳಿದರು.

ಅವರಿಂದು ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಹಾಗೂ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶಿಸ್ತು, ಶ್ರಮ, ಶ್ರದ್ಧೆಯಿಂದ ಪಾಠ ಕೇಳಿ ಅದನ್ನು ಬುದ್ಧಿ, ಕರುಣೆ ಮತ್ತು ಕೌಶಲ್ಯದೊಂದಿಗೆ ಜೀವನದಲ್ಲಿ ಅಳವಡಿಸಿ ಬಳಸಿಕೊಳ್ಳಬೇಕು ಆಗ ಯಶಸ್ಸು ಸಾಧ್ಯ, ಪರಿಪೂರ್ಣತೆ ನಮ್ಮಲ್ಲಿ ಅಡಗಿರುವ ವಿದ್ಯೆ, ಅದನ್ನು ಹೊರ ತೆಗೆಯುವುದು ಶಿಕ್ಷಕರ ಪಾತ್ರ, ಶಿಕ್ಷಕರು ವಿದ್ಯಾರ್ಥಿಗಳಿಗೆ ಎರಡನೇ ಪೋಷಕರು ಇದ್ದಂತೆ ಎಂದರು.

ಪದವಿಪೂರ್ವ ಶಿಕ್ಷಣವು ನಿರ್ಣಾಯಕ ಘಟ್ಟವಾಗಿದ್ದು ವಿದ್ಯಾರ್ಥಿಗಳು ಮುಂದೆ ತಾವು ಏನಾಗಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ಪರ್ವ ಕಾಲವಿದು ಎಂದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ನಸೀಮಾ ಬಾನು, ಉದಯ್ ಕಿರಣ್, ಹಾಗೂ ಬಾಲಾಜಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಮ್ಮ ಕಾಲೇಜು ಜೀವನದ ಅನುಭವಗಳನ್ನು ಹಾಗೂ ತಮ್ಮ ಸಾಧನೆಗೆ ರೂಢಿಸಿಕೊಂಡ ಮಾರ್ಗಗಳನ್ನು ವಿವರಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಪಿ.ರು ದ್ರಪ್ಪನವರು ಅಂದಂದಿನ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳು ಅಂದೇ ಅರ್ಥ ಮಾಡಿಕೊಂಡಲ್ಲಿ ಪರೀಕ್ಷೆಗಳಿಗೆ ಭಯಪಡುವ ಸಂದರ್ಭ ಬರುವುದಿಲ್ಲ, ಇದಕ್ಕೆ ಆಸಕ್ತಿ ಬಹುಮುಖ್ಯ ಎಂದರು.

ಗಣಿತ ಉಪನ್ಯಾಸಕ ಕೆ.ಸಿ.ಶಿವಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಚೈತ್ರ ಮತ್ತು ಸಂಗಡಿಗರು ಹಾಡಿದರು. ಸ್ವಾಗತವನ್ನು ಇಂಗ್ಲಿಷ್ ಭಾಷಾ ಉಪನ್ಯಾಸಕ ಕೆ.ಸಿ.ವಿಜಯಕುಮಾರ್ ಕೋರಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಅಧ್ಯಾಪಕಿ ಶರ್ಮಿಳಾ ಮಾಡಿದರು. ಕನ್ನಡ ಭಾಷಾ ಉಪನ್ಯಾಸಕ ಹೆಚ್.ಸಿ. ವಿನಯ್ ಕುಮಾರ್ ವಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ವನಮಹೋತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.

ಚಿತ್ರ ಹಾಗೂ ವರದಿ ಸೌಜನ್ಯ; ಎಚ್.ಬಿ.ಮಂಜುನಾಥ.
ದಾವಣಗೆರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...